ಕರ್ನಾಟಕ

karnataka

ಕೊರೊನಾದಿಂದ‌ ಕಂಗಾಲಾದವರಿಗೆ ಆಹಾರ ಕಿಟ್ ವಿತರಿಸಿದ ನಟಿ ಕಾರುಣ್ಯ ರಾಮ್

By

Published : Apr 11, 2020, 10:04 PM IST

ಕೊರೊನಾದಿಂದ ಕಷ್ಟಪಡುತ್ತಿರುವ ಸುಮಾರು 50 ಕುಟುಂಬಗಳಿಗೆ ಹಾಗೂ ಬೀದಿ ಬದಿಯ ನಾಯಿಗಳಿಗೆ ನಟಿ ಕಾರುಣ್ಯ ರಾಮ್​ ಆಹಾರ ನೀಡಿದ್ದಾರೆ.

Karunya Ram
ಕಾರುಣ್ಯ ರಾಮ್

ಬೆಂಗಳೂರು:ಕಿಲ್ಲರ್ ಕೊರೊನಾದಿಂದ ಕಂಗಾಲಾಗಿರುವ ದಿನಗೂಲಿ ಕಾರ್ಮಿಕರಿಗೆ ‌ ಬಿಗ್​​​​​​​​ಬಾಸ್ ಖ್ಯಾತಿಯ ನಟಿ ಕಾರುಣ್ಯ ರಾಮ್ ಇಂದು ದಿನಸಿ ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ಆಹಾರ ಸಾಮಗ್ರಿಗಳನ್ನು ತಂಗಿ ಹಾಗೂ ಅಮ್ಮನ ಜೊತೆ ಕೂತು ದಿನವಿಡೀ ಪೊಟ್ಟಣ ಕಟ್ಟಿರುವ ಕಾರುಣ್ಯ ಇಂದು ನಂದಿನಿ ಲೇಔಟ್​​ನ ಕೊಳಚೆ ಪ್ರದೇಶಗಳಲ್ಲಿ ಬಡವರಿಗೆ ಹಂಚಿದ್ದಾರೆ. ಇನ್ನು ನಟಿ ಕಾರುಣ್ಯ ರಾಮ್ ಕೆಲಸಕ್ಕೆ ನಟ ಯಶಸ್ ಸೂರ್ಯ ಕೂಡಾ ಸಾಥ್ ನೀಡಿದ್ದಾರೆ. ಕಾರುಣ್ಯ ಬಡಜನರಿಗೆ ಮಾತ್ರವಲ್ಲದೆ ಬೀದಿ ಬದಿಯ ನಾಯಿಗಳಿಗೆ ಕೂಡಾ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಒಟ್ಟಿ‌ನಲ್ಲಿ ಲಾಕ್ ಡೌನ್ ಆದಾಗಿನಿಂದ ಸ್ಯಾಂಡಲ್​​ವುಡ್​​​​​​ ನಟ ನಟಿಯರು ಬಡವರ ನೆರವಿಗೆ ನಿಂತು ಮಾನವೀಯತೆ ಮೆರೆಯುತ್ತಿದ್ದಾರೆ.

ABOUT THE AUTHOR

...view details