ಕರ್ನಾಟಕ

karnataka

By

Published : Dec 2, 2021, 4:41 PM IST

ETV Bharat / sitara

ಪುನೀತ್ ರಾಜ್​​ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿರ್ಮಲಾನಂದ ಸ್ವಾಮೀಜಿ

ನಟ ಪುನೀತ್​ ರಾಜ್​​ಕುಮಾರ್ ನಿವಾಸಕ್ಕೆ ಆಗಮಿಸಿದ ಆದಿಚುಂಚನಗಿರಿ ​​​​ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಅಪ್ಪು ಭಾವಚಿತ್ರಕ್ಕೆ ಹಾರಹಾಕಿ ನಮಿಸಿದ್ದಾರೆ. ಜೊತೆಗೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Nirmalananda Swamiji visits residence of Puneet Raj Kumar
ಪುನೀತ್ ರಾಜ್​​ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿರ್ಮಲಾನಂದ ಸ್ವಾಮೀಜಿ

ನಟ ಪುನೀತ್ ರಾಜ್‍ಕುಮಾರ್ ಅಗಲಿ ಒಂದು ತಿಂಗಳು ಕಳೆದಿದೆ. ಆದರೆ ಇಂದಿಗೂ ಅಭಿಮಾನಿಗಳು, ಸಿನಿಮಾ ಸ್ನೇಹಿತರು, ಗಣ್ಯರು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.

ಪುನೀತ್ ರಾಜ್​​ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ನಿರ್ಮಲಾನಂದ ಸ್ವಾಮೀಜಿ

ಇಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಹಾಗೂ ಆರೋಗ್ಯ ಸಚಿವ ಕೆ.ಸುಧಾಕರ್ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಪುನೀತ್ ರಾಜ್‍ಕುಮಾರ್ ನಿವಾಸದಲ್ಲಿರುವ ಅಪ್ಪು ಭಾವಚಿತ್ರಕ್ಕೆ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದ್ದಾರೆ.

ರಾಘವೇಂದ್ರ ರಾಜ್​​ಕುಮಾರ್ ಜೊತೆ ನಿರ್ಮಲಾನಂದ ಸ್ವಾಮೀಜಿ
ಪುನೀತ್ ಪತ್ನಿ ಅಶ್ವಿನಿ ಅವರ ಸನ್ಮಾನಿಸಿದ ನಿರ್ಮಲಾನಂದ ಸ್ವಾಮೀಜಿ

ಬಳಿಕ ಸುಮಾರು ಅರ್ಥ ಗಂಟೆಗಳ ಕಾಲ ಪುನೀತ್ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್​​ಕುಮಾರ್ ಜೊತೆ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಅಮೆರಿಕದಲ್ಲಿರುವ ಮಠಕ್ಕೆ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಕ್ಕೆ ಬನ್ನಿ ಎಂದು ಅಶ್ವಿನಿ ಪುನಿತ್ ರಾಜ್‍ಕುಮಾರ್ ಅವರನ್ನು ಸ್ವಾಮೀಜಿ ಆಹ್ವಾನಿಸಿದ್ದಾರೆ.

ಪುನೀತ್ ರಾಜ್​​​ಕುಮಾರ್ ಭಾವಚಿತ್ರಕ್ಕೆ ಕೆ.ಸುಧಾಕರ್ ನಮನ

ಇದನ್ನೂ ಓದಿ:ಬಿಳಿ ಬಿಕನಿಯಲ್ಲಿ ಇಲಿಯಾನಾ ಬಾತ್​.. ಆಕೆಯ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫುಲ್​ ಫಿದಾ

For All Latest Updates

TAGGED:

ABOUT THE AUTHOR

...view details