ಕರ್ನಾಟಕ

karnataka

By

Published : Aug 27, 2019, 9:01 AM IST

ETV Bharat / sitara

ಸ್ನೇಹಿತನ ಪ್ರತಿಭೆ ಕೊಂಡಾಡಿದ ರಾಕಿ ಭಾಯ್

ಅರ್ಜುನ್ ಕಥೆ ಮಾಡಿದಾಗ ನನ್ನ ಬಳಿ ಚರ್ಚೆ ಮಾಡುತ್ತಾರೆ. ನನಗೆ ಅವರ ಕೆಲಸ ಇಷ್ಟ ಆಗಿದೆ. ಅವರ ಶಕ್ತಿಗೆ ಇಂದು ಅವರು ಬೆಳದಿರುವುದೇ ಸಾಕ್ಷಿ. ಇದೀಗ ‘ಕಿಸ್’ ಚಿತ್ರದ ಮೂಲಕ ನಿರ್ಮಾಪಕ ಸಹ ಆಗಿರುವುದು ಶ್ಲಾಘನೀಯ ಎಂದಿದ್ದಾರೆ ರಾಕಿಭಾಯ್​ ಯಶ್​.

Ap arjun

ರಾಕಿಂಗ್ ಸ್ಟಾರ್ ಯಶ್ 'ಕಿಸ್' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ತನ್ನ ಹಳೆಯ ಗೆಳೆಯ ಎ.ಪಿ. ಅರ್ಜುನ್ ಅವರನ್ನು ಕೊಂಡಾಡಿದರು.

ಟ್ರೈಲರ್ ಬಿಡುಗಡೆ ನಂತರ ತಮ್ಮ ಹಳೆಯ ನೆನಪುಗಳಿಗೆ ಜಾರಿದ ಯಶ್​​, ಸೀರಿಯಲ್​​ನಲ್ಲಿ ಅಭಿನಯಿಸುವಾಗ ಅರ್ಜುನ್ ಜೊತೆ ಸ್ನೇಹ ಬೆಳೆಯಿತು. ಆಗ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಅಂದೇ ಅವರಲ್ಲಿರುವ ಪ್ರತಿಭೆ ಬಗ್ಗೆ ನನಗೆ ಗೊತ್ತಿತ್ತು. ಈಗ ಅವರು ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಆಗಿ ಕಂಗೊಳಿಸಿಸುತ್ತಿದ್ದಾರೆ ಎಂದರು.

ಅರ್ಜುನ್ ಕಥೆ ಮಾಡಿದಾಗ ಮೊದಲು ನನ್ನ ಬಳಿ ಚರ್ಚೆ ಮಾಡುತ್ತಾರೆ. ನನಗೆ ಅವರ ಕೆಲಸ ಇಷ್ಟ ಆಗಿದೆ. ಅವರ ಶಕ್ತಿಗೆ ಇಂದು ಅವರು ಬೆಳದಿರುವುದೇ ಸಾಕ್ಷಿ. ಇದೀಗ ‘ಕಿಸ್’ ಚಿತ್ರದ ಮೂಲಕ ನಿರ್ಮಾಪಕ ಸಹ ಆಗಿರುವುದು ಶ್ಲಾಘನೀಯ ಎಂದರು ಯಶ್​.

ಇದೇ ವೇಳೆ ಕಿಸ್ ಚಿತ್ರದ ನಾಯಕ ವಿರಾಟ್ ಹಾಗೂ ನಾಯಕಿ ಶ್ರೀಲೀಲಾ ಅವರಿಗೆ ವಿಶ್ ಮಾಡಿದ ರಾಕಿಭಾಯ್​, ಈ ಯುವ ಜೋಡಿ ಭಾರತದಲ್ಲಿ ಒಂದು ರೌಂಡ್ ಹೊಡೆದು ಬರುತ್ತಾರೆ ಎಂದು ಭವಿಷ್ಯ ನುಡಿದರು. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಬತ್ತಳಿಕೆಯಿಂದ ಒಳ್ಳೆಯ ಗೀತೆಗಳು ಬಂದಿವೆ ಎಂದು ಯಶ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಿಸ್’.... ತುಂಟ ತುಟಿಗಳ ಆಟೋಗ್ರಾಫ್ ಅಡಿ ಬರಹ ಇರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ, ಗಿರೀಶ್​ ಗೌಡ ಅವರ ಛಾಯಾಗ್ರಹಣ, ಡಾ. ಕೆ ರವಿ ವರ್ಮ ಅವರ ಸಾಹಸ, ದೀಪು ಎಸ್. ಕುಮಾರ್ ಸಂಕಲನ, ಇಮ್ರಾನ್ ಸರ್ದಾರಿಯ ನೃತ್ಯ, ರವಿ ಸಂತೆಹಕ್ಲು ಸಂಭಾಷಣೆ ಚಿತ್ರ ತಂಡದೊಂದಿಗೆ ಸೇರಿಕೊಂಡಿದೆ.

ABOUT THE AUTHOR

...view details