ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​​ವುಡ್​​ಗೆ ಬರ್ತಾರಾ ಹಾಲಿವುಡ್​​ ​- ಬಾಲಿವುಡ್​ ಈ ಮೇರು ನಟರು? - ಬಾಲಿವುಡ್

ಹಾಲಿವುಡ್​​ನ ಮೇರು ನಟ ಬೆನ್ ಕಿಂಗ್​ಸ್ಲೇ ಹಾಗೂ ಬಾಲಿವುಡ್​​ನ ದಿಗ್ಗಜ ಅಮಿತಾಭ್ ಬಚ್ಚನ್ ಸ್ಯಾಂಡಲ್​​​ವುಡ್​​ಗೆ ಬರುವ ಸಾಧ್ಯತೆಯಿದೆ. ಈ ಮಹಾನ್ ನಟರುಗಳನ್ನು ಕನ್ನಡಕ್ಕೆ ಕರೆತರುವ ಜವಾಬ್ದಾರಿ ರಾಷ್ಟ್ರಪ್ರಶಸ್ತಿಗಳ ಪುರಸ್ಕೃತ ನಿರ್ದೇಶಕ ಪಿ.ಶೇಷಾದ್ರಿ ವಹಿಸಿಕೊಂಡಿದ್ದಾರೆ.

ಚಿತ್ರಕೃಪೆ: ಸೋಷಿಯಲ್ ಮೀಡಿಯಾ

By

Published : Jul 17, 2019, 5:24 PM IST

ಬ್ರಿಟಿಷ್ ನಟ ಬೆನ್​​ 50 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಇವರು ಮೋಹನ್ ದಾಸ್​ ಗಾಂಧಿ ಪಾತ್ರದಲ್ಲಿ ನಟಿಸಿದ್ದ ಹಾಲಿವುಡ್​ನ 'ಗಾಂಧಿ' (1982) ಸಿನಿಮಾ ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿತು. ಗ್ರ್ಯಾಮಿ, BAFTA, ಎರಡು ಬಾರಿ ಗೋಲ್ಡನ್ ಗ್ಲೋಬ್ಸ್ ಮತ್ತು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಪುರಸ್ಕೃತ ಈ ಮೇರು ನಟರನ್ನು ಈಗ ಚಂದನವನಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡಿ ಎಂಟು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಪಿ.ಶೇಷಾದ್ರಿ ಸದ್ಯ 'ಮೋಹನದಾಸ' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮಹಾತ್ಮ ಗಾಂಧಿಯವರ ಬಾಲ್ಯ ಆಧರಿಸಿದ ಈ ಸಿನಿಮಾ ಕನ್ನಡ, ಹಿಂದಿ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕ ಬೊಳುವಾರು ಮಹಮದ್ಕುಂಞ್ಅವರ "ಪಾಪು ಗಾಂಧಿ, ಬಾಪು ಗಾಂಧಿ ಆದ ಕಥೆ" ಮತ್ತು ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ ಸತ್ಯದೊಂದಿಗೆ ನನ್ನ ಪ್ರಯೋಗಗಳು ಕೃತಿಗಳನ್ನು ಆಧರಿಸಿದ ಸಿನಿಮಾ.

ನಿರ್ದೇಶಕ ಪಿ.ಶೇಷಾದ್ರಿ

‘ಮೋಹನದಾಸ’ ಸಿನಿಮಾದಲ್ಲಿ ಗಾಂಧೀಜಿ ಅವರ ಆರು ವರ್ಷದ ಬಾಲ್ಯದಿಂದ ಹದಿನಾಲ್ಕು ವರ್ಷದ ಬಾಲ್ಯದವರೆಗಿನ ಕತೆ ಇದೆ. ಆರು ವರ್ಷದ ಬಾಲಕನ ಪಾತ್ರವನ್ನು ಪರಮ್ ಸ್ವಾಮಿ ಮತ್ತು ಹದಿನಾಲ್ಕು ವರ್ಷದ ಬಾಲಕನ ಪಾತ್ರವನ್ನು ಸಮರ್ಥ ಅಭಿನಯಿಸಿದ್ದಾರೆ, ಈಗ ಹಿರಿಯ ಪಾತ್ರಕ್ಕೆ ಬೆನ್​ ಕಿಂಗ್​ಸ್ಲೇ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವರ ಜತೆ ಮಾತುಕತೆಗೆ ಪ್ರಯತ್ನಗಳು ನಡೆದಿವೆ. ಗಾಂಧಿ ಅವರ ತಾಯಿಯ ಪ್ರಾತ್ರದಲ್ಲಿ ಕನ್ನಡದ ಖ್ಯಾತ ನಟಿ ಶೃತಿ ಮತ್ತು ತಂದೆ ಕರಮಚಂದ್ರ ಪಾತ್ರದಲ್ಲಿ ಬಹುಭಾಷಾ ನಟ ಅನಂತ್ ಮಹದೇವನ್ ಅಭಿನಯಿಸಿದ್ದಾರೆ.

ಇನ್ನು ಈಗಾಗಲೇ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಕಿರುಪರಿಚಯದ ಬಯೋಸ್ಕೋಪ್ ಬಿಡುಗಡೆಗೆ ಚಿತ್ರತಂಡ ಶೇಷಾದ್ರಿ ಯೋಜನೆ ಹಾಕಿಕೊಂಡಿದ್ದಾರೆ. ಇದನ್ನು ಬಾಲಿವುಡ್ ಬಿಗ್​ ಬಿ ಅಮಿತಾಭ್ ಅವರ ಕೈಯಲ್ಲಿ ಅನಾವರಣಗೊಳಿಸುವ ಪ್ಲಾನ್​​ ಕೂಡ ಇದೆ. ಇವರು ಒಪ್ಪದಿದ್ದರೆ ಆಮೀರ್ ಖಾನ್​ ಅವರನ್ನು ಕೇಳಿಕೊಳ್ಳಲಿದ್ದಾರಂತೆ.

ABOUT THE AUTHOR

...view details