ಕರ್ನಾಟಕ

karnataka

ETV Bharat / sitara

ಹಾಡು ಕರ್ನಾಟಕದಲ್ಲಿ‌ ಕಮಾಲ್​​​ ಮಾಡ್ತಿದ್ದಾರೆ ರಘು ದೀಕ್ಷಿತ್ - ಹಾಡು ಕರ್ನಾಟಕ ಕಾರ್ಯಕ್ರಮ

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಹಾಡು ಕರ್ನಾಟಕ ಕಾರ್ಯಕ್ರಮ ಇದೀಗ ಮೆಚ್ಚುಗೆ ಗಳಿಸಿದ್ದು, ಕಾರ್ಯಕ್ರಮದ ತೀರ್ಪುಗಾರರಾಗಿರುವ ರಘು ದೀಕ್ಷಿತ್​ ಕೂಡ ಶೋನಲ್ಲಿ ಮಿಂಚುತ್ತಿದ್ದಾರೆ.

raghu dikshit in hadu karnataka
ಹಾಡು ಕರ್ನಾಟಕದಲ್ಲಿ‌ ಕಮಾಲ್​​​ ಮಾಡ್ತಿದ್ದಾರೆ ರಘು ದೀಕ್ಷಿತ್

By

Published : Mar 17, 2020, 4:23 PM IST

ಸದ್ಯ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಹಾಡು ಕರ್ನಾಟಕ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ತೀರ್ಪುಗಾರರಾಗಿ​​ ಕಮಾಲ್​ ಮಾಡುತ್ತಿದ್ದಾರೆ.

ರಘು ದೀಕ್ಷಿತ್​​

ಸಂಗೀತ ನಿರ್ದೇಶಕ, ಗೀತ ರಚನೆಗಾರ, ಗಾಯಕರಾಗಿ ಗುರುತಿಸಿಕೊಂಡಿರುವ ರಘು ದೀಕ್ಷಿತ್, ಇದೇ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಡು ಕರ್ನಾಟಕ ರಿಯಾಲಿಟಿ ಶೋವಿನ ತೀರ್ಪುಗಾರರಾಗಿ ಕಿರುತೆರೆಗೆ ಬಂದಿರುವ ರಘು ದೀಕ್ಷಿತ್​​​ಗೆ ಕಿರುತೆರೆ ಹೊಸದಾದ ಅನುಭವ.

ರಘು ದೀಕ್ಷಿತ್​​

'ಜನರ ಮನೆ ಮಾತ್ರವಲ್ಲ ಮನವನ್ನು ಕೂಡಾ ಬಹುಬೇಗನೇ ಮುಟ್ಟಲು ಕಿರುತೆರೆಯಿಂದ ಮಾತ್ರ ಸಾಧ್ಯ. ಅಂತಹ ಮಾಧ್ಯಮದಲ್ಲಿ ನನಗೊಂದು ಅವಕಾಶ ಸಿಕ್ಕಿರುವುದಕ್ಕೆ ಬಹಳ ಖುಷಿಯಾಗುತ್ತಿದೆ' ಎಂದು ಹೇಳುವ ರಘುದೀಕ್ಷಿತ್ ಕಿರುತೆರೆಯಿಂದ ಇಂದು ಅದೆಷ್ಟೋ ಪ್ರತಿಭೆಗಳು ಹೊರ ಜಗತ್ತಿಗೆ ಪರಿಚಿತರಾಗಿದ್ದಾರೆ. ಎಲೆ ಮರೆ ಕಾಯಿಯಂತಿರುವ ಅವರ ಪ್ರತಿಭೆ ನಾಡಿನಾದ್ಯಂತ ಪಸರಿಸಿದ್ದೇ ಕಿರುತೆರೆಯಿಂದ. ಸಿಕ್ಕ ಅವಕಾಶ, ವೇದಿಕೆಯನ್ನು ಸರಿಯಾಗಿ ಬಳಸಿದರೆ ಭವಿಷ್ಯ ರೂಪಿಸಲು ಕಷ್ಟವಾಗದು ಎನ್ನುತ್ತಾರೆ.

ರಘು ದೀಕ್ಷಿತ್​​
ರಘು ದೀಕ್ಷಿತ್​​

ಸಂಗೀತ ನಿರ್ದೇಶಕ, ಗಾಯಕನ ಹೊರತಾಗಿ ಆತ ಒಬ್ಬ ಅದ್ಭುತ ನಟನೂ ಹೌದು. ಪ್ರದೇಶ ಸಮಾಚಾರ, ಯಾನ ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ರಘು ದೀಕ್ಷಿತ್ ಒಬಿರಾಯನ ಕಥೆಯಲ್ಲಿ ನಟಿಸಲಿದ್ದಾರೆ.

ರಘು ದೀಕ್ಷಿತ್​​
ರಘುದೀಕ್ಷಿತ್​​ ಮತ್ತು ಚಂದನಾ

ABOUT THE AUTHOR

...view details