ಕರ್ನಾಟಕ

karnataka

ETV Bharat / sitara

ಮರುಬಳಕೆಯಾಗಿರುವ ದಿಗ್ಗಜ ನಟರ ಸಿನಿಮಾ ಶೀರ್ಷಿಕೆಗಳು ಇವು...!

ಚಂದನವನದಲ್ಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಚಿತ್ರಗಳಿಗೆ ಕೂಡಾ ನಿರ್ದೇಶಕರು ಹಳೆಯ ಚಿತ್ರಗಳ ಹೆಸರನ್ನು ಬಳಸುತ್ತಿದ್ದಾರೆ.

By

Published : Aug 5, 2020, 5:33 PM IST

Old movie names for New films
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ಕನ್ನಡ ಚಿತ್ರರಂಗದಲ್ಲಿ ದಿಗ್ಗಜ ನಟರು ಅಭಿನಯಿಸಿದ್ದ ಸಿನಿಮಾಗಳ ಹೆಸರನ್ನು ಮರುಬಳಕೆ ಮಾಡಿಕೊಳ್ಳುವುದು ಈಗ ಟ್ರೆಂಡ್ ಆಗಿದೆ. ಡಾ. ರಾಜ್​​ಕುಮಾರ್, ಡಾ. ವಿಷ್ಣುವರ್ಧನ್, ಶಂಕರ್ ನಾಗ್, ರೆಬಲ್​ ಸ್ಟಾರ್ ಅಂಬರೀಶ್​​​​​​​​ರಂಥ ಮಹಾನ್ ನಟರ ಸಿನಿಮಾಗಳ ಟೈಟಲನ್ನು ಹೊಸ ಸಿನಿಮಾಗಳಿಗೆ ಬಳಕೆ ಮಾಡಲಾಗಿದೆ.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

1974ರಲ್ಲಿ ತೆರೆ ಕಂಡ 'ಎರಡು ಕನಸು' ಡಾ. ರಾಜ್​​​​​​​​​​​​​​​ಕುಮಾರ್, ಮಂಜುಳಾ ಮತ್ತು ಕಲ್ಪನಾ ಅಭಿನಯದ ಸೂಪರ್ ಹಿಟ್ ಚಿತ್ರ. ಈ ಚಿತ್ರದ ಟೈಟಲ್ ಇಟ್ಟುಕೊಂಡು ವಿಜಯ ರಾಘವೇಂದ್ರ ಸಿನಿಮಾ ಮಾಡಿದ್ದರು. ಅಂದು ಎರಡು ಕನಸು ಸಿನಿಮಾ ಹಿಟ್ ಆಗಿತ್ತು ಆದರೆ ವಿಜಯ ರಾಘವೇಂದ್ರ ನಟನೆಯ ಈ ಎರಡು ಕನಸು ಸಿನಿಮಾ ಟೈಟಲ್ ನಿಂದ ಸುದ್ದಿಯಾಗಿದ್ದು ಬಿಟ್ಟರೆ ಯಶಸ್ಸು ಕಾಣಲಿಲ್ಲ.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ಇದರ ನಂತರ ಡಾ. ರಾಜ್​​​​ಕುಮಾರ್ ನಟಿಸಿದ್ದ 'ಸತ್ಯ ಹರಿಶ್ಚಂದ್ರ' ಹಾಗೂ 'ಶ್ರೀನಿವಾಸ ಕಲ್ಯಾಣ', 'ತಾಯಿಗೆ ತಕ್ಕ ಮಗ' ಚಿತ್ರದ ಟೈಟಲ್​​​​ಗಳು ಮರುಬಳಕೆಯಾಗಿವೆ. 1965ರಲ್ಲಿ ಬಿಡುಗಡೆಯಾದ ಸತ್ಯ ಹರಿಶ್ಚಂದ್ರ ಸಿನಿಮಾದಲ್ಲಿ ಡಾ. ರಾಜ್​​​​ಕುಮಾರ್ ಸತ್ಯವಂತನಾಗಿ ಅಭಿಮಾನಿಗಳ ಹೃದಯ ಕದ್ದಿದ್ರು. ಇದೇ ಟೈಟಲ್ ಇಟ್ಟುಕೊಂಡು ಹಾಸ್ಯನಟ ಶರಣ್ ಸಿನಿಮಾ ಮಾಡಿದ್ದಾರೆ. ಕಾಮಿಡಿ ಕಥೆಗೆ ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ರು.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ಈ ಚಿತ್ರದ ಬಳಿಕ ಶ್ರೀನಿವಾಸ ಕಲ್ಯಾಣ ಚಿತ್ರದ ಟೈಟಲ್ ಮತ್ತೆ ಮರು ಬಳಕೆ ಆಯ್ತು. ಪೌರಾಣಿಕ ಕಥೆ ಆಧರಸಿ ಬಂದ ಶ್ರೀನಿವಾಸ ಕಲ್ಯಾಣ ಟೈಟಲನ್ನು ಯುವ ನಟ ಶ್ರೀನಿ ಮರುಬಳಕೆ ಮಾಡಿಕೊಂಡರು. ಶ್ರೀನಿವಾಸ ಕಲ್ಯಾಣ ಹೆಸರಿನಲ್ಲಿ ಲವ್ ಸ್ಟೋರಿ ಹೇಳಿದ್ರು. ಈಗ ಮತ್ತೆ ಅಣ್ಣಾವ್ರು ನಟಿಸಿದ್ದ 'ಗಂಧದ ಗುಡಿ' ಚಿತ್ರದ ಹೆಸರನ್ನು ಮರುಬಳಕೆ ಮಾಡಲು ಸಿದ್ಧತೆ ನಡೆಯುತ್ತಿದೆ. ದರ್ಶನ್ ಅಭಿನಯದ ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ ಚಿತ್ರ 'ನಾಗರಹಾವು'. ಈ ಶೀರ್ಷಿಕೆಯನ್ನು ಈಗಾಗಲೇ ಎರಡು ಬಾರಿ ಬಳಕೆ ಮಾಡಲಾಗಿದೆ. ಉಪೇಂದ್ರ ಇದೇ ಹೆಸರಿನಲ್ಲಿ ಈ ಹಿಂದೆ ನಾಗರಹಾವು ಸಿನಿಮಾ ಮಾಡಿದ್ದರು. ನಂತರ ರಮ್ಯಾ, ದಿಗಂತ್‌ ಅಭಿನಯದಲ್ಲೂ ನಾಗರಹಾವು ಶೀರ್ಷಿಕೆಯನ್ನು ಮತ್ತೆ ಬಳಸಿ, ಗ್ರಾಫಿಕ್ಸ್‌ ಚಿತ್ರ ಮಾಡಲಾಯಿತು. ಆದರೆ ಈ ಸಿನಿಮಾ ಕೂಡಾ ಯಶಸ್ವಿಯಾಗಲಿಲ್ಲ.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ಡಾ. ವಿಷ್ಣುವರ್ಧನ್ ಅಭಿನಯದ ಬ್ಲಾಕ್ ಬ್ಲಸ್ಟರ್ ಸಿನಿಮಾ 'ಯಜಮಾನ' ಚಿತ್ರದ ಟೈಟಲನ್ನು ದರ್ಶನ್ ಅಭಿನಯದ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಈ ಚಿತ್ರ ಸಿನಿಪ್ರಿಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯ್ತು. ಈ ಚಿತ್ರದಲ್ಲಿ ದರ್ಶನ್​​​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ಕರಾಟೆ ಕಿಂಗ್ ಶಂಕರ್‌ನಾಗ್‌ ಅಭಿನಯದ ಎರಡು ಚಿತ್ರಗಳ ಶೀರ್ಷಿಕೆಯನ್ನು ಮರುಬಳಕೆ ಮಾಡಿಕೊಳ್ಳಲಾಗಿದೆ. ಒಂದು 'ಆ್ಯಕ್ಸಿಡೆಂಟ್' ಮತ್ತೊಂದು 'ಮಿಂಚಿನ ಓಟ' ಸಿನಿಮಾಗಳು. ಆ್ಯಕ್ಸಿಡೆಂಟ್‌ ಶೀರ್ಷಿಕೆಯನ್ನು ರಮೇಶ್‌ ಅರವಿಂದ್‌ ನಟಿಸಿದ ಚಿತ್ರಕ್ಕೂ ಇಡಲಾಯಿತು. ಈ ಚಿತ್ರದ ಮೇಲೆ ನಿರೀಕ್ಷೆ ಇತ್ತಾದರೂ ಸಕ್ಸಸ್ ಆಗಲಿಲ್ಲ. ಇನ್ನು ವಿಜಯ್‌ ರಾಘವೇಂದ್ರ, ಶ್ರೀ ಮುರಳಿ ಸಹೋದರರ ಅಭಿನಯದಲ್ಲಿ ಬಂದ ಮಿಂಚಿನ ಓಟ ಕೂಡಾ ಗೆಲುವು ಸಾಧಿಸಲಿಲ್ಲ.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ರೆಬಲ್ ಸ್ಟಾರ್ ಅಂಬರೀಷ್ ಅಭಿನಯದ 'ಚಕ್ರವ್ಯೂಹ', 'ಚಕ್ರವರ್ತಿ' ಚಿತ್ರದ ಹೆಸರನ್ನು ಮರುಬಳಕೆ ಮಾಡಲಾಗಿದೆ. ಪುನೀತ್ ರಾಜ್​​​​​​​​​​​​​​​​​​​​ಕುಮಾರ್ ಸಿನಿಮಾಗೆ ಚಕ್ರವ್ಯೂಹ, ದರ್ಶನ್ ಅಭಿನಯದ ಚಿತ್ರಕ್ಕೆ ಚಕ್ರವರ್ತಿ ಹೆಸರಿಡಲಾಗಿತ್ತು. ಆದರೆ ಈ ಚಿತ್ರಗಳು ಅಂದುಕೊಂಡಂತೆ ಸಕ್ಸಸ್ ಆಗಲಿಲ್ಲ.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ರವಿಚಂದ್ರನ್‌ ಅಭಿನಯದ 'ಸಿಪಾಯಿ' ಚಿತ್ರ ಈಗಲೂ ಎಲ್ಲರ ಫೇವರೆಟ್ ಸಿನಿಮಾ. ಅದೇ ಶೀರ್ಷಿಕೆಯಡಿ ಮಹೇಶ್‌ ಸಿದ್ಧಾರ್ಥ ಎಂಬ ಹೊಸ ನಟ ಚಿತ್ರ ಮಾಡಿದರೂ, ಆ ಸಿಪಾಯಿಯಂತೆ ಈ ಸಿನಿಮಾ ಯಶಸ್ಸು ಕಾಣಲಿಲ್ಲ. ಇನ್ನು ನೀನಾಸಂ ಸತೀಶ್ 'ಅಂಜದ ಗಂಡು' ಹೆಸರಿಟ್ಟು ಸಿನಿಮಾ ಮಾಡಿದರು. ಆದರೆ ಈ ಚಿತ್ರ ಕೂಡಾ ಯಶಸ್ಸು ಕಾಣಲಿಲ್ಲ.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಮಾಲಾಶ್ರೀ ಅಭಿನಯದಲ್ಲಿ ಬಂದ 'ನಂಜುಂಡಿ ಕಲ್ಯಾಣ' ಸಿನಿಮಾ ದೊಡ್ಡ ಯಶಸ್ಸು ಪಡೆದಿತ್ತು. ಇದೇ ಟೈಟಲ್ ಇಟ್ಟುಕೊಂಡು ಯುವ ನಟ ತನುಷ್‌ ಹಾಗೂ ಶ್ರಾವ್ಯಾ ನಂಜುಂಡಿ ಕಲ್ಯಾಣ ಅಂತಾ ಸಿನಿಮಾ ಮಾಡಿದ್ರು. ಆದರೆ ಪ್ರೇಕ್ಷಕ ಪ್ರಭುಗಳು ಈ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಅದ್ಭುತ ಸಿನಿಮಾ 'ರಂಗನಾಯಕಿ'. ಆರತಿ, ಅಂಬರೀಷ್, ಅಶೋಕ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಆ ಕಾಲದಲ್ಲಿ ಈ ಸಿನಿಮಾ ಹಿಟ್ ಆಗಿತ್ತು. ಇದೇ ಶೀರ್ಷಿಕೆಯನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ತಮ್ಮ ಸಿನಿಮಾಗೆ ಬಳಸಿದರು. ಚಿತ್ರದಲ್ಲಿ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.

ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ
ಹೊಸ ಚಿತ್ರಗಳಿಗೆ ಹಳೆ ಸಿನಿಮಾ ಶೀರ್ಷಿಕೆಗಳು ಮರುಬಳಕೆ

ಹೀಗೆ ದಿಗ್ಗಜ ನಟರು ಅಭಿನಯಿಸಿದ ಹಿಟ್ ಸಿನಿಮಾಗಳ ಟೈಟಲ್​​​​​ಗಳು ಕನ್ನಡ ಚಿತ್ರರಂಗದಲ್ಲಿ ಮರುಬಳಕೆ ಆಗುತ್ತಿದೆ. ಕೆಲವೊಂದು ಸಿನಿಮಾಗಳಿಗೆ ಈ ಹೆಸರು ಬೇಕಾಗಿರುತ್ತದೆ. ಆದರೆ ಮತ್ತೆ ಕೆಲವು ಸಿನಿಮಾ ನಿರ್ದೇಶಕರು ಪ್ರೇಕ್ಷಕರನ್ನು ಚಿತ್ರರಂಗಕ್ಕೆ ಸೆಳೆಯಲು ಈ ಟೆಕ್ನಿಕ್ ಬಳಸುತ್ತಾರೆ. ಆದರೆ ಹಳೆಯ ಸಿನಿಮಾಗಳು ಸಕ್ಸಸ್ ಆದಂತೆ ಹೊಸ ಸಿನಿಮಾಗಳು ಸಕ್ಸಸ್ ಕಂಡಿರುವುದು ಕಡಿಮೆ.

ABOUT THE AUTHOR

...view details