ಕರ್ನಾಟಕ

karnataka

By

Published : Oct 13, 2019, 4:19 PM IST

ETV Bharat / sitara

'ಬಿಗ್​ ಬಾಸ್​ ನನ್​ ಸಿಗರೇಟ್​ ಏನಾಯ್ತು.. ಕಳಿಸಿಕೊಡಿ' ಎಂದು ರವಿ ಬೆಳಗೆರೆ 'ಪ್ರತಾಪ..'

ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡ್ತಿದ್ದಂತೆ ರವಿ ಬೆಳಗೆರೆ ತಮ್ಮ ಬೋಲ್ಡ್​ನೆಸ್​ ತೋರಿ ಸಿಗರೇಟ್​ ಜಪ ಮಾಡಿದ್ದಾರೆ. ಕುರಿ ಪ್ರತಾಪ್​ ಜೊತೆ ಮಾತನಾಡುತ್ತ ನಡೆಯುವಾಗ "ನನ್​ ಸಿಗರೇಟ್​ ಮಾರಾಯ್ರೇ.. ಎಲ್​ ಕೇಳೋದು" ಎಂದಿದ್ದಾರೆ. ಇದಕ್ಕೆ ಕುರಿ ಪ್ರಾತಾಪ್​ ಸರ್​ ಯಾವ್ದಾದ್ರೂ ಕ್ಯಾಮರಾ ಮುಂದೆ ಹೇಳಿದ್ರೇ ಎಂದಿದ್ದಾರೆ.

"ಬಿಗ್​ ಬಾಸ್​ ನನ್​ ಸಿಗರೇಟ್​ ಏನಾಯ್ತು.  ಕಳಿಸಿಕೊಡಿ" ಎಂದ ರವಿ ಬೆಳಗೆರೆ

ಕನ್ನಡದ ಬಿಗ್ ಬಾಸ್​ ರಿಯಾಲಿಟಿ ಶೋಗೆ ಯಾರೆಲ್ಲ ಸೆಲೆಕ್ಟ್​ ಆಗಿದ್ದಾರೆ. ಬಿಗ್‌ಬಾಸ್‌ ಮನೆಗೆ ಯಾರೆಲ್ಲ ಹೋಗ್ತಾರೆ ಅನ್ನೋ ಊಹಾಪೋಹಗಳು ಈಗಾಗ್ಲೇ ಸಾಕಷ್ಟು ಹರಿದಾಡುತ್ತಿದ್ದವು. ಇದರ ಮಧ್ಯೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಿಗ್​ ಬಾಸ್​​ಗೆ ಎಂಟ್ರಿ ಕೊಡ್ತಾರೆ ಅನ್ನೋ ವದಂತಿನೂ ಇತ್ತು.. ಇದೀಗ ಅದು ನಿಜವಾಗಿದೆ.

ಸ್ವತಃ ಕಲರ್ಸ್​​ ಕನ್ನಡ ಚಾನೆಲ್​​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿ "ಆ ಲೀಕ್, ಈ ಲೀಕ್ ನಂಬ್ತೀರಲ್ಲಾ.. ತೊಗೊಳಿ ನಮ್ ಕಡೆಯಿಂದಾನೇ ಒಂದು! ಫಸ್ಟ್ ಟೈಮ್ ಎವರ್, ಬಿಗ್‌ಬಾಸ್ ಮನೆಯಲ್ಲಿ ಬೆಳೆಗೆರೆ ಪ್ರತಾಪ!" ಎಂದು ಬರೆದುಕೊಂಡಿದೆ. ಈ ವಿಡಿಯೋದಲ್ಲಿ ರವಿ ಬೆಳಗೆರೆ ಮತ್ತು ಕುರಿ ಪ್ರತಾಪ್​​ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡ್ತಿದ್ದಂತೆ ರವಿ ಬೆಳಗೆರೆ ತಮ್ಮ ಬೋಲ್ಡ್​ನೆಸ್​ ತೋರಿ ಸಿಗರೇಟ್​ ಜಪ ಮಾಡಿದ್ದಾರೆ. ಕುರಿ ಪ್ರತಾಪ್​ ಜೊತೆ ಮಾತನಾಡುತ್ತ ನಡೆಯುವಾಗ "ನನ್​ ಸಿಗರೇಟ್​ ಮಾರಾಯ್ರೇ.. ಎಲ್​ ಕೇಳೋದು" ಎಂದಿದ್ದಾರೆ. ಇದಕ್ಕೆ ಕುರಿ ಪ್ರಾತಾಪ್​ ಸರ್​ ಯಾವ್ದಾದ್ರೂ ಕ್ಯಾಮರಾ ಮುಂದೆ ಹೇಳಿದ್ರೇ ಎಂದಿದ್ದಾರೆ.

ಇದಕ್ಕೆ ಕ್ಯಾಮರಾ ಮುಂದೆ ನಿಂತ ರವಿ ಬೆಳಗೆರೆ, 'ಬಿಗ್​ ಬಾಸ್​ ನನ್​ ಸಿಗರೇಟ್​ ಏನಾಯ್ತು. ಕಳಿಸಿಕೊಡಿ ಬಿಗ್​ ಬಾಸ್​.. ಎಷ್ಟೊತ್ತಾಯ್ತು. ತುಂಬ ಹೊತ್ತು ಸೇದದೆ ಇರ್ಬಾರ್ದು ಡಾಕ್ಟರ್​ ಹೇಳಿದ್ದಾರೆ' ಎಂದು ರವಿ ಬೆಳಗೆರೆ ಪಕ್ಕಕ್ಕೆ ಸರಿದು ಬಿಗ್​ ಬಾಸ್​ ಮನೆ ವೀಕ್ಷಣೆಯಲ್ಲಿ ತೊಡಗುತ್ತಾರೆ.

ABOUT THE AUTHOR

...view details