ಕರ್ನಾಟಕ

karnataka

By

Published : Jan 27, 2020, 5:33 PM IST

ETV Bharat / sitara

ಐದು ವರ್ಷಗಳ ನಂತರ ಮತ್ತೆ ಸ್ಯಾಂಡಲ್​​ವುಡ್​ಗೆ ಬಂದ್ರು ಫೈರಿಂಗ್ ಸ್ಟಾರ್​​​​​​

2015 ರಲ್ಲಿ ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಪರಪಂಚ' ಚಿತ್ರಕ್ಕಾಗಿ 'ಹುಟ್ಟಿದಾ ಊರನು ಬಿಟ್ಟು ಬಂದಾ ಮೇಲೆ' ಎಂಬ ಹಾಡನ್ನು ಹಾಡಿದ್ದರು. ಇದೀಗ ಸುಮಾರು 5 ವರ್ಷಗಳ ನಂತರ 'ಮಾಜರ್' ಎಂಬ ಚಿತ್ರಕ್ಕೆ ಹುಚ್ಚ ವೆಂಕಟ್ ಹಾಡೊಂದನ್ನು ಹಾಡಿದ್ದಾರೆ.

Firing star
ಫೈರಿಂಗ್ ಸ್ಟಾರ್​​​​​​

ಅಲ್ಲಿ, ಇಲ್ಲಿ ಅಲೆಯುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕ್ ಮಾಡಿಕೊಂಡಿದ್ದ ಫೈರಿಂಗ್​ ಸ್ಟಾರ್ ಹುಚ್ಚು ವೆಂಕಟ್ ಮತ್ತೆ ಗಾಂಧಿನಗರ ಪ್ರವೇಶಿಸಿದ್ದಾರೆ. ಹುಚ್ಚ ವೆಂಕಟ್ ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ. ಆದರೆ ಚಿತ್ರವೊಂದಕ್ಕೆ ಹಾಡು ಹಾಡಿದ್ದಾರೆ.

ಮತ್ತೆ ಗಾಂಧಿನಗರಕ್ಕೆ ಬಂದ್ರು ಹುಚ್ಚ ವೆಂಕಟ್

2015 ರಲ್ಲಿ ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಪರಪಂಚ' ಚಿತ್ರಕ್ಕಾಗಿ 'ಹುಟ್ಟಿದಾ ಊರನು ಬಿಟ್ಟು ಬಂದಾ ಮೇಲೆ' ಎಂಬ ಹಾಡನ್ನು ಹಾಡಿದ್ದರು. ಇದೀಗ ಸುಮಾರು 5 ವರ್ಷಗಳ ನಂತರ 'ಮಾಜರ್' ಎಂಬ ಚಿತ್ರಕ್ಕೆ ಹುಚ್ಚ ವೆಂಕಟ್ ಹಾಡೊಂದನ್ನು ಹಾಡಿದ್ದಾರೆ. ಇದು ಸಾಮಾಜಿಕ ಸಂದೇಶ ಸಾರುವ ಚಿತ್ರವಾಗಿದ್ದು ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದನ್ನು ಈ ಚಿತ್ರದಲ್ಲಿ ಎಳೆ ಎಳೆಯಾಗಿ ತೋರಿಸಲಾಗಿದೆಯಂತೆ. 'ಧರೆಗೆ ದೊಡ್ಡವರು' ಎಂಬ ಹೆಣ್ಣಿನ ಕುರಿತಾದ ಈ ಹಾಡನ್ನು ಹುಚ್ಚ ವೆಂಕಟ್ ಹಾಡಿದ್ದಾರೆ. ಈ ಹಾಡಿಗೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಚಿತ್ರವನ್ನು ಲೋಕಲ್ ಲೋಕಿ ನಿರ್ದೇಶಿಸಿದ್ದಾರೆ. ಶೀಘ್ರದಲ್ಲೇ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.

For All Latest Updates

ABOUT THE AUTHOR

...view details