ಕನ್ನಡದ ಅತ್ಯುತ್ತಮ ನಾಟಕಕಾರ ಮತ್ತು ಸಾಹಿತಿ ಸಂಸ ಅವರ ಬದುಕಿನ ಚಿತ್ರಣ 'ಬಿಂಬ - ಆ ತೊಂಭತ್ತು ನಿಮಿಷಗಳು' ಎಂಬ ಸಿನಿಮಾ ಹೆಸರಿನಲ್ಲಿ ತಯಾರಾಗಿದೆ. ಈ ಚಿತ್ರದಲ್ಲಿ ಸಂಸ ಆಗಿ ಹಿರಿಯ ನಟ ಶ್ರೀನಿವಾಸ ಪ್ರಭು ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ್ ಅವರೇ ಜಿ. ಮೂರ್ತಿ ಜೊತೆ ಸೇರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಂಸ ಅವರಿಗೆ ಸದಾ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ, ಪೊಲೀಸರು ನನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಭಯವಿತ್ತು. ಆ ಭಯ, ಆತಂಕಗಳೇ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಕರೆದೊಯ್ಯಿತು ಎನ್ನಲಾಗಿದೆ. ಈ ಹಿಂದೆ ಇದೇ ವಿಷಯವಾಗಿ ಶ್ರೀನಿವಾಸ ಪ್ರಭು ಅವರು ಏಕವ್ಯಕ್ತಿ ಪ್ರದರ್ಶನ ಮಾಡಿದ್ದರು. ಆ ನಾಟಕವೇ ಈಗ 'ಬಿಂಬ... ಆ ತೊಂಭತ್ತು ನಿಮಿಷಗಳು' ಹೆಸರಿನಲ್ಲಿ ಸಿನಿಮಾವಾಗಿ ತಯಾರಾಗಿದೆ. ಸ್ವಾತಂತ್ರ್ಯ ಪೂರ್ವದ ಈ ಕಥೆಯ ವಿಶೇಷವೆಂದರೆ ಈ ಚಿತ್ರದಲ್ಲಿರುವುದು ಒಂದೇ ಪಾತ್ರ ಮತ್ತು ಒಂದೇ ಲೊಕೇಶನ್.