ಕರ್ನಾಟಕ

karnataka

By

Published : Sep 10, 2019, 2:42 PM IST

Updated : Sep 10, 2019, 2:50 PM IST

ETV Bharat / sitara

ಬುದ್ಧಿವಂತ-2 ಚಿತ್ರದಿಂದ ನಿರ್ದೇಶಕ ಡಿ.ಎನ್​. ಮೌರ್ಯ ಹೊರಕ್ಕೆ... ಜಯರಾಂ ಹೆಗಲಿಗೆ ಡೈರೆಕ್ಷನ್​

ಉಪೇಂದ್ರ ಅಭಿನಯದ ಬುದ್ಧಿವಂತ-2 ಸಿನಿಮಾದಿಂದ ನಿರ್ದೇಶಕ ಡಿ.ಎನ್​. ಮೌರ್ಯ ಹೊರ ನಡೆದಿದ್ದು ಇದೀಗ ಆ ಜಾಗಕ್ಕೆ ನಿರ್ದೇಶಕ ಜಯರಾಂ ಬಂದಿದ್ದಾರೆ. ಚಿತ್ರದ ನಿರ್ದೇಶಕರು ಬದಲಾಗಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ಈ ಬದಲಾವಣೆ ಆಗಿದೆ ಎನ್ನಲಾಗ್ತಿದೆ.

ಉಪೇಂದ್ರ

ನಾನವನಲ್ಲ ನಾನವನಲ್ಲ... ಈ ಡೈಲಾಗ್ ಕೇಳಿದೊಡನೆ ನಮಗೆ ನೆನಪಾಗುವುದು ಉಪೇಂದ್ರ ಅಭಿನಯದ ಬುದ್ಧಿವಂತ ಸಿನಿಮಾ. 2008 ರಲ್ಲಿ ಬಿಡುಗಡೆಯಾಗಿದ್ದ ಬುದ್ಧಿವಂತ ಚಿತ್ರ ಒಳ್ಳೆಯ ಹೆಸರು ಮಾಡಿತ್ತು. ಸಿನಿಮಾ ಕಥೆ, ಹಾಡುಗಳು, ಡೈಲಾಗ್​​​​​​​​​​​​​​​​​​​​​​​​​​​ ಇಂದಿಗೂ ಫೇಮಸ್​​​.

ಇದೀಗ ಉಪೇಂದ್ರ ಅಭಿನಯದಲ್ಲಿ ಬುದ್ಧಿವಂತ ಸೀಕ್ವೆಲ್ ತಯಾರಾಗುತ್ತಿರುವುದು ತಿಳಿದಿರುವ ವಿಚಾರ. ಇನ್ನು ಉಪೇಂದ್ರ ಅವರಿಗೆ ಪ್ರತಿಯೊಂದು ಅಚ್ಚುಕಟ್ಟಾಗಿ ಆಗಬೇಕು. ಅವರನ್ನು ಮೆಚ್ಚಿಸುವುದು ಬಹಳ ಕಷ್ಟ ಎಂದೇ ಹೇಳಬಹುದು. ಕೆಲವೊಮ್ಮೆ ಎಷ್ಟೇ ನಿಭಾಯಿಸಿದರೂ ಕೆಲವೊಂದು ತಪ್ಪುಗಳಾಗಿ ಹೋಗುತ್ತವೆ. ಇದೀಗ ‘ಬುದ್ಧಿವಂತ -2‘ ವಿಷಯದಲ್ಲೂ ಆಗಿರುವುದು ಅದೇ. ಕೆಲವೊಂದು ಭಿನ್ನಾಭಿಪ್ರಾಯಗಳಿಂದ ‘ಬುದ್ಧಿವಂತ 2’ ನಿರ್ದೇಶ ಡಿ.ಎನ್​​​​. ಮೌರ್ಯ ಚಿತ್ರದಿಂದ ಹೊರನಡೆದಿದ್ದಾರೆ. ಇದೀಗ ಅವರ ಜಾಗಕ್ಕೆ ಜಯರಾಂ ಎಂಬ ಹೊಸ ನಿರ್ದೇಶಕ ಬಂದಿದ್ದಾರೆ. ಡಿ.ಎನ್​. ಮೌರ್ಯ ಸಿನಿಮಾದ ಕೆಲವೊಂದು ಭಾಗಗಳ ಚಿತ್ರೀಕರಣ ಮಾಡಿಮುಗಿಸಿದ್ದಾರೆ. ಇದೀಗ ಜಯರಾಂ ಉಳಿದ ಭಾಗದ ಚಿತ್ರೀಕರಣ ಮುಗಿಸಲಿದ್ದಾರೆ. ಜಯರಾಂ, ನಿರ್ದೇಶಕ ಆರ್​​.ಚಂದ್ರು ಅವರ ಸಹಾಯಕ ನಿರ್ದೇಶಕ. ಐ ಲವ್ ಯು ಸಿನಿಮಾ ಚಿತ್ರೀಕರಣದ ವೇಳೆ ಉಪೇಂದ್ರ ಅವರಿಗೆ ಜಯರಾಂ ಪರಿಚಯವಾಗಿತ್ತು.

ಮೈಸೂರಿನ ಕ್ರಿಸ್ಟಲ್ ಪಾರ್ಕ್ ಹೋಟೆಲ್ ಉದ್ಯಮಿ ಟಿ.ಆರ್. ಚಂದ್ರಶೇಖರ್ ಬುದ್ಧಿವಂತ-2 ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಟೈಟಲ್ ಕಾರ್ಡಿನಲ್ಲಿ ಮೌರ್ಯ ಅವರ ಹೆಸರು ಕೂಡಾ ಇರಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಉಪೇಂದ್ರ ಅವರದ್ದು ದ್ವಿಪಾತ್ರ. ಮೇಘನಾ ರಾಜ್ ಹಾಗೂ ಸೋನಾಲ್ ಮೊಂತೆರೋ ನಾಯಕಿಯರಾಗಿ ನಟಿಸಿದ್ದಾರೆ.

Last Updated : Sep 10, 2019, 2:50 PM IST

ABOUT THE AUTHOR

...view details