ಕರ್ನಾಟಕ

karnataka

ETV Bharat / sitara

ರಾಜಕೀಯದಿಂದ ರಜಿನಿ ದೂರ ಎಂಬ ವದಂತಿ: ವೈರಲ್​ ಆದ ಪತ್ರದ ಕುರಿತು ಸೂಪರ್​ ಸ್ಟಾರ್​ ಸ್ಪಷ್ಟನೆ - ರಜಿನಿಕಾಂತ್​​ ಸುದ್ದಿ

ರಜನಿಕಾಂತ್ ರಾಜಕೀಯ ಪ್ರವೇಶ ಮಾಡುತ್ತಿಲ್ಲ. ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ರಾಜಕೀಯದಿಂದ ಹೊರ ಉಳಿಯಲು ನಿರ್ಧರಿಸಿದ್ದಾರೆ ಎಂದು ಬರೆಯಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡ್ತಿದೆ. ಈ ಕುರಿತಂತೆ ರಜನಿ ಸ್ಪಷ್ಟನೆ ನೀಡಿರುವ ರಜನಿ, ಅದು ನಾನು ಬರೆದಿರುವ ಪತ್ರ ಅಲ್ಲ ಎಂದಿದ್ದಾರೆ.

Rajini Rethinking Political Entry? Says Will Decide Way Ahead Soon
ರಾಕೀಯದಿಂದ ರಜಿನಿ ಗುಡ್​​ ಬೈ : ವೈರಲ್​ ಆಯ್ತು ಆ ಪತ್ರ!

By

Published : Oct 29, 2020, 5:02 PM IST

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಜಿನಿಕಾಂತ್​ ಸ್ಪರ್ಧಿಸುತ್ತಾರೆ ಎಂಬ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಅಲ್ಲದೆ ಇತ್ತೀಚೆಗೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ರಜಿನಿ ಮಕ್ಕಳ ಮಂದ್ರಮ್​​ ಪಕ್ಷದ ಜೊತೆ ಚರ್ಚಿಸಿದ್ದರು. ಆದ್ರೀಗ ರಜಿನಿಕಾಂತ್​​ ರಾಜಕೀಯಕ್ಕೆ ಗುಡ್​ ಬೈ ಹೇಳುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಪತ್ರದಲ್ಲಿ, ರಜನಿಕಾಂತ್ ರಾಜಕೀಯ ಪ್ರವೇಶ ಮಾಡುತ್ತಿಲ್ಲ. ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ರಾಜಕೀಯದಿಂದ ಹೊರ ಉಳಿಯಲು ನಿರ್ಧರಿಸಿದ್ದಾರೆ ಎಂದು ಬರೆಯಲಾಗಿದೆ. ಈ ಪತ್ರ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಈ ವಿಚಾರವಾಗಿ ಟ್ವಿಟ್ಟರ್​​​ನಲ್ಲಿ ಸ್ಪಷ್ಟನೆ ನೀಡಿರುವ ರಜಿನಿಕಾಂತ್​​, 'ನನ್ನ ಹೇಳಿಕೆಯಂತೆ ಕಂಡುಬರುವ ಪತ್ರವನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗುತ್ತಿದೆ. ಅದು ನಾನು ಬರೆದ ಪತ್ರವಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದ್ರೆ ನನ್ನ ಆರೋಗ್ಯದ ಬಗ್ಗೆ ಹೇಳಿರುವುದು ನಿಜ ಎಂದಿದ್ದಾರೆ.

ತಮ್ಮ ರಾಜಕೀಯ ನಿಲುವುಗಳ ಬಗ್ಗೆ ರಜಿನಿ ಮಕ್ಕಳ್ ಮಂದ್ರಮ್​​​ ಪಕ್ಷದ ಸದಸ್ಯರೊಂದಿಗೆ ಚರ್ಚಿಸಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ABOUT THE AUTHOR

...view details