ಕರ್ನಾಟಕ

karnataka

By

Published : Jun 12, 2020, 12:13 PM IST

ETV Bharat / sitara

ಎರಡನೇ ಬಾರಿ ಎಂ. ಕರುಣಾನಿಧಿ ಪಾತ್ರಕ್ಕಾಗಿ ಬಣ್ಣ ಹಚ್ಚಿದ ಪ್ರಕಾಶ್ ರಾಜ್

ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರ ಬಯೋಪಿಕ್ 'ತಲೈವಿ' ಚಿತ್ರದಲ್ಲಿ ಪ್ರಕಾಶ್ ರಾಜ್ ಎಂ. ಕರುಣಾನಿಧಿ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕೂ ಮುನ್ನ 1996 ರಲ್ಲಿ ಬಿಡುಗಡೆಯಾದ ಮಣಿರತ್ನಂ ನಿರ್ದೇಶನದ 'ಇರುವರ್' ಚಿತ್ರದಲ್ಲಿ ಕೂಡಾ ಪ್ರಕಾಶ್ ರಾಜ್ ಕರುಣಾನಿಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

Prakash raj two times acted as Karunanidhi
ಪ್ರಕಾಶ್ ರಾಜ್

1996 ರಲ್ಲಿ ಬಿಡುಗಡೆಯಾದ 'ಇರುವರ್' ತಮಿಳು ಸಿನಿಮಾದಲ್ಲಿ ಪ್ರಕಾಶ್ ರಾಜ್ ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಎಂ. ಕರುಣಾನಿಧಿ ಪಾತ್ರ ಮಾಡಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದರು. ಇದೀಗ ಅವರು ಮತ್ತೊಂದು ಸಿನಿಮಾದಲ್ಲಿ 2ನೇ ಬಾರಿಗೆ ಕರುಣಾನಿಧಿ ಪಾತ್ರ ನಿಭಾಯಿಸಿದ್ದಾರೆ.

'ತಲೈವಿ' ಚಿತ್ರದಲ್ಲಿ ಕಂಗನಾ

ಕಂಗನಾ ರಣಾವತ್ ಜಯಲಲಿತಾ ಪಾತ್ರ ನಿರ್ವಹಿಸಿರುವ 'ತಲೈವಿ' ಚಿತ್ರದಲ್ಲಿ ಪ್ರಕಾಶ್ ರಾಜ್​ ಮತ್ತೆ ಕರುಣಾನಿಧಿ ಪಾತ್ರ ನಿರ್ವಹಿಸಿದ್ದಾರೆ. 'ಇರುವರ್' ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸಿದ್ದು ಆ ಚಿತ್ರದಲ್ಲಿ ಜಯಲಲಿತಾ ಪಾತ್ರವನ್ನು ಐಶ್ವರ್ಯ ರೈ, ಎಂಜಿಆರ್ ಪಾತ್ರವನ್ನು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್​, ಎಂ. ಕರುಣಾನಿಧಿ ಪಾತ್ರವನ್ನು ಪ್ರಕಾಶ್ ರಾಜ್ ನಿಭಾಯಿಸಿದ್ದರು. ಆದರೆ ಈಗ 'ತಲೈವಿ' ಸಿನಿಮಾದಲ್ಲಿ ಜಯಲಲಿತಾ ಅವರನ್ನು ಹೈಲೈಟ್ ಮಾಡಲಾಗಿದೆ. ಇದು ಜಯಲಲಿತಾ ಅವರ ಬಯೋಪಿಕ್ ಚಿತ್ರ.

'ಇರುವರ್' ತಮಿಳು ಸಿನಿಮಾ

ಈ ಚಿತ್ರದಲ್ಲಿ 'ರೋಜಾ' ಖ್ಯಾತಿಯ ಅರವಿಂದ್ ಸ್ವಾಮಿ ಎಂಜಿಆರ್​ ಆಗಿ ನಟಿಸಿದ್ದಾರೆ. ಮಧು ಅವರು ಜಾನಕಿ ರಾಮಚಂದ್ರನ್ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ವಿಷ್ಣು ಇಂದೂರಿ ಹಾಗೂ ಶೈಲೇಶ್ ಸಿಂಗ್ ಬಂಡವಾಳ ಹೂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ನಟಿ ಜಯಲಲಿತಾ ಅವರ ಜೀವನದ ಸಾಹಸಗಾಥೆಯನ್ನು ಎ.ಎಲ್​. ವಿಜಯ್ ಕೇಂದ್ರೀಕರಿಸಿ ಹಿಂದಿ ಹಾಗೂ ತಮಿಳಿನಲ್ಲಿ ಸಿನಿಮಾ ನಿರ್ದೇಶಿಸಿದ್ದಾರೆ. ಆದರೆ ಇತ್ತೀಚೆಗೆ ಚೆನ್ನೈ ಹೈಕೋರ್ಟ್ ನೀಡಿದ ಜಯಲಲಿತಾ ಆಸ್ತಿ ತೀರ್ಪು ವಿಚಾರವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಲಿಲ್ಲ.

ಪ್ರಕಾಶ್ ರಾಜ್

ಒಟಿಟಿ ಪ್ಲಾಟ್​​ಫಾಮ್​​ ತಮಿಳು ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ದೊಡ್ಡ ಮೊತ್ತ ನೀಡಿ ಖರೀದಿಸಿದೆ ಎನ್ನಲಾಗಿದೆ. ತಮಿಳು ವರ್ಷನ್​​​​​​ ಅಮೆಜಾನ್ ಪ್ರೈಂ ಹಾಗೂ ಹಿಂದಿ ವರ್ಷನ್​ ನೆಟ್​​​​ಫ್ಲಿಕ್​​​​​​​​ನಲ್ಲಿ ಪ್ರಸಾರವಾಗಲಿದ್ದು 55 ಕೋಟಿ ರೂಪಾಯಿ ಮೊತ್ತಕ್ಕೆ ಸಿನಿಮಾ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details