ಕರ್ನಾಟಕ

karnataka

ETV Bharat / sitara

'ರಾಜತಂತ್ರ' ಚಿತ್ರಕ್ಕೆ ಅಕ್ಟೋಬರ್ 4 ರಂದು ಅದ್ಧೂರಿ ಮಹೂರ್ತ - ಪಿವಿಆರ್​​​ ಸ್ವಾಮಿ ನಿರ್ದೇಶನದ ರಾಜತಂತ್ರ

ಪಿ.ವಿ.ಆರ್. ಸ್ವಾಮಿ ನಿರ್ದೇಶನದಲ್ಲಿ ರಾಘವೇಂದ್ರ ರಾಜ್​ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ 'ರಾಜತಂತ್ರ' ಚಿತ್ರದ ಮುಹೂರ್ತ ಅಕ್ಟೋಬರ್ 4 ಭಾನುವಾರದಂದು ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಜರುಗಲಿದೆ.

Rajatantra movie muhurta
'ರಾಜತಂತ್ರ'

By

Published : Oct 3, 2020, 12:32 PM IST

ರಾಘವೇಂದ್ರ ರಾಜ್​ಕುಮಾರ್ ಅಭಿನಯದ 'ರಾಜತಂತ್ರ' ಸಿನಿಮಾ ಮುಹೂರ್ತ ಅಕ್ಟೋಬರ್​ 4 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ. ರಾಘವೇಂದ್ರ ರಾಜ್​ಕುಮಾರ್ ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ರಾಜತಂತ್ರ' ಮುಹೂರ್ತದ ಆಹ್ವಾನ ಪತ್ರಿಕೆ

ವಿಶ್ವಮ್ ಡಿಜಿಟಲ್ ಮೀಡಿಯಾ ಬ್ಯಾನರ್ ಅಡಿ ತಯಾರಾಗುತ್ತಿರುವ ಚಿತ್ರದ ಮಹೂರ್ತ ಸಮಾರಂಭಕ್ಕೆ ಡಾ. ಶಿವರಾಜ್​ಕುಮಾರ್ , ಪದ್ಮಶ್ರೀ ಪುರಸ್ಕೃತ ಸಾಹಿತಿ ದೊಡ್ಡರಂಗೇಗೌಡ, ನಾದಬ್ರಹ್ಮ ಹಂಸಲೇಖ, ಫಿಲ್ಮ್​ ಚೇಂಬರ್ ಅಧ್ಯಕ್ಷ ಜೈರಾಜ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹಾಗೂ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ. ಕೋವಿಡ್​​-19 ಸೂಚನೆಗಳನ್ನು ಸಮಾರಂಭದಲ್ಲಿ ಪಾಲಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಎಂದು ಆಹ್ವಾನ ಪತ್ರಿಕೆಯಲ್ಲಿ ಕೂಡಾ ಮನವಿ ಮಾಡಲಾಗಿದೆ.

ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಲಿರುವ ಶಿವರಾಜ್​​​ಕುಮಾರ್

ಹಿರಿಯ ನಟ ಶ್ರೀನಿವಾಸಮೂರ್ತಿ, ದೊಡ್ಡಣ್ಣ, ಭವ್ಯ, ಶಂಕರ್ ಅಶ್ವತ್ಥ್​​​, ನೀನಾಸಮ್ ಅಶ್ವತ್ಥ್​​​, ಎಂ.ಡಿ.ಕೌಶಿಕ್, ಮುನಿರಾಜು, ವೆಂಕಟೇಶ್ ಪ್ರಸಾದ್ ಹಾಗೂ ಇನ್ನಿತರರು 'ರಾಜತಂತ್ರ' ಚಿತ್ರದಲ್ಲಿ ನಟಿಸಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಜೆ.ಎಂ. ಪ್ರಹ್ಲಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಪಿ.ವಿ.ಆರ್. ಸ್ವಾಮಿ ಚಿತ್ರದ ಛಾಯಾಗ್ರಹಣದ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀ ಸುರೇಶ್ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ನಾಗೇಶ್ ಸಂಕಲನ ಇದೆ. ಜೆ.ಎಂ. ಪ್ರಹ್ಲಾದ್​​​, ವಿಜಯ್ ಭಾಸ್ಕರ್ ಹಾಗೂ ಶ್ರೀಧರ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ರಾಜತಂತ್ರ' ಚಿತ್ರದ ತಾರಾಬಳಗ

ABOUT THE AUTHOR

...view details