ಕರ್ನಾಟಕ

karnataka

ETV Bharat / sitara

ಸೌಂದರ್ಯ ಮುಖದ ಮೇಲೆ ನಾನು ಕಾಲಿಟ್ಟ ದೃಶ್ಯ ಬೇಸರ ತರಿಸಿತ್ತು: ರಮ್ಯಕೃಷ್ಣನ್​ - undefined

1999 ರಲ್ಲಿ ತೆರೆಕಂಡ 'ನರಸಿಂಹ' ಚಿತ್ರದ ಬಗ್ಗೆ ಹಿರಿಯ ನಟಿ ರಮ್ಯಕೃಷ್ಣನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸೌಂದರ್ಯ ಮುಖದ ಮೇಲೆ ಕಾಲಿಡುವ ದೃಶ್ಯದಲ್ಲಿ ಅಭಿನಯಿಸಲು ಬಹಳ ಕಷ್ಟ ಪಟ್ಟಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

ಸೌಂದರ್ಯ, ರಮ್ಯಕೃಷ್ಣನ್​

By

Published : Jun 17, 2019, 3:38 PM IST

ರಮ್ಯಕೃಷ್ಣನ್​​​​ ಹೆಸರು ಕೇಳಿದೊಡನೆ ಕಣ್ಣ ಮುಂದೆ ಬರುವುದು 'ಬಾಹುಬಲಿ' ಚಿತ್ರದ ಶಿವಗಾಮಿ ಪಾತ್ರ. ಆ ಪಾತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ರಮ್ಯಕೃಷ್ಣ ಹೆಸರಾದ್ರು. ಅದೊಂದೇ ಪಾತ್ರವಲ್ಲ ಪ್ರತಿಯೊಂದು ಪಾತ್ರಕ್ಕೂ ಹೇಳಿ ಮಾಡಿಸಿದಂತ ಸುಂದರ ಮುಖ ಅವರದ್ದು.

'ನರಸಿಂಹ' ಚಿತ್ರದ ದೃಶ್ಯ

ರಜನೀಕಾಂತ್, ಸೌಂದರ್ಯ ಜೊತೆ ನಟಿಸಿದ್ದ 'ನರಸಿಂಹ' ಚಿತ್ರದ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ರಮ್ಯಕೃಷ್ಣ ಮಾತನಾಡಿದ್ದಾರೆ. ಆ ಸಿನಿಮಾದಲ್ಲಿ ರಮ್ಯಕೃಷ್ಣ ಅವರದ್ದು ದುರಹಂಕಾರಿ ಸ್ವಭಾವದ ಪಾತ್ರ. ದೃಶ್ಯವೊಂದರಲ್ಲಿ ಸೌಂದರ್ಯ ಅವರು ರಮ್ಯಕೃಷ್ಣ ಕಾಲು ಒತ್ತುವಾಗ ಅವರನ್ನು ಮತ್ತಷ್ಟು ಅವಮಾನಿಸಲು ತಮ್ಮ ಕಾಲಿನಿಂದ ಅವರ ಕೆನ್ನೆಗೆ ಒದೆಯುವ ನೀಲಾಂಬರಿ ಎಂಬ ಪಾತ್ರ ಅದು. ಒಂದು ವೇಳೆ ನಿರ್ದೇಶಕ ಕೆ.ಎಸ್​.ರವಿಕುಮಾರ್ ನನ್ನ ಬಳಿ ಬಂದು ವಸುಂಧರಾ ( ಸೌಂದರ್ಯ) ಪಾತ್ರ ಮಾಡುವಿರಾ.. ನೀಲಾಂಬರಿ ( ರಮ್ಯಕೃಷ್ಣನ್​​) ಪಾತ್ರ ಮಾಡುವಿರಾ ಎಂದು ಕೇಳಿದ್ದರೆ ನಾನು ಸೌಂದರ್ಯ ಮಾಡಿದ್ದ ಪಾತ್ರವನ್ನೇ ಆರಿಸಿಕೊಳ್ಳುತ್ತಿದ್ದೆ. ಆದರೆ, ಅವರು ನನಗೆ ಆ ಆಯ್ಕೆ ನೀಡಲಿಲ್ಲ.

ಆ ದಿನ ಸೌಂದರ್ಯ ಅವರ ಮುಖದ ಬಳಿ ಕಾಲು ಇಟ್ಟ ದೃಶ್ಯಕ್ಕಾಗಿ ನಾನು ಬಹಳ ಕಷ್ಟಪಟ್ಟೆ. ನಾನು ಅಭಿನಯಿಸುತ್ತಿದ್ದೇನೆ ಎಂದು ತಿಳಿದರೂ ಕೂಡಾ ಆ ದೃಶ್ಯ ಮಾಡಲು ಬಹಳ ಬೇಸರವಾಯಿತು. ಆದರೆ, ಆ ಪಾತ್ರಕ್ಕೆ ಒಪ್ಪಿಕೊಂಡ ಮೇಲೆ ಆ ದೃಶ್ಯ ನಿಭಾಯಿಸದೇ ವಿಧಿ ಇರಲಿಲ್ಲ. ನಾವು ಎಷ್ಟೇ ದೊಡ್ಡ ನಟಿಯರಾದರೂ ಹೀಗೆ ಕೆಲವೊಂದು ದೃಶ್ಯಗಳಲ್ಲಿ ಅಭಿನಯಿಸಲು ಬಹಳ ಕಷ್ಟವಾಗುತ್ತದೆ ಎಂದು ರಮ್ಯಕೃಷ್ಣನ್ ಹೇಳಿಕೊಂಡಿದ್ದಾರೆ. 1999 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ತಮಿಳಿನಲ್ಲಿ 'ಪಡಿಯಪ್ಪ' ತೆಲುಗಿನಲ್ಲಿ 'ನರಸಿಂಹ' ಹೆಸರಲ್ಲಿ ಸಿನಿಮಾ ಏಕಕಾಲಕ್ಕೆ ಬಿಡುಗಡೆಯಾಗಿತ್ತು.

For All Latest Updates

TAGGED:

ABOUT THE AUTHOR

...view details