ಉತ್ತಮ ಭಾವನಾತ್ಮಕ ಚಿತ್ರ ಹಾಗೂ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಅಚ್ಚುಕಟ್ಟಾಗಿ ಸಾರುವ ಕನ್ನಡ ಸಿನಿಮಾ ‘ರಾಮ ರಾಮ ರೇ’ ನಿರ್ದೇಶಿಸಿದ ಸತ್ಯ ಪ್ರಕಾಶ್ ಅವರ ಎರಡನೇ ಸಿನಿಮಾ ‘ಒಂದಲ್ಲಾ ಎರಡಲ್ಲಾ’ ಸಿನಿಮಾಕ್ಕೆ ತಡವಾಗಿಯಾದರೂ ಮೆಚ್ಚುಗೆ ದೊರೆಯುತ್ತಿದೆ.
ಮೆಲ್ಬೋರ್ನ್ ಚಿತ್ರೋತ್ಸವಕ್ಕೆ ಆಯ್ಕೆಯಾದ 'ಒಂದಲ್ಲಾ ಎರಡಲ್ಲಾ' - undefined
ಕಳೆದ ವರ್ಷ ಆಗಸ್ಟ್ನಲ್ಲಿ ಬಿಡುಗಡೆಯಾದ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಥಿಯೇಟರ್ನಲ್ಲಿ ಹೆಚ್ಚು ದಿನ ಇರದಿದ್ದರೂ ತಡವಾಗಿ ಮೆಚ್ಚುಗೆ ಗಳಿಸಿದೆ. ಅಲ್ಲದೆ ಮೆಲ್ಬೊರ್ನ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ.
![ಮೆಲ್ಬೋರ್ನ್ ಚಿತ್ರೋತ್ಸವಕ್ಕೆ ಆಯ್ಕೆಯಾದ 'ಒಂದಲ್ಲಾ ಎರಡಲ್ಲಾ'](https://etvbharatimages.akamaized.net/etvbharat/prod-images/768-512-3881286-thumbnail-3x2-ondalla.jpg)
‘ಒಂದಲ್ಲಾ ಎರಡಲ್ಲಾ’ ಸಿನಿಮಾಗೆ ಮಾಧ್ಯಮಗಳಲ್ಲಿ ಒಳ್ಳೆಯ ಪ್ರಶಂಸೆ ದೊರೆತರೂ ಚಿತ್ರಮಂದಿರದಲ್ಲಿ ಮಾತ್ರ ಹೆಚ್ಚು ದಿನಗಳು ಉಳಿಸಿಕೊಳ್ಳಲು ಸಾಧ್ಯವಾಗದೆ ಇದ್ದದ್ದಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಬೇಸರ ಇದೆ. ಆದರೆ ಈಗ ದೊರೆಯುತ್ತಿರುವ ಮೆಚ್ಚುಗೆಯಿಂದ ಕೊಂಚ ಸಮಾಧಾನ ಆಗಿದೆ. ಆಗಸ್ಟ್ 8 ರಿಂದ 15 ವರೆಗೆ ಮೆಲ್ಬೋರ್ನ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಭಾರತೀಯ ಸಿನಿಮಾಗಳ ಪ್ರದರ್ಶನ ವಿಭಾಗದಲ್ಲಿ ಈ ಸಿನಿಮಾ ಕೂಡಾ ಪ್ರದರ್ಶವಾಗಲಿದೆ.
ಮಾಸ್ಟರ್ ರೋಹಿತ್ ಪಾಂಡವಪುರ ಮತ್ತು ಹಸುವೊಂದರ ಸುತ್ತ ಸುತ್ತುವ ಕಥೆ ಇದು. ಪುಟ್ಟ ಬಾಲಕ ಸಮೀರ ಕಳೆದು ಹೋದ ಹಸುವನ್ನು ಹುಡುಕಿಕೊಂಡು ಹೋಗುವ ಅಂಶವನ್ನು ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕ ಡಿ. ಸತ್ಯಪ್ರಕಾಶ್ ಅಳವಡಿಸಿದ್ದರು. ಉಮಾಪತಿ ಈ ಹಿಂದೆ ‘ಹೆಬ್ಬುಲಿ’ ಸಿನಿಮಾ ನಿರ್ಮಿಸಿದ್ದರು. ಸದ್ಯಕ್ಕೆ ಅವರ ನಿರ್ಮಾಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಶೂಟಿಂಗ್ ನಡೆಯುತ್ತಿದೆ. ನಂತರ ಶ್ರೀಮುರಳಿ ಅಭಿನಯದಲ್ಲಿ ‘ಮದಗಜ’ ಆರಂಭವಾಗಲಿದೆ.