ಕರ್ನಾಟಕ

karnataka

By

Published : Jun 18, 2021, 8:17 PM IST

ETV Bharat / sitara

ಸಂಗೀತ ಕಲಾವಿದರಿಗೆ ಲಹರಿ ಸಂಸ್ಥೆ ನೆರವು; KFMA ಗೆ 10 ಲಕ್ಷ ರೂ. ದೇಣಿಗೆ

ನಟ ಯಶ್ ಮಾತಿಗೆ ಬೆಲೆ ಕೊಟ್ಟು ಲಹರಿ ವೇಲು, ಕೊರೊನಾ ಕಷ್ಟದಲ್ಲಿರುವ ಸಂಗೀತ ಕಲಾವಿದರ ಸಹಾಯಕ್ಕೆ ಬಂದಿದ್ದಾರೆ. ಲಹರಿ ಮ್ಯೂಸಿಕ್​​ನ ವೇಲು, ಕರ್ನಾಟಕ ಫಿಲಂ ಮ್ಯೂಸಿಶಿಯನ್ಸ್ ಅಸೋಸಿಯೇಷನ್​ಗೆ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ.

music-company-lahari
ಲಹರಿ ವೇಲು

ಬೆಂಗಳೂರು:ಕೊರೊನಾ ಮಹಾಮಾರಿಯಿಂದ ಕಳೆದ ಎರಡೂವರೆ ತಿಂಗಳಿನಿಂದ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬಂದ್ ಆಗಿದೆ‌. ಸಿನಿಮಾವನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರು, ಪೋಷಕ ಕಲಾವಿದರು ಕೆಲಸವಿಲ್ಲದೇ ಕಷ್ಟಪಡುತ್ತಿದ್ದಾರೆ. ಇಂಥ ಸಮಯದಲ್ಲಿ ಕನ್ನಡದ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಈಗ ಲಹರಿ ಮ್ಯೂಸಿಕ್ ಸಂಸ್ಥೆ ಮಾಲೀಕರಾದ ಲಹರಿ ವೇಲು ಸಂಗೀತ ಕಲಾವಿದರ ಸಹಾಯಕ್ಕೆ ಬಂದಿದ್ದಾರೆ.

ನಟ ಯಶ್ ಮತ್ತು ಲಹರಿ ವೇಲು

ಓದಿ: ನುಡಿದಂತೆ ನಡೆದ ರಾಕಿಂಗ್ ಸ್ಟಾರ್: ಕೃತಜ್ಞತೆ ಸಲ್ಲಿಸಿದ ಚಿತ್ರರಂಗದ ಕಾರ್ಮಿಕರು

ನಟ ಯಶ್ ಮಾತಿಗೆ ಬೆಲೆ ಕೊಟ್ಟು ಲಹರಿ ವೇಲು, ಸಂಗೀತ ಕಲಾವಿದರ ಸಹಾಯಕ್ಕೆ ಬಂದಿದ್ದಾರೆ. ಸಂಗೀತ ಸಂಸ್ಥೆ ಲಹರಿ ಮ್ಯೂಸಿಕ್​​ನ ವೇಲು, ಕರ್ನಾಟಕ ಫಿಲಂ ಮ್ಯೂಸಿಶಿಯನ್ಸ್ ಅಸೋಸಿಯೇಷನ್​ಗೆ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ. ವೇಲು ಅವರ‌‌ ಈ ಸಹಾಯಕ್ಕೆ ಕೆಎಫ್​​ಎಂಎ ಧನ್ಯವಾದ ತಿಳಿಸಿದೆ. ಈ ಹಣವನ್ನು ಸಂಕಷ್ಟದಲ್ಲಿರುವ ಸಂಗೀತಗಾರರಿಗೆ, ವಾದ್ಯಗಾರರಿಗೆ ಮತ್ತು ಹಾಡುಗಾರರಿಗೆ ತಲುಪಿಸುವುದಾಗಿ ಕೆಎಫ್​​ಎಂಎ ಅಧ್ಯಕ್ಷ ಸಾಧುಕೋಕಿಲ ತಿಳಿಸಿದ್ದಾರೆ.

ನೆರವಿಗೆ ಬಂದ ಲಹರಿ ಸಂಸ್ಥೆ

ABOUT THE AUTHOR

...view details