ಈ ಹಿಂದೆ ಬಡ್ಡಿಮಗನ್ ಲೈಫು ಸಿನಿಮಾದ ಏನ್ ಚಂದನೊ ತಕ್ಕೋ ಹಾಡು ಸಖತ್ ಸುದ್ದಿಯಾಗಿ, ಕೆಲ ಆರೋಪಗಳೂ ಕೇಳಿ ಬಂದಿದ್ವು. ಈ ಹಾಡಿನ ಗಾಯಕ ನವೀನ್ ಸಜ್ಜು ವಿರುದ್ಧವೂ ಆರೋಪಗಳು ಕೇಳಿ ಬಂದಿದ್ವು. ಇದಕ್ಕೆ ಕಾರಣ ಹಾಡಿನಲ್ಲಿ ಒಂದು ಸಮುದಾಯವನ್ನು ಕೀಳಾಗಿ ಬಿಂಬಿಸಲಾಗಿದೆ ಎನ್ನುವುದು.
ಹೌದು, ನಿನಗಾಗಿ ವೀರು ಬರೆದಿರುವ ಈ ಹಾಡಿನ ಮೊದಲಿಗೆ 'ಆ ದೊಡ್ಮನೆ ಗೌಡನ್ ಮಗ್ಳು ಆ ಮುಂಡ್ಲಟ್ಟಿ ಆ ಗಂಡ್ ಜೊತೆಲಿ ಓಡ್ ವಂಟೋದ್ಲಂತೆ' ಎಂಬ ಸಂಭಾಷಣೆ ಇದೆ. ಇದನ್ನು ಗಮನದಲ್ಲಿಸಿ ಫಿಲ್ಮ್ ಚೇಂಬರ್ಗೆ ದೂರನ್ನೂ ನೀಡಲಾಗಿತ್ತು. ನಂತ್ರ ಆ ಸಂಭಾಷಣೆಯಲ್ಲಿ ಗೌಡ ಎಂಬ ಪದವನ್ನು ತೆಗೆಯಲಾಗುವುದು ಅಂತ ಹೇಳಲಾಗಿತ್ತು.