ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ ಅವರ ಕಟ್ಟಾ ಅಭಿಮಾನಿಯೊಬ್ಬರು ಇದೀಗ ನಿರ್ದೇಶಕರಾಗಿ ಕ್ಯಾಪ್ ಧರಿಸಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಷ್ಣು ದಾದಾ ಅವರ ಈ ಅಭಿಮಾನಿ ಎಂ ಎನ್ ಶ್ರೀಕಾಂತ್ ‘ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.
ಹಾಸನ ಮೂಲದ ಶ್ರೀಕಾಂತ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಟ್ಟು ಈಗ ಕಲಾ ಜಗತ್ತಿಗೆ ಜಿಗಿದಿದ್ದಾರೆ. ಮೈಸೂರಿನಲ್ಲಿ ಶಾಲಾ-ಕಾಲೇಜು ದಿನಗಳಿಂದ ಅವರಿಗೆ ನಾಟಕ ನಿರ್ದೇಶನ ಮಾಡಿದ ಅನುಭವ ಇದೆ. ಇವರು ಡಾ ವಿಷ್ಣುವರ್ಧನ್ ಅವರ ‘ಆರಾಧನೆ’ ಸಿನಿಮಾ ನೋಡಿ ಅವರಂತೆ ಆಗಬೇಕು ಎಂದು ಕರಾಟೆ ಕಲಿತು ನಿಜ ಜೀವನದಲ್ಲಿ ನ್ಯಾಷನಲ್ ಚಾಂಪಿಯನ್ ಆದರು. ಆಮೇಲೆ ‘ಈ ಬಂಧನ’ ಬಿಡುಗಡೆ ಸಮಯದಲ್ಲಿ ಸಾಹಸ ಸಿಂಹ ಡಾ ವಿಷ್ಣು ಅವರನ್ನು ಮೈಸೂರಿನಲ್ಲಿ ಭೇಟಿ ಸಹ ಆದರು.