ಕರ್ನಾಟಕ

karnataka

By

Published : Jul 1, 2020, 9:44 AM IST

ETV Bharat / sitara

ಸುಳ್ಳುಸುದ್ದಿ ಹಬ್ಬಿಸುವವರ ವಿರುದ್ಧ ಬೇಸರ ವ್ಯಕ್ತಪಡಿಸಿದ ಹಿರಿಯ ಗಾಯಕಿ ಎಸ್. ಜಾನಕಿ

ಸೆಲಬ್ರಿಟಿಗಳು ಆರೋಗ್ಯವಾಗಿದ್ದಾಗ ಅವರು ಇನ್ನಿಲ್ಲ ಎಂದು ಹಬ್ಬಿಸುವ ಸುಳ್ಳುಸುದ್ದಿಯಿಂದ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ನಾನು ಆರೋಗ್ಯವಾಗಿದ್ದೇನೆ. ದಯವಿಟ್ಟು ಸುಳ್ಳುಸುದ್ದಿ ಹಬ್ಬಿಸಬೇಡಿ ಎಂದು ಎಸ್​. ಜಾನಕಿ ಮನವಿ ಮಾಡಿದ್ದಾರೆ.

S Janaki felt bad about Rumors
ಎಸ್. ಜಾನಕಿ

ಖ್ಯಾತ ಹಿರಿಯ ಗಾಯಕಿ ಎಸ್​​. ಜಾನಕಿ ಅಭಿಮಾನಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸೆಲಬ್ರಿಟಿಗಳ ಬಗ್ಗೆ ಗಾಸಿಪ್ ಹರಡುವುದು ಸಾಮಾನ್ಯ. ಆದರೆ ಸೆಲಬ್ರಿಟಿ ಇನ್ನಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುವುದು ಅವರು ಮನಸ್ಸಿಗೆ ಬಹಳ ನೋವುಂಟುಮಾಡುತ್ತದೆ ಎಂದು ಎಸ್. ಜಾನಕಿ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ಗಾಯಕಿ ಎಸ್. ಜಾನಕಿ

ಇತ್ತೀಚೆಗೆ ಎಸ್​​. ಜಾನಕಿ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುಳ್ಳುಸುದ್ದಿ ಹಬ್ಬಿಸಿದ್ದರು. ಈ ಕಾರಣಕ್ಕೆ ಎಸ್​.ಜಾನಕಿ ಅವರ ಪುತ್ರ ಮುರಳಿಕೃಷ್ಣ ಅವರೇ ಮುಂದೆ ಬಂದು ಅಮ್ಮನಿಗೆ ಏನೂ ಆಗಿಲ್ಲ. ಚೆನ್ನೈ ಆಸ್ಪತ್ರೆಯಲ್ಲಿ ಒಂದು ಶಸ್ತ್ರಚಿಕಿತ್ಸೆ ನಡೆದಿದೆ. ಕೆಲವೇ ದಿನಗಳಲ್ಲಿ ಅವರು ಗುಣಮುಖರಾಗಿ ಮನೆಗೆ ವಾಪಸ್​​ ಆಗಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ಖ್ಯಾತ ಗಾಯಕ ಎಸ್​.ಬಿ. ಬಾಲಸುಬ್ರಮಣ್ಯಂ ಕೂಡಾ ವಿಡಿಯೋ ಮಾಡಿ ದಯವಿಟ್ಟು ಸೂಕ್ತ ಮಾಹಿತಿ ಇಲ್ಲದೆ ಇಂತಹ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಇದೀಗ ಈ ಬಗ್ಗೆ ಸ್ವತ: ಎಸ್​. ಜಾನಕಿ ಅವರೇ ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ಈಗಾಗಲೇ 6 ಬಾರಿ ಸಾಯಿಸಲಾಗಿದೆ. ಇದರಿಂದ ಬಹಳ ಬೇಜಾರಾಗಿದೆ. ನನ್ನ ಬಗ್ಗೆ ಸುಳ್ಳುಸುದ್ದಿ ಕೇಳಿ ಆರೋಗ್ಯ ವಿಚಾರಿಸಲು ನಿರಂತರ ದೂರವಾಣಿ ಕರೆಗಳು ಬರುತ್ತಲೇ ಇವೆ. ಅವರಿಗೆಲ್ಲಾ ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ ಎಂದು ಎಸ್. ಜಾನಕಿ ಹೇಳಿದ್ದಾರೆ.

ABOUT THE AUTHOR

...view details