ಕರ್ನಾಟಕಕ್ಕಾಗಿ, ಕನ್ನಡ ಭಾಷೆಗಾಗಿ ನಡೆದ ಚಳವಳಿಗಳ ಪೈಕಿ 1980ರ ಸಮಯದಲ್ಲಿ ನಡೆದ ಗೋಕಾಕ್ ಚಳವಳಿ ಬಹಳ ವಿಶೇಷ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನ ಕಡ್ಡಾಯ ಮಾಡಬೇಕೆಂದು ಸಾಹಿತಿಗಳು, ಕನ್ನಡ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಈ ಚಳವಳಿಗೆ ಅಣ್ಣಾವ್ರು ಎಂಟ್ರಿಕೊಟ್ಟ ಮೇಲೆ ಆ ಚಳವಳಿಯ ಶಕ್ತಿಯೇ ಬೇರೆಯಾಯಿತು.
ಇನ್ನು, ಈ ಸಂದರ್ಭದಲ್ಲಿ ಅಣ್ಣಾವ್ರ ಮಕ್ಕಳು ಹೇಗಿದ್ರು ಎಂಬ ಕುತೂಹಲ ರಾಜ್ ಕುಮಾರ್ ಫ್ಯಾಮಿಲಿಯ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. 1980ರ ಸುಮಾರಿಗೆ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಯಾರೂ ಇನ್ನೂ ನಾಯಕ ನಟರಾಗಿ ಕಾಣಿಸಿರಲಿಲ್ಲ.