ಕರ್ನಾಟಕ

karnataka

By

Published : Sep 25, 2020, 1:59 PM IST

ETV Bharat / sitara

ರಚಿತಾ, ಹರಿಪ್ರಿಯಾ ಬಿಟ್ಟು 'ಕಸ್ತೂರಿ ಮಹಲ್'ಗೆ ಬರ್ತಿರೋ ನಾಯಕಿ ಇವರೇ...!

ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ ಮಹಲ್' ಚಿತ್ರಕ್ಕೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 5 ರಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ರುಬಿನ್ ರಾಜ್​ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Kasturi Mahal movie
'ಕಸ್ತೂರಿ ಮಹಲ್'

ಹಿರಿಯ ನಿರ್ದೇಶಕ ದಿನೇಶ್ ಬಾಬು 50ನೇ ಚಿತ್ರ 'ಕಸ್ತೂರಿ ಮಹಲ್'​​​ಗೆ ಕೊನೆಗೂ ನಾಯಕಿ ಫಿಕ್ಸ್ ಆಗಿದ್ದಾರೆ. ರಚಿತಾ ರಾಮ್ ಈ ಚಿತ್ರದಿಂದ ಹೊರ ಹೋದ ನಂತರ ಚಿತ್ರಕ್ಕೆ ಹರಿಪ್ರಿಯಾ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಹರಿಪ್ರಿಯಾ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿಲ್ಲ.

'ಕಸ್ತೂರಿ ಮಹಲ್' ಮುಹೂರ್ತ

ತಮ್ಮ ಚಿತ್ರಕ್ಕಾಗಿ ದಿನೇಶ್ ಬಾಬು ಶಾನ್ವಿ ಶ್ರೀ ವಾತ್ಸವ್​​​ ಅವರನ್ನು ಕರೆ ತಂದಿದ್ದಾರೆ. ಹರಿಪ್ರಿಯಾ ಈ ಚಿತ್ರದಲ್ಲಿ ನಟಿಸಲು ಹೆಚ್ಚು ಸಂಭಾವನೆ ಕೇಳಿದ್ದರಿಂದ ಕೊನೆಗೆ 'ಕಸ್ತೂರಿ ಮಹಲ್'​​​ಗೆ ಶಾನ್ವಿ ಶ್ರೀವಾತ್ಸವ್ ಅವರನ್ನು ಫಿಕ್ಸ್ ಮಾಡಲಾಗಿದೆ. ಕಳೆದ ತಿಂಗಳು ದಿನೇಶ್ ಬಾಬು 'ಕಸ್ತೂರಿ ಮಹಲ್' ಚಿತ್ರದ ಮಹೂರ್ತ ನೆರವೇರಿಸಿದ್ದರು. ಆ ವೇಳೆ ರಚಿತಾ ರಾಮ್ ಕೂಡಾ ಹಾಜರಿದ್ದರು. ಆದರೆ ಚಿತ್ರೀಕರಣ ಆರಂಭವಾಗಬೇಕು ಎಂದುಕೊಳ್ಳುವಷ್ಟರಲ್ಲಿ ರಚಿತಾ ನಿಗೂಢ ಕಾರಣ ಹೇಳಿ ಚಿತ್ರದಿಂದ ಹೊರನಡೆದಿದ್ದರು. ನಂತರ ಹರಿಪ್ರಿಯಾ ಚಿತ್ರಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಶಾನ್ವಿ ಶ್ರೀ ವಾತ್ಸವ್​​ ಈ ಚಿತ್ರದಲ್ಲಿ ನಾಯಕಿ ಆಗಿ ನಟಿಸಲಿದ್ದಾರೆ.

ಶಾನ್ವಿ ಶ್ರೀವಾತ್ಸವ್

'ಕಸ್ತೂರಿ ಮಹಲ್' ಚಿತ್ರಕ್ಕೆ ಆರಂಭದಲ್ಲಿ 'ಕಸ್ತೂರಿ ನಿವಾಸ' ಎಂದು ಹೆಸರಿಡಲಾಗಿತ್ತು. ಆದರೆ ಡಾ. ರಾಜ್​ಕುಮಾರ್ ಸಿನಿಮಾಗಳ ಹೆಸರನ್ನು ಬಳಸಬಾರದು ಎಂಬ ಅಭಿಮಾನಿಗಳ ಒತ್ತಾಯದ ಮೇರೆಗೆ ಹಾಗೂ 'ಕಸ್ತೂರಿ ನಿವಾಸ' ಚಿತ್ರದ ನಿರ್ದೇಶಕ ಭಗವಾನ್ ಸಲಹೆ ಮೇರೆಗೆ ಚಿತ್ರಕ್ಕೆ 'ಕಸ್ತೂರಿ ಮಹಲ್' ಎಂದು ಹೆಸರಿಡಲಾಗಿದೆ. ಅಕ್ಟೋಬರ್ 5 ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಪ್ಯಾರಾನಾರ್ಮಲ್ ಚಟುವಟಿಕೆ ಬಗ್ಗೆ ಹೆಣೆದಿರುವ ಕಥೆಗೆ ರುಬಿನ್ ರಾಜ್ ಬಂಡವಾಳ ಹೂಡಿದ್ದಾರೆ. ಸ್ಕಂದ ಅಶೋಕ್, ಶ್ರುತಿ ಪ್ರಕಾಶ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ABOUT THE AUTHOR

...view details