ಭರತನಾಟ್ಯ ಕಲಾವಿದೆ, ಟಿ ವಿ ಧಾರಾವಾಹಿ ‘ಪದ್ಮಾವತಿ’ ನಟಿ, ಕನ್ನಡ ಸಿನಿಮಾಗಳಾದ ‘ಅಸತೋಮ ಸದ್ಘಮಯ, ಹೋಂ ಮಿನಿಸ್ಟರ್, ಮಂಗಳವಾರ ರಜಾ ದಿನ, ರಂಗನಾಯಕಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಾಯಕಿ ಲಾಸ್ಯ ನಾಗರಾಜ್ ಈಗ ಐಟಂ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ನಾಯಕಿಯರಿಗೆ ಐಟಂ ಹಾಡು ಒಂದು ರೀತಿಯಲ್ಲಿ ನೆಮ್ಮದಿ ಸಹ ಅಂತ ಹಿರಿಯ ನಟಿಯರು ಹೇಳಿದ್ದಾರೆ. ಈಗ ಲಾಸ್ಯ ನಾಗರಾಜ್ ‘ಕೃಷ್ಣ ಟಾಕೀಸ್’ ಸಿನಿಮಾಕ್ಕೆ ‘ನೈಟಿ ಮಾತ್ರ ಹಾಕೋಬೇಡ ಮೇನಕಾ...ನಮಗೆ ನೈಂಟಿ ಹೊಡದಂಗೆ ಅಗ್ತದೆ ಜೀವಕ್ಕೆ... ಅನ್ನೋ ಹಾಡಿಗೆ ನಾಯಕ ಅಜಯ್ ರಾವ್ ಹಾಗೂ ಕೆಲವು ನೃತ್ಯಗಾರರ ಜೊತೆಯಲ್ಲಿ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಹೆಜ್ಜೆ ಹಾಕಿದ್ದಾರೆ. ಗೋಕುಲ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಗೋವಿಂದ ರಾಜು ಎ.ಹೆಚ್. ನಿರ್ಮಾಣ ಮಾಡುತ್ತಿರುವ ಸಿನಿಮಾ ಇದು. ಶ್ರೀಧರ್ ವಿ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.