ಕರ್ನಾಟಕ

karnataka

ಬೆಳ್ಳಿ ತೆರೆಯಲ್ಲಿ ಬ್ಯುಸಿ ಆದ "ದಿಯಾ' ನಾಯಕ ರೋಹಿತ್​

By

Published : Apr 5, 2020, 10:02 AM IST

ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ್ದ ಕನ್ನಡದ ಜನಪ್ರಿಯ ಸಿನಿಮಾ "ದಿಯಾ" ದಲ್ಲಿ ನಾಯಕ ರೋಹಿತ್ ಆಗಿ ನಟಿಸಿ ಅಲ್ಲೂ ಸೈ ಎನಿಸಿಕೊಂಡಿರುವ ದೀಕ್ಷಿತ್ ಶೆಟ್ಟಿ, ಸದ್ಯ ಬೆಳ್ಳಿತೆರೆಯಲ್ಲೂ ಕೇಳಿ ಬರುತ್ತಿರುವ ಹೆಸರು ಹೌದು!. ಕಿರುತೆರೆಯ ನಂತರ ಅದೃಷ್ಟ ಪರೀಕ್ಷೆಗೆಂದು ಬೆಳ್ಳಿತೆರೆಗೆ ಹಾರಿದ ಕುಂದಾಪುರದ ಕುವರ ಮೊದಲ ಪ್ರಯತ್ನದಲ್ಲೇ ಪಾಸ್ ಆಗಿ ಬಿಟ್ಟಿದ್ದಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ದೀಕ್ಷಿತ್ ಅವರು ರೋಹಿತ್ ಆಗಿ ಬದಲಾಗಿದುದನ್ನು ಸಿನಿ ಪ್ರಿಯರು ಒಪ್ಪಿಕೊಂಡಿದ್ದಾರೆ.

Rohit is the hero of Diya, busy on the silver screen
ಬೆಳ್ಳಿ ತೆರೆಯಲ್ಲಿ ಬ್ಯುಸಿ ಆದ ದಿಯಾ ನಾಯಕ ರೋಹಿತ್​

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಮನೆ ಮಾತಾಗಿದ್ದ ಕುಂದಾಪುರದ ಕುವರ ದೀಕ್ಷಿತ್ ಶೆಟ್ಟಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದು, ಸಾಕ್ಷಿ- ಪ್ರೀತಿ ಎಂದರೇನು ಧಾರಾವಾಹಿಯ ಮೂಲಕ‌.

ನಾಗಿಣಿ ಧಾರಾವಾಹಿಯಲ್ಲಿ ಅರ್ಜುನ್ ಪಾತ್ರಕ್ಕೆ ಜೀವ ತುಂಬಿದ್ದ ದೀಕ್ಷಿತ್, ಮನೋಜ್ಞವಾಗಿ ಅಭಿನಯಿಸುವ ಮೂಲಕ ಕಿರುತೆರೆ ಪ್ರಿಯರ ಮನ ಕದ್ದಿದ್ದು ಮಾತ್ರವಲ್ಲದೇ, ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಛಾಪು ಮೂಡಿಸಿದ ಚಾಕೊಲೇಟ್ ಹೀರೋ.

ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ್ದ ಕನ್ನಡದ ಜನಪ್ರಿಯ ಸಿನಿಮಾ "ದಿಯಾ" ದಲ್ಲಿ ನಾಯಕ ರೋಹಿತ್ ಆಗಿ ನಟಿಸಿ ಅಲ್ಲೂ ಸೈ ಎನಿಸಿಕೊಂಡಿರುವ ದೀಕ್ಷಿತ್ ಶೆಟ್ಟಿ, ಸದ್ಯ ಬೆಳ್ಳಿತೆರೆಯಲ್ಲೂ ಕೇಳಿ ಬರುತ್ತಿರುವ ಹೆಸರು ಹೌದು!. ಕಿರುತೆರೆಯ ನಂತರ ಅದೃಷ್ಟ ಪರೀಕ್ಷೆಗೆಂದು ಬೆಳ್ಳಿತೆರೆಗೆ ಹಾರಿದ ಕುಂದಾಪುರದ ಕುವರ ಮೊದಲ ಪ್ರಯತ್ನದಲ್ಲೇ ಪಾಸ್ ಆಗಿ ಬಿಟ್ಟಿದ್ದಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ದೀಕ್ಷಿತ್ ಅವರು ರೋಹಿತ್ ಆಗಿ ಬದಲಾಗಿದುದನ್ನು ಸಿನಿ ಪ್ರಿಯರು ಒಪ್ಪಿಕೊಂಡಿದ್ದಾರೆ.

ದಿಯಾ ನಾಯಕ ರೋಹಿತ್
ದಿಯಾ ಸಿನಿಮಾದ ನಂತರ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ದೀಕ್ಷಿತ್ ಶೆಟ್ಟಿ, ಕೆಟಿಎಂ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಒಂದು ಹಂತದ ಶೆಡ್ಯೂಲ್ ನಡೆದಿದ್ದು, ಕೊರೊನಾ ವೈರಸ್ ನ ಹಾವಳಿಯಿಂದಾಗಿ ಶೂಟಿಂಗ್ ಅರ್ಧದಲ್ಲಿ ನಿಂತು ಹೋಗಿದೆ. ಕೆಟಿಎಂ ಜೊತೆಗೆ "ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು" ಸಿನಿಮಾದಲ್ಲಿಯೂ ದೀಕ್ಷಿತ್ ನಾಯಕನಾಗಿ ನಟಿಸಲಿದ್ದಾರೆ.
ಕೆಟಿಎಂ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ
ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಛಾಪು ಮೂಡಿಸುತ್ತಿರುವ ದೀಕ್ಷಿತ್ ಶೆಟ್ಟಿ, ಉಷಾ ಭಂಡಾರಿಯವರ ಆ್ಯನ್ ಆ್ಯಕ್ಟರ್ಸ್ ಪ್ರಿಪೇರ್ಸ್ ಸಂಸ್ಥೆಯಲ್ಲಿ ಪಳಗಿದವರು. ಒಂದಷ್ಟು ನಾಟಕಗಳಲ್ಲಿ ಬಣ್ಣ ಹಚ್ಚಿ ಅಭಿನಯಿಸಿರುವ ದೀಕ್ಷಿತ್ ಅವರಿಗೆ ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಮಹಾದಾಸೆ ಇದೆ.
ಕೆಟಿಎಂ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ
ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಕಾನೂನಿನಲ್ಲಿ ಪದವಿ ಪಡೆದಿರುವ ದೀಕ್ಷಿತ್ ಅವರಿಗೆ ಇದೀಗ ನಟನೆಯೇ ಉಸಿರು. ಬಾಲ್ಯದಲ್ಲಿ ತಾನೊಬ್ಬ ಕ್ರಿಕೆಟ್ ಆಟಗಾರ ಆಗಬೇಕು ಎಂಬ ಗುರಿ ಹೊಂದಿದ್ದ ದೀಕ್ಷಿತ್ ಅವರು ಇದೀಗ ನಟನಾಗಿ ಗುರುತಿಸಿಕೊಳ್ಳಬೇಕೆಂಬುದೇ ಬಯಕೆ.

ABOUT THE AUTHOR

...view details