ಕರ್ನಾಟಕ

karnataka

ETV Bharat / sitara

ವಿಶ್ವಕಪ್ ಗೆದ್ದ ನಂತರ ಆರಂಭವಾದ ಕಪಿಲ್ ದೇವ್ - ಸುನಿಲ್ ಗವಾಸ್ಕರ್ ಜಗಳ..

ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಭಾರತೀಯ ಕ್ರಿಕೆಟ್ ಅನ್ನು ಎತ್ತರಕ್ಕೆ ಕೊಂಡೊಯ್ದರು. ಇವರಿಬ್ಬರೂ ದೇಶದಲ್ಲಿ ಕ್ರಿಕೆಟ್ ಉತ್ಸಾಹವನ್ನು ಹುಟ್ಟುಹಾಕಿದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

By

Published : Dec 23, 2021, 6:54 PM IST

Kapil Dev and Sunil Gavaskar
ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್

ನವದೆಹಲಿ: ಭಾರತ ಕ್ರಿಕೆಟ್ ತಂಡ 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಆ ದಿನದ ನೆನಪುಗಳು ಇಂದಿಗೂ ಭಾರತೀಯರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ವಿಶ್ವಕಪ್ ಎಂದು ಕೇವಲ ಉಪಾಖ್ಯಾನಗಳಲ್ಲಿ ಕೇಳಿದ ಪೀಳಿಗೆಗೆ 83 ಚಿತ್ರವು ಮತ್ತೊಮ್ಮೆ ಆ ವಾತಾವರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಚಿತ್ರವು ಕಪಿಲ್ ದೇವ್ ನಾಯಕತ್ವದಲ್ಲಿ ಗೆದ್ದ ವಿಶ್ವಕಪ್ ಆಧರಿಸಿದೆ. ಈ ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದೆ.

ಈ ಗೆಲುವಿನ ನಂತರ ಕಪಿಲ್ ದೇಶದ ವಜ್ರ ಎನಿಸಿಕೊಂಡಿದ್ದರು. ವಿಶ್ವಕಪ್‌ನಲ್ಲಿ ಏನಾಯಿತು ಎಂಬುದು ಚಿತ್ರ ನೋಡಿಯೇ ತಿಳಿಯುತ್ತದೆ. ಆದರೆ, 83ರ ಮರು ವರ್ಷವೇ ಕಪಿಲ್ ದೇವ್ ಅವರನ್ನು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯ ಕೊನೆಯ ಪಂದ್ಯದಿಂದ ಕೈಬಿಡಲಾಗಿತ್ತು.

ಕಪಿಲ್ ದೇವ್

ವಿಶ್ವಕಪ್ ಗೆದ್ದ ನಂತರ ಮುಂದಿನ ವರ್ಷವೇ ಕಪಿಲ್ ದೇವ್ ಅವರನ್ನು ಟೆಸ್ಟ್ ಪಂದ್ಯಕ್ಕೆ ಏಕೆ ಹೊರಹಾಕಲಾಯಿತು ಎಂಬುದನ್ನು ನಾವು ಇಲ್ಲಿ ಹೇಳಲಿದ್ದೇವೆ. ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಭಾರತೀಯ ಕ್ರಿಕೆಟ್ ಅನ್ನು ಎತ್ತರಕ್ಕೆ ಕೊಂಡೊಯ್ದರು. ಇವರಿಬ್ಬರೂ ದೇಶದಲ್ಲಿ ಕ್ರಿಕೆಟ್ ಉತ್ಸಾಹವನ್ನು ಹುಟ್ಟುಹಾಕಿದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಕಪಿಲ್ ನಾಯಕತ್ವದಲ್ಲಿ ಭಾರತ 1983ರ ವಿಶ್ವಕಪ್ ಗೆದ್ದರೆ, ಭಾರತವು 1985 ರಲ್ಲಿ ಆಸ್ಟ್ರೇಲಿಯಾದಲ್ಲಿ ಗವಾಸ್ಕರ್ ನಾಯಕತ್ವದಲ್ಲಿ ಬೆನ್ಸನ್ ಮತ್ತು ಹೆಡ್ಜಸ್ ವಿಶ್ವಕಪ್ ಗೆದ್ದಿತು. ಇದೇ ಟೂರ್ನಮೆಂಟ್‌ನಲ್ಲಿ ರವಿಶಾಸ್ತ್ರಿ ಪ್ಲೇಯರ್ ಆಫ್ ದಿ ಸಿರೀಸ್‌ಗಾಗಿ ಆಡಿ ಕಾರು ಪಡೆದರು.

ಅಂದಹಾಗೆ, ಈ ಸಮಯದಲ್ಲಿ ನಾವು ಸುನಿಲ್ ಮತ್ತು ಕಪಿಲ್ ಬಗ್ಗೆ ಮಾತನಾಡುತ್ತಿದ್ದೇವೆ. ಇವರಿಬ್ಬರ ನಡುವೆ ಯಾವಾಗ ಬಿರುಕು ಮೂಡಿತು? 1983ರಲ್ಲಿ ವಿಶ್ವಕಪ್ ಗೆದ್ದ ಒಂದು ವರ್ಷದ ನಂತರ ಇಬ್ಬರ ನಡುವೆ ವೈಮನಸ್ಸು ಆರಂಭವಾಯಿತು. 1984ರಲ್ಲಿ ಭಾರತವು ಇಂಗ್ಲೆಂಡ್‌ನೊಂದಿಗೆ ಮೂರು ಟೆಸ್ಟ್‌ಗಳ ಸರಣಿಯನ್ನು ಹೊಂದಿತ್ತು. ಸುನಿಲ್ ಗವಾಸ್ಕರ್ ಭಾರತ ತಂಡದ ನಾಯಕರಾಗಿದ್ದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಉತ್ಸಾಹ ಹೆಚ್ಚಿತ್ತು. ಎರಡನೇ ಪಂದ್ಯ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿತ್ತು. ಈ ಪಂದ್ಯ ಡ್ರಾ ಆಗಿತ್ತು. ಕಪಿಲ್ ದೇವ್ ಮತ್ತು ಸಂದೀಪ್ ಪಾಟೀಲ್ ಬೇಜವಾಬ್ದಾರಿಯಿಂದ ಆಡುತ್ತಿದ್ದಾರೆ ಎಂದು ಆರೋಪಿಸಿದರು. ಇವರಿಬ್ಬರಿಂದಾಗಿ ಭಾರತ ಗೆಲುವಿನಿಂದ ದೂರ ಉಳಿಯಿತು ಎಂದು ನಂಬಲಾಗಿತ್ತು.

ಸರಣಿಯ ಮೂರನೇ ಟೆಸ್ಟ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಬೇಕಿತ್ತು. ಮೂರನೇ ಟೆಸ್ಟ್‌ಗೆ ತಂಡವನ್ನು ಪ್ರಕಟಿಸಿದಾಗ ಕಪಿಲ್ ದೇವ್ ಮತ್ತು ಸಂದೀಪ್ ಪಾಟೀಲ್ ಹೆಸರು ಇರಲಿಲ್ಲ. ಕೋಲ್ಕತ್ತಾದಲ್ಲಿ ಕಪಿಲ್ ಇಲ್ಲದೇ ಆಡಿದ ಮೂರನೇ ಟೆಸ್ಟ್‌ನಲ್ಲಿ ಸಾಕಷ್ಟು ಗದ್ದಲ ನಡೆದಿತ್ತು.

ಸಭಿಕರು ಮೈದಾನದಲ್ಲಿ ‘ನೋ ಕಪಿಲ್, ನೋ ಟೆಸ್ಟ್’ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಸುನಿಲ್ ಗವಾಸ್ಕರ್ ಮೇಲೆ ಟೊಮೇಟೊ ಎಸೆಯಲಾಯಿತು. ಇದರಿಂದ ಕೋಪಗೊಂಡ ಗವಾಸ್ಕರ್ ಅವರು ಕೋಲ್ಕತ್ತಾ ಮೈದಾನದಲ್ಲಿ ಪಂದ್ಯವನ್ನು ಆಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಅಂದಿನಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಇದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದಲ್ಲ. ಈ ಟೆಸ್ಟ್‌ನಿಂದ ಹೊರಗುಳಿದ ಕಾರಣ, ಕಪಿಲ್ ದೇವ್ ಸತತ 100 ಟೆಸ್ಟ್‌ಗಳನ್ನು ಆಡಿದ ದಾಖಲೆಯಿಂದ ವಂಚಿತರಾದರು. 1986-87ರಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಬಂದಾಗ ಗವಾಸ್ಕರ್ ಕೋಲ್ಕತ್ತಾದಲ್ಲಿ ಪಂದ್ಯ ಆಡಿರಲಿಲ್ಲ. ಆದರೆ, ನಂತರ ಗವಾಸ್ಕರ್ ಕೂಡ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಕಪಿಲ್ ನಾಯಕತ್ವದಲ್ಲಿ ಓಪನಿಂಗ್ ಮಾಡಲು ಗವಾಸ್ಕರ್ ನಿರಾಕರಿಸಿದ್ದರು.

ಓದಿ:ಅಪ್ಪು ಅಣ್ಣನಿಂದ ಆ್ಯಕ್ಟಿಂಗ್ ಬಗ್ಗೆ ಟಿಪ್ಸ್ ಕೇಳಿದ್ದೆ : ಪವರ್​ಸ್ಟಾರ್​​ ನೆನೆದ ನಿಖಿಲ್​ ಕುಮಾರಸ್ವಾಮಿ

_______________________________________________________

ABOUT THE AUTHOR

...view details