ಕರ್ನಾಟಕ

karnataka

ETV Bharat / sitara

ಅಜಯ್ ರಾವ್ 'ಕೃಷ್ಣ ಟಾಕೀಸ್​​​'ಗೆ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ - Ajay rao starring Krishna talkies

ವಿಜಯಾನಂದ್ ನಿರ್ದೇಶನದಲ್ಲಿ ಅಜಯ್ ರಾವ್, ಸಿಂಧು ಲೋಕನಾಥ್, ಅಪೂರ್ವ ಹಾಗೂ ಇನ್ನಿತರರು ನಟಿಸಿರುವ ಸಸ್ಪೆನ್ಸ್​​​​ ಥ್ರಿಲ್ಲರ್ 'ಕೃಷ್ಣ ಟಾಕೀಸ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ.

Krihna talkies movie
'ಕೃಷ್ಣ ಟಾಕೀಸ್​​​'

By

Published : Aug 13, 2020, 12:33 PM IST

ಸ್ಯಾಂಡಲ್​​ವುಡ್ ಕೃಷ್ಣ ಅಜಯ್​​​​​​​​​​​​​ ರಾವ್ ನಟಿಸಿರುವ 'ಕೃಷ್ಣ ಟಾಕೀಸ್' ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಲಾಕ್ ಡೌನ್ ಇದ್ದ ಕಾರಣ ಕಳೆದ ಮೂರು ತಿಂಗಳಿಂದ ಸೆನ್ಸಾರ್ ಮಂಡಳಿ ಈ ಚಿತ್ರ ನೋಡಲು ಸಾಧ್ಯವಾಗಿರಲಿಲ್ಲ.

'ಕೃಷ್ಣ ಟಾಕೀಸ್​​​' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್​​​​

ಕಾಕತಾಳೀಯ ಎಂಬಂತೆ ಶ್ರೀ ಕೃಷ್ಣ ಜನ್ಮಾಷ್ಠಮಿ ದಿನವೇ ಸೆನ್ಸಾರ್ ಮಂಡಳಿ 'ಕೃಷ್ಣ ಟಾಕೀಸ್' ಚಿತ್ರ ನೋಡಿ ಥಿಯೇಟರ್​​​​ಗೆ ಬರಲು ಅಸ್ತು ಎಂದಿದೆ. ಗೋಕುಲ್ ಎಂಟರ್​​​ಟೈನರ್​​​​​​​​​​ ಲಾಂಛನದಲ್ಲಿ ಗೋವಿಂದ ರಾಜು ಎ.ಹೆಚ್ ನಿರ್ಮಿಸಿರುವ ಈ ಚಿತ್ರದ ಟೀಸರ್ ಹಾಗೂ ಲಿರಿಕಲ್ ವಿಡಿಯೋಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ವಿಜಯಾನಂದ್​ ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್​​​​​​​ ಸಂಗೀತ ನೀಡಿದ್ದಾರೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ 'ಕೃಷ್ಣ ಟಾಕೀಸ್​​​'ಗಿದೆ.

ಅಜಯ್ ರಾವ್, ಅಪೂರ್ವ

ಲವರ್ ಬಾಯ್ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಜಯ್​​​​​​​​​​​​​​ ರಾವ್ ಮೊದಲ ಬಾರಿಗೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದಲ್ಲಿ ನಟಿಸಿದ್ದಾರೆ. ಅಪೂರ್ವ, ಸಿಂಧು ಲೋಕನಾಥ್, ಚಿಕ್ಕಣ್ಣ, ಮಂಡ್ಯ‌ ರಮೇಶ್, ಶೋಭ್ ರಾಜ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ಮುಂತಾದವರು ಈ‌ ಚಿತ್ರದ ತಾರಾಬಳಗದಲ್ಲಿದ್ದಾರೆ. ಸರ್ಕಾರ ಸಿನಿಮಾ ಮಂದಿರಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೆ ಕೃಷ್ಣ, ಥಿಯೇಟರ್​​​​ಗಳಲ್ಲಿ ಪ್ರತ್ಯಕ್ಷ ಆಗಲಿದ್ದಾನೆ.

'ಕೃಷ್ಣ ಟಾಕೀಸ್​​​' ಚಿತ್ರತಂಡ

ABOUT THE AUTHOR

...view details