ಕರ್ನಾಟಕ

karnataka

By

Published : Jul 10, 2020, 4:36 PM IST

ETV Bharat / sitara

ಗಂಧದಗುಡಿ ಟೈಟಲ್ ಮರು‌ ಬಳಕೆಬೇಡ .. ರಾಜ್​ ಅಭಿಮಾನಿಗಳಿಂದ ಆಗ್ರಹ

ಅಂತಾರಾಷ್ಟ್ರೀಯ ಕಥಾಹಂದರವಿರುವ ಚಿತ್ರವನ್ನು ಲಂಡನ್, ಆಫ್ರಿಕಾ ಹಾಗೂ ಹಾಂಕಾಂಗ್ ಫಾರೆಸ್ಟ್​ಗಳಲ್ಲಿ ಚಿತ್ರೀಕರಣ ಮಾಡಲು ಆಲೋಚನೆ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿ ದಚ್ಚು ಫ್ಯಾನ್ಸ್ ಥ್ರಿಲ್ ಆಗಿದ್ದರು..

Rajendra Singh Babu
ರಾಜೇಂದ್ರ ಸಿಂಗ್ ಬಾಬು

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್​ನಲ್ಲಿ ಮೂಡಿ ಬರುವ ಚಿತ್ರಕ್ಕೆ ಗಂಧದ ಗುಡಿ ಎಂದು ಹೆಸರಿಡುತ್ತಾರೆ ಎಂಬ ಗಾಳಿ ಸುದ್ದಿ ಹರಡಿದೆ. ಆದರೆ, ಡಾ.ರಾಜ್​ ಅಭಿಮಾನಿಗಳು ಚಿತ್ರಕ್ಕೆ ಹೆಸರಿಡದಂತೆ ನಿರ್ದೇಶಕರಿಗೆ ಆಗ್ರಹಿಸಿದ್ದಾರೆ.

ರಾಜ್​ ಅಭಿಮಾನಿಗಳ ಆಗ್ರಹ

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ದರ್ಶನ್​ ಜೊತೆ ಸೇರಿ 'ರಾಜ ವೀರ ಮದಕರಿ ನಾಯಕ' ಸಿನಿಮಾ ಮಾಡುತ್ತಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಆದರೆ, ಆ ಚಿತ್ರ ಇನ್ನೂ ಸೆಟ್ಟೇರಿಲ್ಲ. ಅದಕ್ಕೂ ಮೊದಲೇ ಇದೇ ಕಾಂಬಿನೇಷನ್​ನಲ್ಲಿ ಮತ್ತೊಂದು ಚಿತ್ರ ಮೂಡಿ ಬರಲಿದೆ. ಆ ಚಿತ್ರದಲ್ಲಿ ಡಿ ಬಾಸ್ ಅರಣ್ಯಾಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡಿತ್ತು.

ಗಂಧದ ಗುಡಿ ಚಿತ್ರ

ಅಂತಾರಾಷ್ಟ್ರೀಯ ಕಥಾಹಂದರವಿರುವ ಚಿತ್ರವನ್ನು ಲಂಡನ್, ಆಫ್ರಿಕಾ ಹಾಗೂ ಹಾಂಕಾಂಗ್ ಫಾರೆಸ್ಟ್​ಗಳಲ್ಲಿ ಚಿತ್ರೀಕರಣ ಮಾಡಲು ಆಲೋಚನೆ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿ ದಚ್ಚು ಫ್ಯಾನ್ಸ್ ಥ್ರಿಲ್ ಆಗಿದ್ದರು. ಅಲ್ಲದೆ ಈ ಚಿತ್ರ ಕಾಡಿನ ಬಗ್ಗೆ ಕುರಿತಾದ ಚಿತ್ರವಾದ್ದರಿಂದ ಸಿನಿಮಾಕ್ಕೆ ಅಣ್ಣಾವ್ರು ಅಭಿನಯದ "ಗಂಧದ ಗುಡಿ" ಟೈಟಲ್‌ನ ಮರುಬಳಕೆ ಮಾಡಲಾಗುತ್ತದೆ ಎಂಬ ವಿಷಯ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡಿತ್ತು.

ಈ ಕುರಿತಂತೆ ರಾಜ್ ಅಭಿಮಾನಿಗಳು ಚಿತ್ರಕ್ಕೆ ಗಂಧದ ಗುಡಿ ಟೈಟಲ್ ಬಳಸಬಾರದು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಆಗ್ರಹಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗುತ್ತಿದೆ.

ABOUT THE AUTHOR

...view details