ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ಗೆ ಕರೆ ಕೊಟ್ಟಿದ್ದು , ನಾಳಿನ ಬಂದ್ಗೆ ಕನ್ನಡ ಚಿತ್ರರಂಗದ ಬೆಂಬಲ ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್ ಹೇಳಿದ್ದಾರೆ.
ನಾಳಿನ ಬಂದ್ಗೆ ಚಿತ್ರರಂಗದ ಬೆಂಬಲ ಇಲ್ಲ...ಫಿಲ್ಮ್ ಚೇಂಬರ್ ಅಧ್ಯಕ್ಷ ಡಿ.ಆರ್. ಜೈರಾಜ್ ಸ್ಪಷ್ಟನೆ - ನಾಳಿನ ಬಂದ್ಗೆ ಚಿತ್ರರಂಗದ ಬೆಂಬಲ ಇಲ್ಲ
ನಾಳೆ ನಡೆಯುವ ಭಾರತ್ ಬಂದ್ಗೆ ಕನ್ನಡ ಚಿತ್ರರಂಗವಾಗಲಿ, ವಾಣಿಜ್ಯ ಮಂಡಳಿಯಾಗಲಿ ಬೆಂಬಲ ನೀಡುವುದಿಲ್ಲ. ಬಂದ್ಗೆ ಬೆಂಬಲ ನೀಡುವ ಬದಲಿಗೆ ತಟಸ್ಥವಾಗಿ ಇರಲು ನಿರ್ಧರಿಸಿದ್ದೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಸ್ಪಷ್ಟಪಡಿಸಿದ್ದಾರೆ.
![ನಾಳಿನ ಬಂದ್ಗೆ ಚಿತ್ರರಂಗದ ಬೆಂಬಲ ಇಲ್ಲ...ಫಿಲ್ಮ್ ಚೇಂಬರ್ ಅಧ್ಯಕ್ಷ ಡಿ.ಆರ್. ಜೈರಾಜ್ ಸ್ಪಷ್ಟನೆ Film chamber president Jayraj](https://etvbharatimages.akamaized.net/etvbharat/prod-images/768-512-5628178-thumbnail-3x2-bandh.jpg)
ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗ ಆರ್ಥಿಕ ಸಂಕಷ್ಟದಲ್ಲಿದೆ, ಹೀಗಿರುವಾಗ ಬಂದ್ಗೆ ಬೆಂಬಲ ನೀಡಿ ನಷ್ಟ ಉಂಟು ಮಾಡಿಕೊಳ್ಳಲು ಆಗುವುದಿಲ್ಲ, ಅಲ್ಲದೆ ಬಂದ್ಗೆ ಬೆಂಬಲ ಕೊಡುವಂತೆ ಇದುವರೆಗೂ ಯಾವುದೇ ಸಂಘಟನೆಗಳು ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿಲ್ಲ. ಹಾಗಾಗಿ ನಾಳೆ ನಡೆಯುವ ಭಾರತ್ ಬಂದ್ಗೆ ಕನ್ನಡ ಚಿತ್ರರಂಗವಾಗಲಿ, ವಾಣಿಜ್ಯ ಮಂಡಳಿಯಾಗಲಿ ಬೆಂಬಲ ನೀಡುವುದಿಲ್ಲ. ಈ ಬಗ್ಗೆ ನಾನು ಚಿತ್ರರಂಗದ ಗಣ್ಯರೊಂದಿಗೆ ಮಾತನಾಡಿದ್ದೇನೆ. ನಾಳೆ ಎಂದಿನಂತೆ ಶೂಟಿಂಗ್, ಚಿತ್ರಪ್ರದರ್ಶನ ಸೇರಿದಂತೆ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ನಡೆಯಲಿವೆ. ಬಂದ್ಗೆ ಬೆಂಬಲ ನೀಡುವ ಬದಲಿಗೆ ತಟಸ್ಥವಾಗಿ ಇರಲು ನಿರ್ಧರಿಸಿದ್ದೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಸ್ಪಷ್ಟಪಡಿಸಿದ್ದಾರೆ.