ಕರ್ನಾಟಕ

karnataka

ETV Bharat / sitara

ಚಿನ್ನದ ಗಣಿಯಲ್ಲಿ 'ಅಧೀರ'ನಾದ ದತ್​... ಸಂಜು ಬಾಬಾ ಬಗ್ಗೆ ಬಾಲಿವುಡ್​ ದಿಗ್ಗಜರು ಹೇಳಿದ್ದು ಹೀಗೆ - ಕೆಜಿಎಫ್​ 2 ಸುದ್ದಿ

ಕೆಜಿಎಫ್​ ಚಿತ್ರತಂಡ ಅಧೀರನ ಪಾತ್ರ ರಿವಿಲ್​ ಮಾಡಿ ಕೆಲವೇ ಗಂಟೆಗಳಲ್ಲಿ ಟ್ವಿಟರ್​ ಟ್ರೆಂಡ್​ನಲ್ಲಿ ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಅಧೀರನ ಪಾತ್ರದ ಬಗ್ಗೆ ಸಂಜಯ್​ ದತ್ ಸಹ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಕೃಪೆ: Twitter

By

Published : Jul 29, 2019, 12:08 PM IST

Updated : Jul 29, 2019, 12:18 PM IST

ಇಂದು ಬೆಳಗ್ಗೆ 10 ಗಂಟೆಗೆ ಕೆಜಿಎಫ್​ ಚಿತ್ರತಂಡ ಅಧೀರನ ಪಾತ್ರಧಾರಿ ಬಗ್ಗೆ ರಿವೀಲ್​ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಸಂಜಯ್​ ದತ್​ ಹುಟ್ಟುಹಬ್ಬಕ್ಕೆ ಚಿತ್ರತಂಡ ಸ್ಪೆಷಲ್​ ಆಗಿಯೇ ಗಿಫ್ಟ್​ ನೀಡಿದೆ.

ಈ ಪೋಸ್ಟರ್​ ರಿಲೀಸ್​ ಆಗಿ ಕೆಲವೇ ಗಂಟೆಗಳಲ್ಲಿ ಇಂಡಿಯಾದ ಟ್ವಿಟರ್​ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇದು ಚಿತ್ರತಂಡಕ್ಕೆ ಖುಷಿ ತಂದುಕೊಟ್ಟಿದೆ.

ಸಂಜಯ್​ ದತ್​ ಅವರು ಈ ಪೋಸ್ಟರ್​ ಬಗ್ಗೆ ಟ್ವೀಟ್​ ಮಾಡಿದ್ದಾರೆ. ‘ಕೆಜಿಎಫ್​-2 ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ನಟಿಸುತ್ತಿರುವುದು ನಿಜವಾಗಿಯೂ ಖುಷಿ ಮತ್ತು ಉತ್ಸಾಹ ನೀಡಿದೆ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ನ ನಟ ಯಶ್​ ಅವರ ಅಕೌಂಟ್‌ಗೆ ಟ್ಯಾಗ್‌ ಮಾಡಿರುವುದು ಗಮನಾರ್ಹ..

ಸಂಜಯ್​ ದತ್ ಅವರ ಅಧೀರನ ಪಾತ್ರದ​ ಪೋಸ್ಟರ್​ ರಿಲೀಸ್​ ಆಗುತ್ತಿದ್ದಂತೆ ಬಾಲಿವುಡ್​ನ ನಟ-ನಟಿಯರು ಫುಲ್​ ಖುಷಿಯಾಗಿದ್ದಾರೆ. ಅಧೀರನ ಪೋಸ್ಟರ್​ ಹಾಕಿಕೊಂಡು ಸಂಜಯ್​ ದತ್​ಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತಿದ್ದಾರೆ.

Last Updated : Jul 29, 2019, 12:18 PM IST

ABOUT THE AUTHOR

...view details