'ಐ ಲವ್ ಯು' ಚಿತ್ರದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ನಡುವಿನ ರೊಮ್ಯಾಂಟಿಕ್ ಸಾಂಗ್ ಬಗ್ಗೆ ನಟ ಹುಚ್ಚ ವೆಂಕಟ್ ಗುಡುಗಿದ್ದರು. ಚಿತ್ರದ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದ ಹುಚ್ಚ ವೆಂಕಟ್ಗೆ ಉಪ್ಪಿ ಫ್ಯಾನ್ಸ್ ಕ್ಲಾಸ್ ಕೂಡಾ ತೆಗೆದುಕೊಂಡಿದ್ರು. 'ಐ ಲವ್ ಯು' ಸಿನಿಮಾ ಕುಟುಂಬಸಹಿತ ಥಿಯೇಟರ್ಗೆ ಬಂದು ನೋಡುವಂತಹ ಚಿತ್ರ. ನೀವು ಸಿನಿಮಾ ನೋಡಿ ನಂತರ ಮಾತನಾಡಿ ಎಂದು ಉಪ್ಪಿ ಅಭಿಮಾನಿಯೊಬ್ಬರು ಸಲಹೆ ನೀಡಿದ್ದರು. ಇದಾದ ಬಳಿಕ ವೆಂಕಟ್ ಕಳೆದ ಭಾನುವಾರ ತ್ರಿವೇಣಿ ಚಿತ್ರಮಂದಿರದ ಬಳಿ ಹೋಗಿ ನಿರ್ದೇಶಕ ಆರ್. ಚಂದ್ರು ಬಳಿ ಕ್ಷಮೆ ಕೇಳಿದ್ದರು.
'ಐ ಲವ್ ಯು' ಬಗ್ಗೆ ಮತ್ತೆ ಮಾತನಾಡಲ್ಲ, ಸಾಧ್ಯವಾದ್ರೆ ಹಾಡು ಕಟ್ ಮಾಡಿ: ಹುಚ್ಚ ವೆಂಕಟ್
ಉಪೇಂದ್ರ ನಟಿಸಿರುವ 'ಐ ಲವ್ ಯು' ಸಿನಿಮಾ ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಅಮೋಘ ಪ್ರದರ್ಶನ ಕಾಣುತ್ತಿದೆ. ಇದುವರೆಗೂ ಸಿನಿಮಾ ಸುಮಾರು 20 ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಚಿದೆ ಎನ್ನಲಾಗಿದೆ.
ಆದರೆ ಯಾರೋ ಕಿಡಿಗೇಡಿಗಳು ಹುಚ್ಚ ವೆಂಕಟ್ 'ಐ ಲವ್ ಯು' ಚಿತ್ರದ ಬಗ್ಗೆ ಈ ಹಿಂದೆ ಕೆಟ್ಟದಾಗಿ ಮಾತನಾಡಿದ್ದ ಹಳೆಯ ವಿಡಿಯೋವನ್ನು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನೆಗೆಟಿವ್ ಕಮೆಂಟ್ ಹಾಕುತ್ತಿದ್ದ ಬಗ್ಗೆ ಬೇಸತ್ತ ವೆಂಕಟ್, ಇಂದು ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ 'ಐ ಲವ್ ಯು' ಚಿತ್ರದ ಬಗ್ಗೆ ನಾನು ಇನ್ಮುಂದೆ ಎಲ್ಲಿಯೂ ಮಾತನಾಡುವುದಿಲ್ಲ. ಆದರೆ ಯಾರೋ ಹಳೇ ವಿಡಿಯೋವನ್ನು ಮತ್ತೆ ಮತ್ತೆ ಪೋಸ್ಟ್ ಮಾಡುತ್ತಿದ್ದಾರೆ. ಆರ್. ಚಂದ್ರು ನನ್ನ ಅಣ್ಣನ ರೀತಿ. ತಮ್ಮನಾಗಿ ನಾನು ಕೇಳುವುದು ಒಂದೇ. ಚಿತ್ರದ ಹಾಡನ್ನು ಬ್ಲರ್ ಮಾಡಲಿ, ಇಲ್ಲವೇ ಎಡಿಟ್ ಮಾಡಿ ಸಿನಿಮಾದಿಂದ ಕಟ್ ಮಾಡಿದರೆ ಒಳ್ಳೆಯದು ಎಂದು ಮನವಿ ಮಾಡಿದರು.
ಚಿತ್ರದ ಬಗ್ಗೆ ನಾನು ಏನಾದರೂ ಕೆಟ್ಟದಾಗಿ ಮಾತನಾಡಿದರೆ ಆರ್. ಚಂದ್ರು ಅವರಿಗೆ ಕ್ಷಮೆ ಕೇಳ್ತಿನಿ. ಅಲ್ಲದೆ ಅವರ ಕುಟುಂಬದವರಿಗೂ ಕ್ಷಮೆ ಕೇಳ್ತಿನಿ ಎಂದರು. ಅಲ್ಲದೆ ಸೆನ್ಸಾರ್ ಬೋರ್ಡ್ ಬಗ್ಗೆ ಕೂಡಾ ಮಾತನಾಡಿದ ವೆಂಕಟ್, ಇಂತಹ ಸೀನ್ಗಳನ್ನು ಸೆನ್ಸಾರ್ ಮಂಡಳಿ ಕಟ್ ಮಾಡಿಸಬೇಕು. ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು. ಇಂತಹ ಹಾಡುಗಳಿಗೆ ಅವಕಾಶ ನೀಡಲೇಬಾರದು ಎಂದು ಹುಚ್ಚ ವೆಂಕಟ್ ಸೆನ್ಸಾರ್ ವಿರುದ್ಧ ಗುಡುಗಿದರು.