ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶಿವಾಜಿ ಮೈಸೂರು ಇದೇ ಮೊದಲ ಬಾರಿಗೆ 'ಬೆಂಕಿಯ ಬಲೆ' ಎಂಬ ಚಿತ್ರವನ್ನು ನಿರ್ಮಿಸಿ ಜೊತೆಗೆ ನಾಯಕರಾಗಿ ಕೂಡಾ ನಟಿಸಿದ್ದಾರೆ. 1983 ರಲ್ಲಿ ಅನಂತ್ ನಾಗ್ ಹಾಗೂ ಲಕ್ಷ್ಮಿ ನಟಿಸಿದ್ದ 'ಬೆಂಕಿಯ ಬಲೆ' ಚಿತ್ರದ ಟೈಟಲನ್ನು ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ.
ಇನ್ನು 80 ಲಕ್ಷ ರೂಪಾಯಿ ಬಜೆಟ್ನ 'ಬೆಂಕಿಯ ಬಲೆ' ಚಿತ್ರದಿಂದ ಬಂದ ಸಂಪೂರ್ಣ ಲಾಭವನ್ನು ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡುವುದಾಗಿ ಶಿವಾಜಿ ಮೈಸೂರು ಹೇಳಿಕೊಂಡಿದ್ದಾರೆ. ಶಿವಾಜಿ ಮೈಸೂರು, ಹೆಸರೇ ಸೂಚಿಸುವಂತೆ ಸಾಂಸ್ಕೃತಿಕ ನಗರಿ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ. ಇವರು ವೃತ್ತಿಯಲ್ಲಿ ಸಿವಿಲ್ ಕಾಂಟ್ರ್ಯಾಕ್ಟರ್. "2005 ರಲ್ಲಿ ಕ್ಯಾನ್ಸರ್ನಿಂದ ನನ್ನ ತಾಯಿ ಲೀಲಾವತಿಯನ್ನು ಕಳೆದುಕೊಂಡೆ. ಅದಾದ ಕೆಲವು ವರ್ಷಗಳಲ್ಲಿ ತಂದೆ ನಾಗರಾಜ್ ಅವರನ್ನೂ ಕಳೆದುಕೊಂಡೆ. ಕ್ಯಾನ್ಸರ್ ರೋಗಿಗಳ ಕಷ್ಟ ಏನೆಂದು ನನಗೆ ಗೊತ್ತು. ಆದ್ದರಿಂದ ಚಿತ್ರದಿಂದ ಬಂದ ಹಣವನ್ನು ಕ್ಯಾನ್ಸರ್ ಆಸ್ಪತ್ರೆಗೆ ನೀಡಲಿದ್ದೇನೆ" ಎಂದು ಶಿವಾಜಿ ಮೈಸೂರು ಹೇಳಿದ್ದಾರೆ.