ಕರ್ನಾಟಕ

karnataka

ETV Bharat / sitara

ದಿಗಂತ್​​​​ ಮುಂದಿನ ಸಿನಿಮಾಕ್ಕೆ ಈ ಕಿರುತೆರೆ ನಟಿ ನಾಯಕಿ

ವಿನಾಯಕ ಕೋಡ್ಸರ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ನಾಯಕಿಯಾಗಿ ರಂಜನಿ ಅಭಿನಯಿಸಲಿದ್ದಾರೆ. ಇದರಲ್ಲಿ ದಿಗಂತ್ ನಾಯಕ ನಟನಾಗಿ ನಟಿಸುತ್ತಿದ್ದು, ಗೊಬ್ಬರದ ಅಂಗಡಿ ಮಾಲೀಕರ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

By

Published : Feb 28, 2020, 7:29 PM IST

ranjani raghavan in dinganth movie
ದಿಗಂತ್​​ ಮುಂದಿನ ಸಿನಿಮಾಕ್ಕೆ ಈ ಕಿರುತೆರೆ ನಟಿ ನಾಯಕಿ

ರಂಜನಿ ರಾಘವನ್​​ ದಿಗಂತ್​​ಗೆ ನಾಯಕಿಯಾಗಿ ನಟಿಸುವ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಬರುತ್ತಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿ ಕನ್ನಡ ಅಧ್ಯಾಪಕಿ ಭುವನೇಶ್ವರಿ ಆಲಿಯಾಸ್ ಭುವಿಯಾಗಿ ನಟಿಸಿರುವ ರಂಜನಿ ರಾಘವನ್ ಇದೀಗ ಬೆಳ್ಳಿತೆರೆಯತ್ತ ಮುಖ ಮಾಡಿದ್ದಾರೆ.

ರಂಜನಿ ರಾಘವನ್​​

ವಿನಾಯಕ ಕೋಡ್ಸರ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ನಾಯಕಿಯಾಗಿ ರಂಜನಿ ಅಭಿನಯಿಸಲಿದ್ದಾರೆ. ಇದರಲ್ಲಿ ದಿಗಂತ್ ನಾಯಕ ನಟನಾಗಿ ನಟಿಸುತ್ತಿದ್ದು, ಗೊಬ್ಬರದ ಅಂಗಡಿ ಮಾಲೀಕರ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ರಂಜನಿ ರಾಘವನ್​​
ರಂಜನಿ ರಾಘವನ್​​

ಈಗಾಗಲೇ ಕನ್ನಡದಲ್ಲಿ ನಾನು ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಇಂತಹ ರಿಯಲಿಸ್ಟಿಕ್ ಪಾತ್ರ ಇದೇ ಮೊದಲ ಬಾರಿಗೆ ದೊರೆತಿದೆ. ದೂದ್ ಪೇಡಾ ದಿಗಂತ್ ಅವರೊಂದಿಗೆ ತೆರೆ ಹಂಚಿಕೊಳ್ಳುವುದಕ್ಕೆ ಬಹಳ ಸಂತಸವಾಗುತ್ತಿದೆ. ಚಿತ್ರದಲ್ಲಿ ನಾನು ಮತ್ತು ದಿಗಂತ್ ಬಾಲ್ಯ ಸ್ನೇಹಿತರು. ಜೊತೆಗೆ ಪ್ರೇಮಿಗಳಾಗಿಯೂ ಕೂಡಾ ಕಾಣಿಸಿಕೊಂಡಿದ್ದೇವೆ ಎಂದು ರಂಜನಿ ಹೇಳಿದ್ದಾರೆ.

ರಂಜನಿ ರಾಘವನ್​​
ರಂಜನಿ ರಾಘವನ್​​

ಈ ಸಿನಿಮಾದ ಮುಹೂರ್ತ ನಿನ್ನೆಯಷ್ಟೇ ಸಿಗಂಧೂರಿನಲ್ಲಿ ನಡೆದಿದೆ. ಮುಂದಿನ ತಿಂಗಳು 14 ರಿಂದ ಚಿತ್ರೀಕರಣ ಆರಂಭವಾಗಲಿದೆ.

ರಂಜನಿ ರಾಘವನ್​​

ABOUT THE AUTHOR

...view details