ಕರ್ನಾಟಕ

karnataka

ETV Bharat / sitara

ಇಂದು 'ಕತೆ ಡಬ್ಬಿ' ತೆಗೆಯಲಿದ್ದಾರೆ ನಟಿ ರಂಜನಿ ರಾಘವನ್

ಲಾಕ್​ಡೌನ್ ಸಮಯದಲ್ಲಿ ನಟಿ ರಂಜನಿ ರಾಘವನ್ ಒಂದಿಷ್ಟು ಕಥೆಗಳನ್ನು ಬರೆದಿದ್ದಾರೆ. ಅದು ಅವಧಿ ಮ್ಯಾಗ್​ನಲ್ಲಿ ಪ್ರಕಟವಾಗಿದೆ. ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿದೆ. ಹೀಗೆ ಖುಷಿಕೊಟ್ಟ 14 ಕಥೆಗಳನ್ನು ಸೇರಿಸಿ, ಬಹುರೂಪಿ ಪ್ರಕಾಶನವು ಪುಸ್ತಕ ಪ್ರಕಟಿಸಿದೆ.

By

Published : Sep 29, 2021, 1:41 PM IST

Ranjani Raghavan's first story collection to release today
ಇಂದು 'ಕತೆ ಡಬ್ಬಿ' ತೆಗೆಯಲಿದ್ದಾರೆ ನಟಿ ರಂಜನಿ ರಾಘವನ್

ಕನ್ನಡತಿ ಖ್ಯಾತಿಯ ರಂಜನಿ ರಾಘವನ್, ನಟನೆಯ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ, ಬರವಣಿಗೆಯಲ್ಲೂ ತೊಡಗಿಸಿಕೊಂಡವರು. ಲಾಕ್​ಡೌನ್ ಸಂದರ್ಭದಲ್ಲಿ ಅವಧಿ ಮ್ಯಾಗ್​ನಲ್ಲಿ ಅವರು ಪ್ರತಿವಾರ ಕಥೆಗಳನ್ನು ಬರೆಯುತ್ತಿದ್ದರು. ಆ ಕಥೆಗಳನ್ನೆಲ್ಲ ಸೇರಿಸಿ, ಅವರೊಂದು ಕಥಾ ಸಂಕಲನ ಮಾಡಿದ್ದಾರೆ. 'ಕತೆ ಡಬ್ಬಿ' ಹೆಸರಿನ ಈ ಸಂಕಲನವು ಇಂದು ಸಂಜಯನಗರದ ಬಹುರೂಪಿ ಬುಕ್ ಹಬ್​ನಲ್ಲಿ ಬಿಡುಗಡೆಯಾಗುತ್ತಿದೆ.

ನಟಿಯಾಗಿದ್ದ ರಂಜನಿಗೆ ಬರವಣಿಗೆಯಲ್ಲಿ ಆಸಕ್ತಿ ಬಂದಿದ್ದು ಹೇಗೆ ಎಂದರೆ, ಅದಕ್ಕೆ ಕಾರಣ ಧಾರಾವಾಹಿಗಳು ಎನ್ನುತ್ತಾರೆ ಅವರು. ಬಾಲ್ಯದಿಂದಲೂ ರಂಜನಿಗೆ ಬರವಣಿಗೆಯಲ್ಲಿ ಆಸಕ್ತಿ ಇತ್ತಂತೆ. ಆದರೆ, ತಾನೂ ಬರೆಯಬೇಕು ಎಂದು ಅವರಿಗೆ ಅನಿಸಿದ್ದು ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ ಮೇಲೆ. ಧಾರಾವಾಹಿಗಳಲ್ಲಿ ನಟಿಸುವಾಗ ಒಂದು ಕಥೆಯನ್ನು ಹೇಗೆ ಹೆಣೆಯುತ್ತಾರೆ, ಚಿತ್ರಕಥೆ ಹೇಗೆ ಬರೆಯುತ್ತಾರೆ ಎಂಬ ಕುತೂಹಲದಿಂದ ಗಮನಿಸುತ್ತಾ ಹೋದರಂತೆ. ಕ್ರಮೇಣ ಅವರೂ ಬರೆಯುವುದಕ್ಕೆ ಶುರು ಮಾಡಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಇಷ್ಟದೇವತೆ ಎಂಬ ಧಾರಾವಾಹಿಗೆ ಚಿತ್ರಕಥೆಯನ್ನೂ ಬರೆದಿದ್ದಾರೆ.

ಆದರೆ, ಸಣ್ಣಕಥೆಗಳನ್ನು ಬರೆಯುವುದಕ್ಕೆ ಅವರು ಶುರು ಮಾಡಿದ್ದು ಲಾಕ್​ಡೌನ್ ಸಮಯದಲ್ಲಿ. ಸಾಕಷ್ಟು ಸಮಯವಿದ್ದ ಕಾರಣ ಅವರು ಒಂದಿಷ್ಟು ಕಥೆಗಳನ್ನು ಬರೆದರಂತೆ. ಅದು ಅವಧಿ ಮ್ಯಾಗ್​ನಲ್ಲಿ ಪ್ರಕಟವಾಗಿದೆ. ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿದೆ. ಹೀಗೆ ಖುಷಿಕೊಟ್ಟ 14 ಕಥೆಗಳನ್ನು ಸೇರಿಸಿ, ಬಹುರೂಪಿ ಪ್ರಕಾಶನವು ಪುಸ್ತಕ ಪ್ರಕಟಿಸಿದೆ.

ಈ ಸಂಕಲನದಲ್ಲಿರುವ ಎಲ್ಲ ಕಥೆಗಳು ಬೇರೆಬೇರೆ ಜಾನರ್ನ್​​ ಕಥೆಗಳಾಗಿದ್ದು, ತಮ್ಮೊಳಗಿನ ಓದು, ಭಾವನೆ, ಗ್ರಹಿಕೆ ಎಲ್ಲವೂ ಅಡಗಿದೆ ಎಂದು ರಂಜನಿ ಹೇಳಿಕೊಂಡಿದ್ದಾರೆ. ಈ ಪುಸ್ತಕವನ್ನು ಖ್ಯಾತ ಲೇಖಕ ಮತ್ತು ಹಿರಿಯ ಪತ್ರಕರ್ತ ಜೋಗಿ ಅವರು ಬಿಡುಗಡೆ ಮಾಡಿದರೆ, ಜಯತೀರ್ಥ, ರಿಷಿ, ಚೇತನಾ ತೀರ್ಥಹಳ್ಳಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಬಹು ನಿರೀಕ್ಷಿತ ಪುಷ್ಪ ಚಿತ್ರದ ನಟಿ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್​ ರಿವೀಲ್​

ABOUT THE AUTHOR

...view details