ಕರ್ನಾಟಕ

karnataka

ETV Bharat / sitara

ಥಿಯೇಟರ್​​​​​​ಗೆ ಲಗ್ಗೆ ಇಟ್ಟ 'ದಶರಥ'; ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ

ಎಂ.ಎಸ್​​​. ರಮೇಶ್ ನಿರ್ದೇಶನದ 'ದಶರಥ' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಬಹಳ ದಿನಗಳ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ.

By

Published : Jul 26, 2019, 5:27 PM IST

'ದಶರಥ'

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ದಶರಥ' ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. 'ಯುದ್ಧಕಾಂಡ' ಚಿತ್ರದ ನಂತರ ರವಿಚಂದ್ರನ್ ಈ ಚಿತ್ರದಲ್ಲಿ ಕರಿಕೋಟು ತೊಟ್ಟು ಲಾಯರ್ ಪಾತ್ರದಲ್ಲಿ ಮಿಂಚಿದ್ದಾರೆ.

ರಾಜ್ಯಾದ್ಯಂತ ಬಿಡುಗಡೆಯಾಯ್ತು 'ದಶರಥ'

ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರನ್ನು ಮೋಡಿ ಮಾಡಿದ್ದು ನಿರೀಕ್ಷಿತ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದ ಹಲವೆಡೆ ಚಿತ್ರ ನೋಡಿದ ಸಿನಿಪ್ರಿಯರು 'ದಶರಥನ' ಗುಣಗಾನ ಮಾಡಿದ್ದಾರೆ. ಇನ್ನು 'ದಶರಥ' ಚಿತ್ರಕ್ಕೆ ಎಂ.ಎಸ್​​​​. ರಮೇಶ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಬಹಳ ದಿನಗಳ ನಂತರ ಸೋನು ಅಗರ್​​ವಾಲ್ ಹಾಗೂ ಅಭಿರಾಮಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು 'ದಶರಥ' ಚಿತ್ರದಲ್ಲಿ ಕ್ರೇಜಿಸ್ಟಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ರವಿಚಂದ್ರನ್​​

'ಯಾರ್ ಯಾರ್ ಗೋರಿ ಮೇಲೆ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಭಿಲಾಶ್​​​​​ ಈ ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದು ನೋಡುಗರ ಗಮನ ಸೆಳೆದಿದ್ದಾರೆ. ಇನ್ನು ಅಭಿಲಾಶ್ ಜೊತೆ ಬಿಗ್​​​​​​​​​​​ಬಾಸ್ ಖ್ಯಾತಿಯ ಮೇಘಶ್ರೀ ಕಾಣಿಸಿದ್ದಾರೆ. ನಗರದ ಸಂತೋಷ್ ಚಿತ್ರಮಂದಿರದಲ್ಲಿ ನಿರ್ದೇಶಕ ರಮೇಶ್​​​​, ನಟ ಅಭಿಲಾಶ್ ಹಾಗೂ ಮೇಘಶ್ರೀ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಸಂಭ್ರಮಿಸಿದರು. ಅಲ್ಲದೆ ಚಿತ್ರದಲ್ಲಿ ಸಂಭಾಷಣೆ ಪವರ್​​ಫುಲ್​​​​ ಆಗಿದ್ದು ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್​​​​​​​​​​ಖುಶ್ ಆಗಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡ ರಾಜ್ಯಾದ್ಯಂತ ಪ್ರಮುಖ ಥಿಯೇಟರ್​​​​ಗಳಿಗೆ ಭೇಟಿ ನೀಡುವುದಾಗಿ ನಿರ್ದೇಶಕ ರಮೇಶ್ ಹೇಳಿದ್ದಾರೆ.

ಅಭಿರಾಮಿ

For All Latest Updates

TAGGED:

ABOUT THE AUTHOR

...view details