ಕರ್ನಾಟಕ

karnataka

ETV Bharat / sitara

ಹಂಸಲೇಖ ಸಂಗೀತ ನಿರ್ದೇಶನದ 'ಶ್ರೀಮಂತ' ಚಿತ್ರದಲ್ಲಿ ಎಸ್​​​ಪಿಬಿ ಗಾಯನ - undefined

ರೈತರ ಕುರಿತಾದ 'ಶ್ರೀಮಂತ' ಎಂಬ ಸಿನಿಮಾವೊಂದು ಕನ್ನಡದಲ್ಲಿ ತಯಾರಾಗುತ್ತಿದ್ದು ಈ ಸಿನಿಮಾಗಾಗಿ ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಖ್ಯಾತ ಗಾಯಕ ಡಾ. ಎಸ್​​​​​.ಪಿ. ಬಾಲಸುಬ್ರಹ್ಮಣ್ಯಂ ಸುಂದರವಾದ ಗೀತೆಯೊಂದನ್ನು ಹಾಡಿದ್ಧಾರೆ.

ಹಂಸಲೇಖ, ಎಸ್​​​​​.ಪಿ. ಬಾಲಸುಬ್ರಹ್ಮಣ್ಯಂ

By

Published : Apr 10, 2019, 11:21 PM IST

ರೈತರ ಕುರಿತಾದ ಸಿನಿಮಾಗಳು ಸ್ಯಾಂಡಲ್​​ವುಡ್​​ನಲ್ಲಿ ಬರ್ತಿರೋದು ಕಡಿಮೆ. ಇದೀಗ ರೈತರ ಕುರಿತಾದ 'ಶ್ರೀಮಂತ' ಎಂಬ ಸಿನಿಮಾವೊಂದು ತಯಾರಾಗುತ್ತಿದೆ. ಆದರೆ, ತೆಲುಗಿನ ಶ್ರೀಮಂತುಡು ಸಿನಿಮಾಗೂ ಈ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ.

ರಾಷ್ಟ್ರಕವಿ ಕುವೆಂಪು ರಚನೆಯ ರೈತ ಗೀತೆ ‘ನೇಗಿಲ ಹಿಡಿದ ಹೊಲದೊಳು ಹಾಡುತಾ‘ ಎಂಬ ಹಾಡನ್ನು ಡಾ. ಸಿ.ಅಶ್ವಥ್ ಹಾಡಿದ್ದರು. ಡಾ.ರಾಜ್ ಹಾಗೂ ಹಿರಿಯ ನಟ ಅನಂತ್​ನಾಗ್ ಆ ಅದ್ಭುತ ಗೀತೆಯಲ್ಲಿ ಕಾಣಿಸಿಕೊಂಡಿದ್ದರು. 1983 ರಲ್ಲಿ ತೆರೆಕಂಡ 'ಕಾಮನಬಿಲ್ಲು' ಸಿನಿಮಾದಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಈ ಹಾಡನ್ನು ಬಳಸಿಕೊಳ್ಳಲಾಗಿತ್ತು. ನಂತರ ‘ದೊರೆ’ ಸಿನಿಮಾದಲ್ಲಿ ಡಾ. ರಾಜ್​​​ ಹಾಡಿದ ‘ರೈತ ರೈತ ರೈತ.. ಅನ್ನ ಕೊಡುವ ದಾತ‘ ಎಂಬ ಹಾಡು ಕೂಡಾ ಸಾಕಷ್ಟು ಫೇಮಸ್ ಆಗಿತ್ತು.

'ಶ್ರೀಮಂತ' ಚಿತ್ರತಂಡ

ಇದೀಗ ಅಷ್ಟೇ ಪರಿಣಾಮಕಾರಿಯಾದ ರೈತ ಗೀತೆಯೊಂದನ್ನು ‘ಶ್ರೀಮಂತ‘ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಹಾಡಿಗೆ ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದು ಡಾ. ಎಸ್​​​​​.ಪಿ. ಬಾಲಸುಬ್ರಹ್ಮಣ್ಯಂ ಈ ಹಾಡನ್ನು ಹಾಡಿದ್ದಾರೆ. ಮಳೆ ಮುನಿದರೆ ಸಂತ... ಜನಪದ ಸಂತ... ಎಂಬ ಈ ಹಾಡನ್ನು ಹಂಸಲೇಖ ಅವರೇ ರಚಿಸಿದ್ದಾರೆ. ಚಿತ್ರದಲ್ಲಿ 9 ಹಾಡುಗಳಿದ್ದು ಇತ್ತೀಚೆಗೆ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಹಾಸನ್ ರಮೇಶ್ ನಿರ್ದೇಶಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು ಜುಲೈನಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಸಿನಿಮಾವನ್ನು ನಾರಾಯಣಪ್ಪ ಎಂಬುವರು ನಿರ್ಮಿಸಿದ್ದಾರೆ. ಕ್ರಾಂತಿ, ವೈಷ್ಣವಿ ಮೆನನ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details