ಕರ್ನಾಟಕ

karnataka

By

Published : Aug 6, 2021, 12:51 PM IST

ETV Bharat / sitara

ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯ 11ನೇ ಚಿತ್ರದ ಟೈಟಲ್ ರಿವೀಲ್

ಹೊಂಬಾಳೆ ಫಿಲಂಸ್‌ ಸಂಸ್ಥೆಯ 11ನೇ ಸಿನಿಮಾ ಕಾಂತಾರ. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

hombale
ಕಾಂತಾರ ಟೈಟಲ್

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎಂದು ಹೊಂಬಾಳೆ ಫಿಲಂಸ್‌ ಸಂಸ್ಥೆ ಹೆಗ್ಗಳಿಕೆ ಪಡೆದಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಮಾಲೀಕತ್ವದ ಈ ಸಂಸ್ಥೆ ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾಗಳನ್ನು ಮಾಡುತ್ತಿದೆ.

ನಿನ್ನೆಯಷ್ಟೇ ಹೊಂಬಾಳೆ ಫಿಲಂಸ್ ಸಂಸ್ಥೆಯ 11ನೇ ಸಿನಿಮಾ ಬಗ್ಗೆ ವಿಜಯ್ ಕಿರಗಂದೂರ್ ಸೋಶಿಯಲ್ ಮೀಡಿಯಾದಲ್ಲಿ "ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ" ಎಂಬ ಬರಹವಿರುವ ಪೋಸ್ಟರ್​ ಹಂಚಿಕೊಂಡಿದ್ದರು. ಆದರೆ, ಸಿನಿಮಾದ ಹೆಸರು, ನಿರ್ದೇಶಕ ಹಾಗೂ ನಾಯಕ ಯಾರು ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ.

ನಟ ರಿಷಬ್ ಶೆಟ್ಟಿ

ಚಿತ್ರದ ಟೈಟಲ್ ಕಾಂತಾರ ಎಂದು. ಒಂದು ದಂತಕಥೆ ಅಂತಾ ಟ್ಯಾಗ್ ಲ್ಯಾನ್ ಹೊಂದಿರುವ ಈ ಸಿನಿಮಾನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಬಣ್ಣವನ್ನೂ ಹಚ್ಚುತ್ತಿದ್ದಾರೆ. ಈ ಹಿಂದೆಯೇ ರಿಷಬ್ ಶೆಟ್ಟಿ ಹೊಂಬಾಳೆ ಫಿಲಂಸ್ ಸಂಸ್ಥೆಯ ಜೊತೆ ಒಂದು ಸಿನಿಮಾ ಮಾಡಲು ಮುಂದಾಗಿ, ಮಾತುಕತೆ ನಡೆಸಿದ್ದರು. ಈಗ ಆ ಸಿನಿಮಾನೇ ಕಾಂತಾರ ಎಂದು ಬಹಿರಂಗವಾಗಿದೆ.

ಈ ಸಿನಿಮಾ ಮನುಷ್ಯ ಮತ್ತು ಪರಿಸರದ ಕಥೆ ಒಳಗೊಂಡಿದೆಯಂತೆ. ಚಿತ್ರದ ಪೋಸ್ಟರ್ ನೋಡ್ತಾ ಇದ್ರೆ, ಮಂಗಳೂರಿನ ಕಂಬಳದ ಕಥೆ ಇರಬಹುದು ಎಂಬ ಅನುಮಾನ ಮೂಡುತ್ತದೆ. ಇದೇ ತಿಂಗಳು 27ರಿಂದ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ.

ABOUT THE AUTHOR

...view details