ಕರ್ನಾಟಕ

karnataka

ಸ್ಯಾಂಡಲ್​ವುಡ್​ ನಿರ್ದೇಶಕನಿಂದ ಕೊರೊನಾ ವೈರಸ್ ಕುರಿತು ಪ್ಯಾನ್ ಇಂಡಿಯಾ ಸಿನಿಮಾ...

ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಕೊರೊನಾ ವೈರಸ್ ಮತ್ತು ಅದರಿಂದ ಏನೆಲ್ಲ ಸಮಸ್ಯೆ ಆಗುತ್ತೆ ಎಂಬುದರ ಕುರಿತಾದ ಸಿನಿಮಾ ಮಾಡಲು ಪ್ಲಾನ್ ಮಾಡಿಕೊಂಡಿದ್ದು. ಈಗಾಗಲೇ ಈ ವಿಷಯವಾಗಿ ನಿರ್ದೇಶಕ ಶಿವಕುಮಾರ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವುದಾಗಿ ಉಮೇಶ್ ಬಣಕಾರ್ ತಿಳಿಸಿದ್ದಾರೆ.

By

Published : Mar 9, 2020, 11:46 PM IST

Published : Mar 9, 2020, 11:46 PM IST

sandle-wood-ready-to-starting-the-corona-virus-related-cinema
ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್

ಬೆಂಗಳೂರು :ಇಡೀ ವಿಶ್ವವನ್ನೆ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಬಗ್ಗೆ ಸಿನಿಮಾ ಮಾಡಲು ಸ್ಯಾಂಡಲ್​ವುಡ್​ನಲ್ಲಿ ತಯಾರಿ ನಡೆಯುತ್ತಿದೆ.

ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಕೊರೊನಾ ವೈರಸ್ ಮತ್ತು ಅದರಿಂದ ಏನೆಲ್ಲ ಸಮಸ್ಯೆ ಆಗುತ್ತೆ ಎಂಬುದರ ಕುರಿತಾದ ಸಿನಿಮಾ ಮಾಡಲು ಪ್ಲಾನ್ ಮಾಡಿಕೊಂಡಿದ್ದು. ಈಗಾಗಲೇ ಈ ವಿಷಯವಾಗಿ ನಿರ್ದೇಶಕ ಬಿಸಿರಕ್ತ ಶಿವಕುಮಾರ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವುದಾಗಿ ಉಮೇಶ್ ಬಣಕಾರ್ ತಿಳಿಸಿದ್ದಾರೆ.

ಈ ಚಿತ್ರವನ್ನು ಇನ್ನೇನು ಕೈಗೆತ್ತಿ ಕೊಳ್ಳಬೇಕು ಅನ್ನುವಷ್ಟರಲ್ಲಿ ಬಿಸಿರಕ್ತ ಶಿವಕುಮಾರ್​ಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ರು. ಈಗ ಅವರು ಡಿಸ್ಚಾರ್ಜ್ ಆಗಿದ್ದು. ನಾಳೆ ಮತ್ತೊಮ್ಮೆ ನಾನು ಶಿವಕುಮಾರ್ ಜೊತೆ ಈ ಚಿತ್ರದ ಬಗ್ಗೆ ಮಾತನಾಡಿ ಇನ್ನೊಂದು ವಾರದಲ್ಲಿ ಈ ಚಿತ್ರವನ್ನು ಶುರುಮಾಡುವುದಾಗಿ ಉಮೇಶ್ ಬಣಕಾರ್ ಹೇಳಿದ್ದಾರೆ.

ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್

ಇನ್ನು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಉಮೇಶ್ ಬಣಕಾರ್ ಪ್ಲಾನ್ ಮಾಡಿದ್ದು, ಈ ಚಿತ್ರಕ್ಕೆ ಕನ್ನಡದಲ್ಲಿ " ಕೊರೊನಾ" ಹಿಂದಿಯಲ್ಲಿ " ಡೆಡ್ಲಿ ಕೊರೊನಾ" ಎಂದು ಟೈಟಲ್ ರಿಜಿಸ್ಟರ್ ಕೂಡ ಮಾಡಿಸಿದ್ದು. ಕನ್ನಡ ಹಾಗೂ ಹಿಂದಿಯಲ್ಲಿ ಶೂಟ್ ಮಾಡಿ, ತೆಲುಗು, ತಮಿಳಿಗೆ ಡಬ್ಬಿಂಗ್ ಮಾಡಿ ರಿಲೀಸ್ ಮಾಡುವ ಆಲೋಚನೆ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ಬಿಸಿ ರಕ್ತ ಶಿವಕುಮಾರ್ ಆಕ್ಷನ್ ಕಟ್ ಹೇಳಲಿದ್ದು. ಉಮೇಶ್ ಬಣಕಾರ್ ಹಾಗೂ ಬಿಸಿ ರಕ್ತ ಶಿವಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರದ ನಟ ನಟಿಯರನ್ನು ಚಿತ್ರತಂಡ ರಿವೀಲ್ ಮಾಡಲಿದೆ.

ABOUT THE AUTHOR

...view details