ಕರ್ನಾಟಕ

karnataka

ETV Bharat / sitara

ಸದ್ದಿಲ್ಲದೆ ಸಾವಯವ ಕ್ರಾಂತಿ ಮಾಡ್ತಿದ್ದಾರೆ ಪೈಲ್ವಾನ್​ ನಿರ್ದೇಶಕ ಕೃಷ್ಣಾ ಪತ್ನಿ - ನಿರ್ಮಾಪಕಿ ಸ್ವಪ್ನಾ

ಹೆಬ್ಬುಲಿ, ಗಜಕೇಸರಿ ಸೇರಿದಂತೆ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಕೃಷ್ಣ ಅವರ ಮಡದಿ, ಕಿರುತೆರೆ ನಟಿ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ರೈತ ಆಗಿದ್ದಾರೆ.

ಸ್ವಪ್ನಾ

By

Published : Aug 3, 2019, 3:02 PM IST

ಸಿಲಿಕಾನ್ ಸಿಟಿ ಬೆಂಗಳೂರು ಈಗ ಕಾಂಕ್ರೀಟ್ ಕಾಡಾಗಿ ಪರಿಣಮಿಸುತ್ತಿದೆ. ಗಿಡ-ಮರಗಳು, ತೋಟಗಳು ಮಾಯವಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಕನ್ನಡ ಚಿತ್ರರಂಗದ ಸಿನಿಮಾ ನಿರ್ಮಾಪಕಿ ಸ್ವಪ್ನಾ ಕೃಷ್ಣ ಚಿಕ್ಕದಾಗಿ ಚೊಕ್ಕದಾದ ಗಾರ್ಡ್​​ನಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.

ನಾಗರಭಾವಿಯಲ್ಲಿ ತಮ್ಮ ಮನೆಯ ಕಾಂಪೌಂಡ್ ಒಳಗೆ ಹಾಗೂ ಟೆರೆಸ್​ ಮೇಲೆ ಕೃಷ್ಣ ದಂಪತಿ ಸಣ್ಣ ಪ್ರಮಾಣದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ತರಕಾರಿ, ಸೊಪ್ಪು, ಹಣ್ಣು ಹಾಗೂ ಹೂ ಗಿಡಗಳನ್ನು ನೆಟ್ಟು, ಪ್ರೀತಿಯಿಂದ ಜೋಪಾನ ಮಾಡುತ್ತಿದ್ದಾರೆ. ಈ ಗಿಡಗಳಿಗೆ ಸಾವಯವ ಗೊಬ್ಬರವನ್ನು ಬಳಸುತ್ತಿದ್ದಾರೆ. ನಿತ್ಯ ಬಳಕೆಯ ನೀರನ್ನೇ ರಿಸೈಕಲ್ ಮಾಡಿ ತಮ್ಮ ಗಾರ್ಡ್​​ನಲ್ಲಿರುವ ಕೈತೋಟಕ್ಕೆ ಬಳಸುತ್ತಾರೆ. ಮಳೆ ನೀರು ಕೋಯ್ಲು ಪದ್ದತಿ ಅಳವಡಿಸಿ ಅಂತರ್​ಜಲ ವೃದ್ಧಿಗೆ ಪ್ರಾಶಸ್ತ್ಯ ನೀಡಿದ್ದಾರೆ.

ಸಾವಯವ ಕೃಷಿಯತ್ತ ನಿರ್ಮಾಪಕಿ ಸ್ವಪ್ನಾ

ನಿತ್ಯದ ಊಟಕ್ಕೆ ತಾವೇ ಬೆಳೆದ ಮೂಲಂಗಿ,ಹಾಗಲಕಾಯಿ, ಅವರೆಕಾಯಿ ಮೆಣಸಿನಕಾಯಿ ಸೇರಿದಂತೆ ಹಲವು ಬಗೆಯ ತರಕಾರಿ ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಒಳ್ಳೆಯ ತರಕಾರಿ ಸಿಗುವುದಿಲ್ಲ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ನಾವೇ ಬೆಳೆಯುತ್ತೇವೆ. ಮುಂದಿನ ದಿನಗಳಲ್ಲಿ ಹಸುಗಳನ್ನು ಸಾಕುವ ಯೋಚನೆ ಇದೇ ಎನ್ನುತ್ತಾರೆ ಸ್ವಪ್ನಾ ಕೃಷ್ಣ.

ಸಿನಿಮಾ ನಿರ್ಮಾಣ, ಧಾರವಾಹಿಗಳಲ್ಲಿ ನಟನೆಯಲ್ಲಿ ಬ್ಯುಸಿಯಿದ್ರೂ ಕೂಡ ಸ್ವಲ್ಪ ಟೈಮ್ ಮಾಡ್ಕೊಂಡು ಅಂದದ ಗಾರ್ಡ್​​ನಲ್ಲಿ ಸಮೃದ್ಧವಾದ ಬೆಳೆ ಬೆಳೆಯುತ್ತಿದ್ದಾರೆ ಈ ಸೆಲೆಬ್ರಿಟಿ ಜೋಡಿ.

ABOUT THE AUTHOR

...view details