ಕರ್ನಾಟಕ

karnataka

ETV Bharat / sitara

ನಾಯಕ, ನಾಯಕಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ 'ರಣಭೂಮಿ' ನಿರ್ದೇಶಕ - ನಾಯಕ, ನಾಯಕಿ ಬಗ್ಗೆ ರಣಭೂಮಿ ನಿರ್ದೇಶಕ ಅಸಮಾಧಾನ

ನನಗೆ ಸಿನಿಮಾ ಹೀರೋ, ಹೀರೋಯಿನ್ ಮುಖ್ಯ ಅಲ್ಲ. ಕಥೆ ಚೆನ್ನಾಗಿದ್ದರೆ ಜನರು ಥಿಯೇಟರ್​​​​​​​​​​​ಗೆ ಬಂದು ಸಿನಿಮಾ ನೋಡ್ತಾರೆ, ನಾಯಕ, ನಾಯಕಿಯಿಂದ ಸಿನಿಮಾ ಹಿಟ್ ಆಗುವುದಿಲ್ಲ ಎನ್ನುವ ಮೂಲಕ ನಾಯಕ, ನಾಯಕಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

'ರಣಭೂಮಿ' ಸುದ್ದಿಗೋಷ್ಠಿ

By

Published : Nov 4, 2019, 9:35 PM IST

ಕೆಲವೊಂದು ಸಿನಿಮಾಗಳು ಶೂಟಿಂಗ್ ಆರಂಭಕ್ಕೂ ಮುನ್ನ, ಮತ್ತೆ ಕೆಲವು ಸಿನಿಮಾಗಳು ತೆರೆ ಕಂಡಾಗ ಯಾವುದಾದರೂ ಒಂದು ವಿಷಯಕ್ಕೆ ವಿವಾದ ಮಾಡಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ಎಷ್ಟೋ ಉದಾಹರಣೆಗಳು ಸ್ಯಾಂಡಲ್​​ವುಡ್​​ನಲ್ಲಿ ನಡೆದಿವೆ.

'ರಣಭೂಮಿ' ಸುದ್ದಿಗೋಷ್ಠಿ

ಇದೀಗ ಇಂತಹದ್ದೇ ಪರಿಸ್ಥಿತಿ 'ರಣಭೂಮಿ' ಸಿನಿಮಾ ತಂಡಕ್ಕೆ ಎದುರಾಗಿದೆ. 'ಜೋಕಾಲಿ' ಸಿನಿಮಾವನ್ನು ನಿರ್ದೇಶಿಸಿದ್ದ ಚಿರಂಜೀವಿ ದೀಪಕ್ ಅವರು ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ನಿರಂಜನ್‌‌ ಒಡೆಯರ್ ಭಜರಂಗಿ ಲೋಕಿ ಹಾಗೂ ಇನ್ನಿತರರನ್ನು ಹಾಕಿಕೊಂಡು ಈ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಚಿರಂಜೀವಿ ಸಿನಿಮಾ ಚಿತ್ರೀಕರಣದ ದಿನಾಂಕವನ್ನು ಕೂಡಾ ಅನೌನ್ಸ್ ಮಾಡಿದ್ದಾರೆ. ಕ್ರೈಂ, ಸಸ್ಪೆನ್ಸ್​, ಥ್ರಿಲ್ಲರ್ ಹಾಗೂ ಸಾಹಸಮಯ ಸಿನಿಮಾ 'ರಣಭೂಮಿ' ನವೆಂಬರ್​​ 8 ರಂದು ಬಿಡುಗಡೆಯಾಗಲಿದೆ. ಮಾನಸಿ ಫಿಲ್ಮ್​ ಬ್ಯಾನರ್​​​ ಅಡಿ ಚಿರಂಜೀವಿ ದೀಪಕ್​​ ಅವರೇ ನಿರ್ಮಾಣ ಮಾಡಿದ್ದಾರೆ.

'ರಣಭೂಮಿ'

ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಚಿರಂಜೀವಿ ದೀಪಕ್, ಖಳನಟ‌ ಡ್ಯಾನಿ ಕುಟ್ಟಪ್ಪ, ಛಾಯಾಗ್ರಾಹಕ ನಾಗಾರ್ಜುನ್‌, ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಸೇರಿ ಕೆಲವೇ ಕೆಲವು ಮಂದಿ ಇದ್ದರು. ಪ್ರೆಸ್​​​ಮೀಟ್​​ಗೆ ನಾಯಕ, ನಾಯಕಿ ಬರದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ, 'ನನಗೆ ಸಿನಿಮಾ ಹೀರೋ, ಹೀರೋಯಿನ್ ಮುಖ್ಯ ಅಲ್ಲ. ಕಥೆ ಚೆನ್ನಾಗಿದ್ದರೆ ಜನರು ಥಿಯೇಟರ್​​​​ಗೆ ಬಂದು ಸಿನಿಮಾ ನೋಡ್ತಾರೆ, ಇಲ್ಲಿ ನಾಯಕ, ನಾಯಕಿಯಿಂದ ಸಿನಿಮಾ ಹಿಟ್ ಆಗುವುದಿಲ್ಲ ಎನ್ನುವ ಮೂಲಕ ನಾಯಕ, ನಾಯಕಿ ಬಗ್ಗೆ ಅಸಮಾಧಾನ ಹೊರ ಹಾಕಿದರು.

ABOUT THE AUTHOR

...view details