ಮಂಡ್ಯ ಜಿಲ್ಲೆಯಾದ್ಯಂದ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಚುನಾವಣೆ ಪ್ರಚಾರ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬಲಗೈ ನೋವು ಕಾಣಿಸಿಕೊಂಡಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ನಡೆದಿದ್ದ ಕಾರು ಅಪಘಾತದಲ್ಲಿ ದಚ್ಚು ಕೈಗೆ ಗಂಭೀರ ಗಾಯವಾಗಿತ್ತು. ಕೆಲ ವಾರಗಳವರೆಗೆ ವಿಶ್ರಾಂತಿ ಪಡೆದಿದ್ದ ದರ್ಶನ್, ಸಂಪೂರ್ಣವಾಗಿ ಗುಣಮುಖರಾಗಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಇದೀಗ ಮಂಡ್ಯದಲ್ಲಿ ಸುಮಲತಾ ಪರ ಮತಬೇಟೆ ನಡೆಸುತ್ತಿರುವ ಅವರು, ಸತತ ನಾಲ್ಕು ದಿನಗಳಿಂದ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. ಪರಿಣಾಮ ದಚ್ಚುಗೆ ಬೆನ್ನು ಹಾಗೂ ಕೈ ನೋವು ಕಾಣಿಸಿಕೊಂಡಿದೆ.