ಕರ್ನಾಟಕ

karnataka

ETV Bharat / sitara

ಸಂಕ್ರಾಂತಿವರೆಗೂ ಕನ್ನಡ ಸಿನಿಪ್ರೇಕ್ಷಕರಿಗೆ ಪರಭಾಷೆಯ ಸಿನಿಮಾನೆ ಗತಿ! ಯಾಕೆ ಅಂತೀರಾ?

ಸಿನಿಮಾ ಮಂದಿರದಲ್ಲಿ ಕನ್ನಡ ಸಿನಿಮಾ ನೋಡಬೇಕು ಅಂದರೆ ಸಂಕ್ರಾಂತಿ ಮುಗಿಯವರೆಗೂ ಕಾಯಬೇಕು. ಏಕೆಂದರೆ ಮುಂದಿನ ಶುಕ್ರವಾರ ಅಂದರೆ 10ನೇ ಜನವರಿ 2020 ಯಾವುದೇ ಕನ್ನಡ ಸಿನಿಮಾ ಬಿಡುಗಡೆ ಆಗುವ ಸೂಚನೆ ಇಲ್ಲ.

By

Published : Jan 6, 2020, 8:43 AM IST

ಕನ್ನಡ ಸಿನಿಮಾ
ಕನ್ನಡ ಸಿನಿಮಾ

ಮುಂದಿನ ಶುಕ್ರವಾರ ಅಂದರೆ 10ನೇ ಜನವರಿ 2020 ಯಾವುದೇ ಕನ್ನಡ ಸಿನಿಮಾ ಬಿಡುಗಡೆ ಆಗುವ ಸೂಚನೆ ಇಲ್ಲ. ಅದಕ್ಕೆ ಕಾರಣ ತಮಿಳು ಹಾಗೂ ತೆಲುಗು ಸಿನಿಮಗಳು ಅಬ್ಬರಿಸಿ ಲಗ್ಗೆ ಇಡುತ್ತಿರುವುದರಿಂದ. ಸಂಕ್ರಾಂತಿಗೂ ಮುನ್ನ ಯಾವುದೇ ಕನ್ನಡ ಸಿನಿಮಾ ಆಗಮಿಸದೇ ಪರಭಾಷೆಗಳಿಗೆ ಜಾಗ ಮಾಡಿಕೊಟ್ಟಿದೆ. ಇದು ಸಹ ಕನ್ನಡಿಗರ ಹೃದಯ ವೈಶಾಲ್ಯತೆ!

ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ದರ್ಬಾರ್’ ತೆಲುಗು ಸಿನಿಮಾ 9 ನೇ ಜನವರಿ (ಗುರುವಾರವೇ) ನರ್ತಕಿ ಅಂತಹ ಖಾಯಂ ಕನ್ನಡ ಚಿತ್ರಮಂದಿರದಲ್ಲಿ ಕನ್ನಡದವರೆ ಆದ ಧೀರಜ್ ಎಂಟೆರ್ಪ್ರೈಸಸ್ ಬಿಡುಗಡೆ ಮಾಡುತ್ತಿದೆ. ಅಲ್ಲಿ ದರ್ಶನ್ ಅಭಿನಯದ ‘ಒಡೆಯ’ ಪ್ರದರ್ಶನ ಆಗುತ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ದರ್ಬಾರ್’

ಅಷ್ಟೇ ಅಲ್ಲ ತಮಿಳು ಹಾಗೂ ತೆಲುಗು ಆವೃತ್ತಿಯ ರಜನಿಕಾಂತ್ ಸಿನಿಮಾ ‘ದರ್ಬಾರ್’ 200 ಕ್ಕೂ ಹೆಚ್ಚು ಪರದೆಗಳಲ್ಲಿ ಆಕ್ರಮಿಸುತ್ತಿದೆ. ಆದರೆ ದರ್ಬಾರ್ ಕನ್ನಡ ಡಬ್ಬಿಂಗ್ ಬಿಡುಗಡೆ ಆಗುತ್ತಿಲ್ಲ.

ಅಲ್ಲೂ ಅರ್ಜುನ್ ಅಭಿನಯದ ‘ಆಲಾ ವೈಕುಂಟ ಪುರಂಲೋ’

ಮುಂದಿನ ವಾರದ ಮತ್ತೊಂದು ದೊಡ್ಡ ಚಿತ್ರ ಅಂದರೆ ಅಲ್ಲೂ ಅರ್ಜುನ್ ಅಭಿನಯದ ‘ಆಲಾ ವೈಕುಂಟ ಪುರಂಲೋ’ , ಸುಮಾರು 150ಕ್ಕೂ ಹೆಚ್ಚು ಪರದೆಗಳಲ್ಲಿ ಕರ್ನಾಟಕದಲ್ಲಿ ರಾರಾಜಿಸುತ್ತಿದೆ.

ಮಹೇಶ್ ಬಾಬು ಅಭಿನಯದ ‘ಸರಿಲೇರು ನಿಕ್ಕೆವರು’

ಜನವರಿ 16ಕ್ಕೆ ಧನುಷ್ ಅಭಿನಯದ ‘ಪಟ್ಟಾಸ್’ ಹಾಗೂ ಮಹೇಶ್ ಬಾಬು ಅಭಿನಯದ ‘ಸರಿಲೇರು ನಿಕ್ಕೆವರು’ ಸಿನಿಮಾಗಳು ಸಹ ಕರ್ನಾಟಕ ಮಾರುಕಟ್ಟೆಯನ್ನು ಆಯಾ ಭಾಷೆಗಳಲ್ಲೇ ಆವರಿಸಿಕೊಳ್ಳಲಿದೆ.

ಧನುಷ್ ಅಭಿನಯದ ‘ಪಟ್ಟಾಸ್’

ಸಂಕ್ರಾಂತಿ ಮುಗಿದ 2 ದಿವಸಗಳ ನಂತರ ಅಂದರೆ ಜನವರಿ 17 ರಂದು ‘ಶ್ರೀ ಭರತ ಬಾಹುಬಲಿ’ ಕನ್ನಡ ಸಿನಿಮಾ ಬಿಡುಗಡೆ ಅಂತ ತಿಳಿದುಬಂದಿದೆ.

ರಜನಿಕಾಂತ್ ಅಭಿನಯದ ‘ದರ್ಬಾರ್’ ಸಿನಿಮಾ ತೆಲುಗು ಭಾಷೆಯ ಬಿಡುಗಡೆ ಕನ್ನಡ ಚಿತ್ರ ಮಂದಿರ ‘ನರ್ತಕಿ’ ಅಲ್ಲಿ ಆಗುತ್ತಿರುವುದಕ್ಕೆ ವಿರೋಧ ಕೇಳಿ ಬರುತ್ತಿದೆ. ಕನ್ನಡದಲ್ಲೇ ಡಬ್ ಆಗಿ ‘ದರ್ಬಾರ್’ ಬಂದರೆ ಕರ್ನಾಟಕ ರಣಧೀರ ಪಡೆಗೆ ಆಕ್ಷೇಪ ಇಲ್ಲವಂತೆ. ತೆಲುಗು ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಚಿತ್ರಮಂದಿರಕ್ಕೆ ನುಗ್ಗಿ ವಿರೋಧ ವ್ಯಕ್ತ ಮಾಡುವುದಾಗಿ ಕನ್ನಡ ಸಂಘಟನೆ ಹೇಳಿಕೊಂಡಿದೆ.

ABOUT THE AUTHOR

...view details