ಹೈದರಾಬಾದ್: ಟಾಲಿವುಡ್ ಪ್ರಮುಖ ನಟ ಮೋಹನ್ ಬಾಬು ಮತ್ತು ಆತನ ಮಗ ಮಂಚು ವಿಷ್ಣು ಸೇರಿ ಎಂಟು ಗ್ರಾಮಗಳನ್ನು ದತ್ತು ಪಡೆದಿದ್ದಾರೆ.
ಎಂಟು ಗ್ರಾಮಗಳನ್ನು ದತ್ತು ಪಡೆದ ಅಂಬರೀಶ್ ಆಪ್ತ ಸ್ನೇಹಿತ ಹೌದು, ಈ ಮೂಲಕ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ದೌಡಾಯಿಸಿದೆ ‘ಪೆದ್ದ ರಾಯುಡು’ ಕುಟುಂಬ. ಲಾಕ್ಡೌನ್ ಮುಕ್ತಾಯದವರೆಗೆ ಚಿತ್ತೂರು ಜಿಲ್ಲೆಯ ಚಂದ್ರಗಿರಿ ನಿಯೋಜಕ ವರ್ಗಕ್ಕೆ ಸೇರಿರುವ ಎಂಟು ಗ್ರಾಮಗಳನ್ನು ದತ್ತು ಪಡೆದು, ಅಲ್ಲೀನ ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ ಈ ಅಪ್ಪ-ಮಗ.
ಲಾಕ್ಡೌನ್ ಹಿನ್ನೆಲೆ ಬಡವರ ಕುಟುಂಬಕ್ಕೆ ಎರಡು ಹೊತ್ತಿನ ಆಹಾರ ಸರಬರಾಜು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರತಿ ನಿತ್ಯ ಈ ಗ್ರಾಮಗಳಿಗೆ ಒಟ್ಟು ಎಂಟು ಟನ್ ತರಕಾರಿಯನ್ನು ಉಚಿತವಾಗಿ ನೀಡುತ್ತಿದ್ದಾರೆ.
ಇನ್ನು ಅಪ್ಪ-ಮಗನ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೋಹನ್ ಬಾಬು ಚಿತ್ತೂರಿನ ಮುದುಗುಲಪಾಲೆಂನಲ್ಲಿ ಜನಿಸಿರುವುದು ತಿಳಿದ ವಿಷಯ.