ಕರ್ನಾಟಕ

karnataka

ETV Bharat / sitara

'ಕಾಮಿಡಿ ಕಿಲಾಡಿ' ಶೋ ಸ್ಕೃಿಪ್ಟ್‌ ರೈಟರ್ ಹರ್ಷ ನಿಧನಕ್ಕೆ ಜಗ್ಗೇಶ್ ಕಂಬನಿ - ಕಾಮಿಡಿ ಶೋ ರೈಟರ್ ಹರ್ಷ ನಿಧನಕ್ಕೆ ಜಗ್ಗೇಶ್ ಕಂಬನಿ

ತುಮಕೂರಿನ ಯುವಕ ಹರ್ಷ ಎಂಬಿಎ ಶಿಕ್ಷಣ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸಿನಿಮಾ ಗೀಳು ಹೊಂದಿದ್ದ ಇವರು ನಟನಾಗಬೇಕೆಂದು ಕನಸು ಕಂಡಿದ್ದರು. ಇದೀಗ ತಮ್ಮ 27ನೇ ವರ್ಷದಲ್ಲಿ ಅಕಾಲಿಕ ಮರಣವನ್ನಪ್ಪಿದ್ದಾರೆ.

jaggesh-tweet-about-comedy-writer-harsha-death
ನಟ ಜಗ್ಗೇಶ್ ಹಾಗು ಕಾಮಿಡಿ ಕಿಲಾಡಿ ಶೋ ರೈಟರ್ ಹರ್ಷ

By

Published : Jan 7, 2022, 10:12 PM IST

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಹರ್ಷವರ್ಧನ್ ಇಂದು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.

ಮೂಲತಃ ತುಮಕೂರಿನ ಹರ್ಷ ಎಂಬಿಎ ಶಿಕ್ಷಣ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸಿನಿಮಾ ಗೀಳು ಹೊಂದಿದ್ದ ಇವರು ನಟನಾಗಬೇಕೆಂದು ಕನಸು ಕಂಡಿದ್ದರು. ಹೀಗಾಗಿ, ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿ ಶೋಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. 27 ವರ್ಷದ ಯುವಕ ಇಂದು ಮೃತಪಟ್ಟಿದ್ದಾರೆ. ಹರ್ಷ ಅವರ ಅಕಾಲಿಕ ನಿಧನಕ್ಕೆ ನಟ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ.

'ನಗುವಿಗೆ ಇವನ ಕೆಲ ಬರಹದ ನಾಟಕದ ಕೊಡಿಗೆ ಕಾರಣ. ಬಂಗಾರದಂತಹ ಯುವಕನನ್ನು ಕೇವಲ 27 ವರ್ಷಕ್ಕೆ ಯಮ ಪಾಶ ಹಾಕಿ ಕರೆದೊಯ್ದ. ಬಾಳಿ ಬದುಕಬೇಕಿದ್ದ ಈ ಕಂದನಿಗೆ ಈ ಸಾವು ನ್ಯಾಯವೇ?. ಇವನ ಅಗಲಿಕೆ ದುಃಖ ಭರಿಸುವ ಶಕ್ತಿ ರಾಯರು ತಂದೆತಾಯಿಗೆ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ 114 ಕೊರೊನಾ ಕೇಸ್​ ಪತ್ತೆ: 6 ತಿಂಗಳ ಬಳಿಕ ಶತಕದ ಗಡಿ ದಾಟಿದ ಸೋಂಕು

For All Latest Updates

ABOUT THE AUTHOR

...view details