ಕರ್ನಾಟಕ

karnataka

By

Published : Apr 30, 2020, 11:05 AM IST

Updated : Apr 30, 2020, 12:07 PM IST

ETV Bharat / sitara

ಇರ್ಫಾನ್ ಖಾನ್ ನಿಧನಕ್ಕೆ ಕನ್ನಡದ ಸೀರಿಯಲ್​​​ ನಟರಿಂದ ಸಂತಾಪ

ಬಾಲಿವುಡ್ ನ ಹೆಸರಾಂತ ನಟ ಇರ್ಫಾನ್ ಖಾನ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ನಿನ್ನೆ ಕೊನೆಯುಸಿರೆಳೆದಿದ್ದರು. ಅವರ ನಿಧನಕ್ಕೆ ಕನ್ನಡದ ಸೀರಿಯಲ್​​​ ನಟರು ಸಂತಾಪ ವ್ಯಕ್ತಪಡಿಸಿದ್ದಾರೆ.

Kannada serial actors condole death of actor Irrfan Khan
ನಟ ಇರ್ಫಾನ್ ಖಾನ್ ನಿಧನಕ್ಕೆ ಕನ್ನಡದ ಸೀರಿಯಲ್​​​ ನಟರಿಂದ ತಮ್ಮದೆ ಶೈಲಿಯಲ್ಲಿ ಸಂತಾಪ

ಭಾರತಿಯ ಸಿನಿರಂಗಕ್ಕೆ ನಿನ್ನೆ ಕರಾಳ ಬುಧವಾರ ಎಂದರೆ ತಪ್ಪಲ್ಲ. ಬಾಲಿವುಡ್‌ನ ಹೆಸರಾಂತ ನಟ ಇರ್ಫಾನ್ ಖಾನ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ನಿನ್ನೆ ಕೊನೆಯುಸಿರೆಳೆದಿದ್ದರು.

ಕನ್ನಡತಿ ಧಾರಾವಾಹಿಯ ಭುವಿ ಪಾತ್ರಧಾರಿ ರಂಜನಿ ರಾಘವನ್ ಅವರು, ನನಗೆ ಸ್ಫೂರ್ತಿ ಆಗಿದ್ದ ವ್ಯಕ್ತಿಗಳ ಪೈಕಿ ಇರ್ಫಾನ್ ಖಾನ್ ಕೂಡಾ ಒಬ್ಬರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಚಂದನ್ ಆಚಾರ್ ಅವರು ಇರ್ಫಾನ್ ಖಾನ್ ಅಗಲಿರುವ ಸುದ್ದಿ ಕೇಳಲು ನಿಜಕ್ಕೂ ತುಂಬಾನೇ ಬೇಸರವಾಗುತ್ತಿದೆ. ಈ ನೋವು ಸಹಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಬರೆದುಕೊಂಡಿದ್ದಾರೆ.

ಯುವ ಸಂಗೀತ ಮಾಂತ್ರಿಕ, ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್, ಸರ್, ನಿಮ್ಮನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಗಟ್ಟಿಮೇಳ ಧಾರಾವಾಹಿಯ ವೇದಾಂತ್ ಪಾತ್ರಧಾರಿ ರಕ್ಷ್ ಇರ್ಫಾನ್ ಖಾನ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

Last Updated : Apr 30, 2020, 12:07 PM IST

ABOUT THE AUTHOR

...view details