ಕರ್ನಾಟಕ

karnataka

ETV Bharat / sitara

ನನಗೆ ವಾರ್ನಿಂಗ್ ಕೊಡೊ ತಾಕತ್ ಯಾರಿಗೂ ಇಲ್ಲ: ನಿರ್ಮಾಪಕ ಉಮಾಪತಿ - Producer Umapati Shrinivas latest news

ದರ್ಶನ್ ವಾರ್ನಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ನಿರ್ಮಾಪಕ ಉಮಾಪತಿ, ನನಗೆ ವಾರ್ನಿಂಗ್ ಕೊಡೊ ತಾಕತ್ ಯಾರಿಗೂ ಇಲ್ಲ. ನನಗೆ ಯಾರ ಆಸ್ತಿ ಹೊಡಿಯುವ ಅವಶ್ಯಕತೆ ಇಲ್ಲ. ನನಗೂ ಭಗವಂತ ಚೆನ್ನಾಗಿ ಕೊಟ್ಟಿದ್ದಾರೆ ಎಂದರು.

ನಿರ್ಮಾಪಕ ಉಮಾಪತಿ
ನಿರ್ಮಾಪಕ ಉಮಾಪತಿ

By

Published : Jul 12, 2021, 8:40 PM IST

Updated : Jul 12, 2021, 9:25 PM IST

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಹಲವು ರೂಪ ಪಡೆಯುತ್ತಿದೆ‌. ಬ್ಯಾಂಕ್ ಮ್ಯಾನೇಜರ್ ಎಂದು ಸುಳ್ಳು ಹೇಳಿಕೊಂಡು ಬಂದಿದ್ದ, ಅರುಣಾ ಕುಮಾರಿ ಎಂಬ ಮಹಿಳೆಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೆಸರೂ ಕೇಳಿಬಂದಿದೆ.

ನಿರ್ಮಾಪಕ ಉಮಾಪತಿ

ಈ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗು ದರ್ಶನ್ ನಡುವೆ ಬಿರುಕು ಬಿಟ್ಟಿದೆ ಎಂಬ ಸುದ್ದಿ ಕೂಡ ಹಬ್ಬುತ್ತಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವಿಚಾರಗಳ ಮಾಹಿತಿ ನೀಡಿದ್ದಾರೆ.

ನನ್ನ ಮೇಲೆ ಕೇಳಿ ಬರುತ್ತಿರುವ ಆರೋಪ ಸುಳ್ಳು:

ಏಪ್ರಿಲ್​ನಲ್ಲಿ ಅರುಣಾ ಕುಮಾರಿ ಆ್ಯಕ್ಷನ್​ನಲ್ಲಿ‌ ಒಂದು ಪ್ರಾಪರ್ಟಿ ಖರೀದಿ ಬಗ್ಗೆ ಹೇಳಿದ್ದರು. ಆ‌ ವಿಚಾರಕ್ಕೆ ನಾನು ಅವರ ಬಳಿ‌ ಫೋನ್‌ ಹಾಗು ವಾಟ್ಸ್​ಆ್ಯಪ್‌ ಮೂಲಕ ಮಾತನಾಡಿದ್ದೆ. ಇದಾದ ಬಳಿಕ ಜೂನ್ 17 ರಂದು ಅರುಣಾ ಕುಮಾರಿ ನನ್ನ ಕಚೇರಿಗೆ ಬಂದರು. ಜೊತೆಗೆ ರಾಕೇಶ್ ಪಾಪಣ್ಣ ಮತ್ತು ಹರ್ಷ ಅವರ ಹೆಸರು ಪ್ರಸ್ತಾಪ ಮಾಡಿದರು. ಬಳಿಕ ಲೋನ್​ಗಾಗಿ‌ ಪ್ರಯತ್ನ ಪಡುತ್ತಿದ್ದಾರೆ. ಕೆಲ ದಾಖಲಾತಿಗಳು ದರ್ಶನ್ ಅವರಿಗು ಸಂಭದಿಸಿವೆ ಎಂದು ತಿಳಿಸಿದರು. ಆಗ ನಾನು ದರ್ಶನ್ ಅವರಿಗೆ ಕರೆ ಮಾಡಿ ತಿಳಿಸಿದೆ ಎಂದು ಹೇಳಿದರು.

ನಿರ್ಮಾಪಕ ಉಮಾಪತಿ

ಆಗ ಅವರು ಸಹ ಅನುಮಾನ ವ್ಯಕ್ತಪಡಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣಾ ಕುಮಾರಿಯ ವಿರುದ್ಧ ನಾನು ಜೂನ್ 17 ರಂದು ದೂರು ನೀಡಿದ್ದೆ. ಆಗ ಪೊಲೀಸರು ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಅರುಣಾ ಕುಮಾರಿ, ಹರ್ಷ ಮತ್ತು ರಾಜೇಶ್ ಪಾಪಣ್ಣ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಇನ್ನು ಮೈಸೂರಿನಲ್ಲಿ‌ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದು ಸಣ್ಣ ವಿಚಾರ ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ವಿಚಾರಣೆ ವೇಳೆ ಪೊಲೀಸರು ತಿಳಿಸಿದ್ದರು. ನನ್ನ ಮೇಲೆ ಕೇಳಿ ಬರುತ್ತಿರುವ ಆರೋಪ ಸುಳ್ಳು. ಆದರೆ ನನ್ನ ಮೇಲೆ‌ ಆರೋಪ ಕೇಳಿ ಬಂದ ಹಿನ್ನೆಲೆ ನಾನು ಈ ವಿಚಾರವನ್ನು ಮುಂದುವರೆಸುವೆ‌ ಎಂದು ಪೊಲೀಸರಿಗೆ ತಿಳಿಸಿದ್ದೇನೆ. ತನಿಖೆಯ ನಂತರ ಸತ್ಯಾಸತ್ಯತೆ ಹೊರ ಬೀಳಲಿ ಎಂದರು.

ನಿರ್ಮಾಪಕ ಉಮಾಪತಿ

ನನಗೆ ವಾರ್ನಿಂಗ್ ಕೊಡೊ ತಾಕತ್ ಯಾರಿಗೂ ಇಲ್ಲ:

ದರ್ಶನ್ ವಾರ್ನಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ವಾರ್ನಿಂಗ್ ಕೊಡೊ ತಾಕತ್ ಯಾರಿಗೂ ಇಲ್ಲ. ನನಗೆ ಯಾರ ಆಸ್ತಿ ಹೊಡಿಯುವ ಅವಶ್ಯಕತೆ ಇಲ್ಲ. ನನಗೂ ಭಗವಂತ ಚೆನ್ನಾಗಿ ಕೊಟ್ಟಿದ್ದಾರೆ. ನಾನು ಯಾರ ಆಸ್ತಿಗೆ ಆಸೆ ಪಡುವುದಿಲ್ಲ. ನಾನೇ ಬೇಕಾದಷ್ಟು ಆಸ್ತಿಯನ್ನು ದಾನ ಮಾಡಿದ್ದೇನೆ ಎಂದು ಖಾರವಾಗಿಯೇ ಉತ್ತರಿಸಿದರು.

Last Updated : Jul 12, 2021, 9:25 PM IST

For All Latest Updates

TAGGED:

ABOUT THE AUTHOR

...view details