ಕರ್ನಾಟಕ

karnataka

By

Published : Sep 24, 2019, 4:22 PM IST

ETV Bharat / sitara

ಗೀತಾ ಸಿನಿಮಾ ಪೈರಸಿ ತಡೆಯಲು ನಿರ್ಮಾಪಕನ ಹೊಸ ತಂತ್ರ : ಏನ್​ ಅದು ಪ್ಲಾನ್​..?

ನಿರ್ಮಾಪಕ ಸಯ್ಯದ್ ಸಲಾಂ ಪ್ರಕಾರ ಪೈರಸಿ ಪಿಡುಗು ಹೊರ ದೇಶಗಳಿಂದ ಆಗುತ್ತಿದೆ. ಗೀತಾ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಯಾದ ಮೂರು ವಾರಗಳ ನಂತರ ಹೊರ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಸಯ್ಯದ್​​ ಸಲಾಂ

ದೊಡ್ಡ ನಾಯಕರುಗಳ ಸಿನಿಮಾಕ್ಕೆ ‘ಪೈರಸಿ’ ಭೂತ ಕಾಡುತ್ತಿರುವ ವಿಷಯ ಗೊತ್ತೇ ಇದೆ. ಈಗಂತೂ ಪೈರಸಿ ಇಂದ ಸೂಪರ್ ಸ್ಟಾರ್ ವಾರ್ ಸಹ ಶುರುವಾಗಿದೆ. ಹಾಗೆ ‘ಗೀತಾ’ ಚಿತ್ರಕ್ಕೂ ಅದರ ಭಯ ಇದೆ. ಅದಕ್ಕೆ ನಿರ್ಮಾಪಕ ಸಯ್ಯದ್ ಸಲಾಂ ಹಲವಾರು ತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ.

ಸಯ್ಯದ್ ಸಲಾಂ ಪ್ರಕಾರ ಪೈರಸಿ ಪಿಡುಗು ಹೊರ ದೇಶಗಳಿಂದ ಆಗುತ್ತಿದೆ. ಗೀತಾ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಯಾದ ಮೂರು ವಾರಗಳ ನಂತರ ಹೊರ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಇದರ ಜೊತೆಗೆ ಪೊಲೀಸ್ ಇಲಾಖೆಗೆ ಪೈರಸಿ ತಡೆಯಲು ಅರ್ಜಿ ಹಾಕಿದ್ದಾರೆ. ಅಲ್ಲದೇ ‘ಗೀತಾ’ ಚಿತ್ರ ತಂಡದ ಸದಸ್ಯರುಗಳು ತಲಾ ಒಬ್ಬಬ್ಬರು ಒಂದೊಂದು ಚಿತ್ರಮಂದಿರದಲ್ಲಿ ಗಸ್ತು ತಿರುಗುತ್ತಾರೆ. ಚಿತ್ರ ಪ್ರದರ್ಶನದ ನಂತರ ಯಾರಾದರೂ ಮೊಬೈಲ್​​ನಲ್ಲಿ ಚಿತ್ರವನ್ನು ಸೆರೆ ಹಿಡಿಯುತ್ತಾರೆ ಎಂಬುದನ್ನೂ ಪತ್ತೆ ಹಿಡಿಯಲಾಗುತ್ತದೆ.

ಇವಿಷ್ಟೂ ಅಲ್ಲದೇ ನಿರ್ಮಾಪಕ ಸಯ್ಯದ್ ಸಲಾಂ ಆ್ಯಂಟಿ ಪೈರಸಿ ಸ್ಕ್ವಾಡ್ ಸಹ ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details