ಕರ್ನಾಟಕ

karnataka

ಆಸ್ಪತ್ರೆಯಿಂದ ನಾಳೆ ರಜಿನಿಕಾಂತ್​​ ಡಿಸ್ಚಾರ್ಜ್​ ಸಾಧ್ಯತೆ: ವೈದ್ಯರು ಹೇಳೋದಿಷ್ಟು

ತಮಿಳು ನಟ ರಜಿನಿಕಾಂತ್ ಆರೋಗ್ಯ ಸ್ಥಿರವಾಗಿದ್ದು, ನಾಳೆ ಡಿಸ್ಚಾರ್ಜ್​ ಮಾಡುವ ಸಾಧ್ಯತೆ ಇದೆ ಎಂದು ಹೈದರಾಬಾದ್​​ನ ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

By

Published : Dec 26, 2020, 6:51 PM IST

Published : Dec 26, 2020, 6:51 PM IST

ಆಸ್ಪತ್ರೆಯಿಂದ ನಾಳೆ ರಜಿನಿಕಾಂತ್​​ ಡಿಸ್ಚಾರ್ಜ್​ ಸಾಧ್ಯತೆ
ಆಸ್ಪತ್ರೆಯಿಂದ ನಾಳೆ ರಜಿನಿಕಾಂತ್​​ ಡಿಸ್ಚಾರ್ಜ್​ ಸಾಧ್ಯತೆ

ರಕ್ತದೊತ್ತಡ ಸಮಸ್ಯೆಯಿಂದ ನಿನ್ನೆ ಹೈದರಾಬಾದ್​ನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ತಮಿಳು ನಟ ರಜಿನಿಕಾಂತ್ ಆರೋಗ್ಯ ಸ್ಥಿರವಾಗಿದ್ದು ನಾಳೆ ರಿಸ್ಚಾರ್ಜ್​ ಮಾಡುವ ಸಾಧ್ಯತೆ ಇದೆ ಎಂದು ಹೈದ್ರಾಬಾದ್​​ನ ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರ ತಂಡ, ಹಲವು ವೈದ್ಯಕೀಯ ತಪಾಸಣೆಗಳನ್ನು ಮಾಡಿದ್ದೇವೆ. ಆತಂಕ ಪಡುವಂತಹದ್ದೇನು ಆಗಿಲ್ಲ. ಇನ್ನು ಉಳಿದ ತಪಾಣೆ ಮತ್ತು ರಾತ್ರಿಯಿಡೀ ಅವರ ರಕ್ತದೊತ್ತಡ ಹೇಗಿರುತ್ತದೆ ಎಂಬುದನ್ನ ಗಮನಿಸಿ ನಾಳೆ ಮತ್ತೊಮ್ಮೆ ಪರೀಕ್ಷೆ ನಡೆಸಿದ ಬಳಿಕ ಡಿಸ್ಚಾರ್ಜ್​ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಹೈದರಾಬಾದ್​ನಲ್ಲಿ ರಜಿನಿಕಾಂತ್ ಅಭಿನಯದ 'ಅಣ್ಣಾತೆ' ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಕಳೆದ 10 ದಿನಗಳಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿದ್ದು ಕೂಡಲೇ ಚಿತ್ರತಂಡ ರಜಿನಿ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಿತ್ತು. ನಿನ್ನೆಯಿಂದ ಅವರು ಅಪೋಲೋ ಆಸ್ಪತ್ರೆ ನಿಗಾದಲ್ಲಿದ್ದಾರೆ.

ABOUT THE AUTHOR

...view details