ಕರ್ನಾಟಕ

karnataka

ETV Bharat / sitara

ಮುಂಬೈನಲ್ಲಿ 'ಗಾಳಿಪಟ' ಬಿಡ್ತಿದ್ದಾರೆ ಭಟ್ರು... ವಿಕಟಕವಿಗೆ ಜನ್ಯಾ ಸಾಥ್​

'ಪಂಚತಂತ್ರ' ಸಕ್ಸಸ್ ಖುಷಿಯಲ್ಲಿರುವ ನಿರ್ದೇಶಕ ಯೋಗರಾಜ್​​​ ಭಟ್​​, ಗಾಳಿಪಟ-2 ಸಿನಿಮಾವನ್ನು ಕೈ ಬಿಟ್ಟಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ಗಾಳಿಸುದ್ದಿಗೆ ಇದೀಗ ನಿರ್ದೇಶಕ ಯೋಗರಾಜ್​ಭಟ್ ಉತ್ತರ ನೀಡಿದ್ದಾರೆ.

By

Published : May 6, 2019, 6:06 PM IST

ಯೋಗರಾಜ್ ​​ಭಟ್

ಸದ್ಯಕ್ಕೆ ಭಟ್ಟರು ಮುಂಬೈನಲ್ಲಿದ್ದಾರೆ. ಅವರ ಜೊತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಕೂಡಾ ಇದ್ದಾರೆ. ಅರೆ..ಇಬ್ಬರೂ ಮುಂಬೈನಲ್ಲಿ ಏನು ಮಾಡುತ್ತಿದ್ದಾರೆ ಎಂದು ಯೋಚಿಸಬೇಡಿ. ಈಗಾಗಲೇ ಭಟ್ಟರು ಗಾಳಿಪಟ-2 ಸಿನಿಮಾ ಕೆಲಸಗಳಿಗೆ ಚಾಲನೆ ನೀಡಿದ್ದು ಮುಂಬೈ ಸ್ಟುಡಿಯೋವೊಂದರಲ್ಲಿ ಚಿತ್ರದ ಹಾಡುಗಳಿಗೆ ರಾಗ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಡುಗಳ ರೆಕಾರ್ಡಿಂಗ್ ಮುಗಿಸಿದ ಕೂಡಲೇ ಭಟ್ಟರು ಶೂಟಿಂಗ್ ಆರಂಭಿಸಲಿದ್ದಾರೆ. ಯೋಗರಾಜ್ ಭಟ್ ಹಾಗೂ ಜನ್ಯಾ ಜೊತೆಗಿರುವ ಫೋಟೋವೊಂದು ರಿವೀಲ್ ಆಗಿದ್ದು ಈ ಮೂಲಕ ಭಟ್ಟರು ಗಾಳಿಪಟ-2 ಕೈಬಿಟ್ಟಿದ್ದಾರೆ ಎಂಬುವವರಿಗೆ ಉತ್ತರ ಕೊಟ್ಟಿದ್ದಾರೆ.

ಯೋಗರಾಜ್​​​ ಭಟ್, ಅರ್ಜುನ್ ಜನ್ಯಾ

ಗಾಳಿಪಟ-2 ನಿರ್ದೇಶನ ಮಾಡುವುದಾಗಿ ಯೋಗರಾಜ್​​ ಭಟ್ ಕೆಲವು ದಿನಗಳ ಮುನ್ನವೇ ಅನೌನ್ಸ್ ಮಾಡಿದ್ದರು. ಚಿತ್ರಕ್ಕಾಗಿ ಐವರು ನಾಯಕಿಯರನ್ನೂ ಕೂಡಾ ಕರೆತರುತ್ತಿರುವುದಾಗಿ ಅವರು ಹೇಳಿದ್ದರು. ಸದ್ಯಕ್ಕೆ ಶರ್ಮಿಳಾ ಮಾಂಡ್ರೆ, ಸೋನಲ್ ಮೊಂಟೆರಿ ಆಯ್ಕೆಯಾಗಿದ್ದು ಉಳಿದ ಮೂವರು ನಾಯಕಿಯರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ.

ಗಾಳಿಪಟ-2

ಇನ್ನು ಚಿತ್ರಕ್ಕೆ ಶರಣ್​, ರಿಷಿ, ಪವನ್​​​​ ಕುಮಾರ್ ಪ್ರಮುಖ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು, ಮಂಡ್ಯ, ಧಾರವಾಡದಿಂದ ಬಂದ ಮೂವರು ಯುವಕರ ಬಾಳು, ಗೋಳು, ಪ್ರೇಮ, ಶಿಕ್ಷಣ, ವೃತ್ತಿಯ ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ಮಹೇಶ್​ ದಾನನ್ನವರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕರ್ನಾಟಕದ ಕರಾವಳಿ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಸಲು ಭಟ್ಟರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ

For All Latest Updates

TAGGED:

ABOUT THE AUTHOR

...view details