ಕರ್ನಾಟಕ

karnataka

ETV Bharat / sitara

ಕೆಜೆಎಫ್​​​​-2 ಅಖಾಡಕ್ಕೆ ನಾಳೆ 'ಅಧೀರ' ಎಂಟ್ರಿ..

ಸಂಜಯ್ ದತ್ ಪಾತ್ರಕ್ಕೆ ಸಂಬಂಧಿಸಿದಂತೆ ಬಹುಪಾಲು ಚಿತ್ರೀಕರಣ ಮುಗಿದಿದೆ. ಇನ್ನು ಕೆಲವು ದಿನಗಳ ಶೂಟಿಂಗ್ ಮಾತ್ರ ಬಾಕಿ ಇದೆ. ನಾಳೆಯಿಂದ ಚಿತ್ರೀಕರಣ ಆರಂಭವಾಗಲಿದ್ದು, ಸಂಜಯ್​ ದತ್​ ಇದರಲ್ಲಿ ಭಾಗಿಯಾಗಲಿದ್ದಾರೆ..

By

Published : Nov 29, 2020, 10:25 PM IST

Sanjay Dutt playing Adhira
ಕೆಜೆಎಫ್​​​​-2 ಅಖಾಡಕ್ಕೆ ನಾಳೆ ಅಧೀರ ಎಂಟ್ರಿ

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಕೆಜಿಎಫ್ ಪ್ಯಾನ್‌ ಇಂಡಿಯಾದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಮೇಕಿಂಗ್‌ನಿಂದಾಗಿ ಸ್ಯಾಂಡಲ್‌ವುಡ್‌ನಲ್ಲಂತೂ ಸಖತ್​ ಸೌಂಡ್‌​​ ಮಾಡಿತ್ತು.

ಇದೀಗ ಕೆಜಿಎಫ್-2 ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಈಗಾಗಲೇ ಬಹುಪಾಲು ಚಿತ್ರೀಕರಣ ಮುಗಿದಿದೆ. ಈ ಸಿನಿಮಾದಲ್ಲಿ ರಾಕಿಭಾಯ್​ಗೆ ಎದುರಾಳಿಯಾಗಿ ಸಂಜಯ್ ದತ್ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಂಜಯ್ ದತ್ ಪಾತ್ರಕ್ಕೆ ಸಂಬಂಧಿಸಿದಂತೆ ಬಹುಪಾಲು ಚಿತ್ರೀಕರಣ ಮುಗಿದಿದೆ. ಇನ್ನು ಕೆಲವು ದಿನಗಳ ಶೂಟಿಂಗ್ ಮಾತ್ರ ಬಾಕಿ ಇದೆ. ನಾಳೆಯಿಂದ ಚಿತ್ರೀಕರಣ ಆರಂಭವಾಗಲಿದ್ದು, ಸಂಜಯ್​ ದತ್​ ಇದರಲ್ಲಿ ಭಾಗಿಯಾಗಲಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಪ್ರಶಾಂತ್​ನೀಲ್​, ಸಂಜಯ್ ಪಾತ್ರವು 'ವೈಕಿಂಗ್ಸ್ ಸೀರೀಸ್'ನ ಭಯಾನಕ ಪಾತ್ರಗಳಿಂದ ಪ್ರೇರಿತವಾಗಿದೆ ಎಂದಿದ್ದಾರೆ.

ABOUT THE AUTHOR

...view details