ಕರ್ನಾಟಕ

karnataka

ETV Bharat / sitara

ದೇಶದ್ರೋಹಿ ಹೇಳಿಕೆ ಆರೋಪ ಕೇಸ್: 3ನೇ ದಿನವೂ ವಿಚಾರಣೆಗೆ ಹಾಜರಾದ ಆಯಿಷಾ - Aisha Sultana

ಪೊಲೀಸರು, ಆಯಿಷಾ ಅವರ ಬ್ಯಾಂಕ್ ಖಾತೆ ಮತ್ತು ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ. ಆಯಿಷಾಳನ್ನು ಮೊದಲ ಬಾರಿಗೆ ಭಾನುವಾರ ವಿಚಾರಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ಒಬ್ಬರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

Aisha Sultana
ಆಯಿಷಾ ಸುಲ್ತಾನಾ

By

Published : Jun 24, 2021, 4:24 PM IST

ಕೊಚ್ಚಿ (ಕೇರಳ): ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ವಿರುದ್ಧದ ಹೇಳಿಕೆ ನೀಡಿ ದೇಶದ್ರೋಹ ಆರೋಪ ಎದುರಿಸುತ್ತಿರುವ ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಸತತ ಮೂರನೇ ದಿನ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ಪೊಲೀಸರು, ಆಯಿಷಾ ಅವರ ಬ್ಯಾಂಕ್ ಖಾತೆ ಮತ್ತು ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ. ಆಯಿಷಾಳನ್ನು ಮೊದಲ ಬಾರಿಗೆ ಭಾನುವಾರ ವಿಚಾರಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ಒಬ್ಬರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

ಇದನ್ನೂ ಓದಿ:ಬಂಧನದ ಭೀತಿ: ನಿರೀಕ್ಷಣಾ ಜಾಮೀನು ಕೋರಿ KTK ಹೈಕೋರ್ಟ್ ಮೊರೆ ಹೋದ Twitter MD

ಆಯಿಷಾ ಸುಲ್ತಾನಾ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಲಕ್ಷದ್ವೀಪ ಪೊಲೀಸರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ಭಾನುವಾರ ವಿಚಾರಣೆಗೆ ಹಾಜರಾದ ಬಳಿಕ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ.

ABOUT THE AUTHOR

...view details