ಕರ್ನಾಟಕ

karnataka

By

Published : Dec 11, 2020, 12:04 PM IST

ETV Bharat / sitara

ಬಹಳ ದಿನಗಳ ನಂತರ ಹೊಸ ಸಿನಿಮಾವೊಂದನ್ನು ಘೋಷಿಸಿದ ನಿರ್ದೇಶಕ ಎಸ್​​​. ನಾರಾಯಣ್​​

ಬಹಳ ದಿನಗಳಿಂದ ಸಿನಿಮಾ ನಿರ್ದೇಶನದಿಂದ ದೂರ ಉಳಿದಿದ್ದ ಎಸ್​​​​​. ನಾರಾಯಣ್, ಈಗ ಹೊಸ ಸಿನಿಮಾವೊಂದನ್ನು ಘೋಷಿಸಿದ್ದಾರೆ. ಆದರೆ ಅದು ಯಾವ ಸಿನಿಮಾ, ಕಲಾವಿದರು ಯಾರು ಎಂಬುದರ ಬಗ್ಗೆ ನಾರಾಯಣ್ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕೆಲವೇ ದಿನಗಳಲ್ಲಿ ಈ ಬಗ್ಗೆ ತಿಳಿಸುವುದಾಗಿ ನಾರಾಯಣ್ ಹೇಳಿಕೊಂಡಿದ್ದಾರೆ.

S Narayan
ಎಸ್​​​.ನಾರಾಯಣ್​​

ಆದಿತ್ಯ ಅಭಿನಯದ ಸಿನಿಮಾವೊಂದನ್ನು ಎಸ್. ನಾರಾಯಣ್ ನಿರ್ದೇಶಿಸುವ ಸಾಧ್ಯತೆ ಇದೆ ಎಂಬ ಮಾತು ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಎಸ್. ನಾರಾಯಣ್ ಕೂಡಾ ಹೇಳಿದ್ದರು. ಆದರೆ ಆ ಚಿತ್ರ ಅರಂಭವಾಗಿರಲಿಲ್ಲ. ಆದರೆ ಇದೀಗ 2021 ಜನವರಿ 1 ರಂದು ಹೊಸ ಚಿತ್ರವನ್ನು ಆರಂಭಿಸುವುದಾಗಿ ಎಸ್​. ನಾರಾಯಣ್ ಘೋಷಿಸಿದ್ದಾರೆ.

ಎರಡು ವರ್ಷಗಳ ಹಿಂದೆ ತಮ್ಮ ಮಗ ಪಂಕಜ್ ಅಭಿನಯದ ಸಿನಿಮಾವೊಂದನ್ನು ಎಸ್.ನಾರಾಯಣ್ ಆರಂಭಿಸಿದ್ದರು. ಆದರೆ ಆ ಸಿನಿಮಾ ಪೂರ್ತಿಯಾಗಲಿಲ್ಲ. ಆ ಸಿನಿಮಾ ಬಿಟ್ಟು ಹೊಸ ಸಿನಿಮಾವೊಂದನ್ನು ನಾರಾಯಣ್ ನಿರ್ದೇಶಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಕೊನೆಗೂ ಆ ಚಿತ್ರ ಮಾಡುತ್ತಿರುವುದಾಗಿ ನಾರಾಯಣ ಈಗ ಹೇಳಿದ್ದಾರೆ. ಈ ಸಿನಿಮಾ ಯಾವುದು...? ಕಲಾವಿದರು ಯಾರು..? ಯಾರು ನಿರ್ಮಾಣ ಮಾಡುತ್ತಾರೆ..? ಎಂಬುದು ಸೇರಿ ಬೇರೆ ಯಾವ ವಿಚಾರವನ್ನೂ ಎಸ್. ನಾರಾಯಣ್ ಬಿಟ್ಟುಕೊಟಿಲ್ಲ. ಈ ಹಿಂದೆ ಘೋಷಿಸಿದ್ದ ಆದಿತ್ಯ ಅಭಿನಯದ ಚಿತ್ರವನ್ನೇ ಅವರು ಪ್ರಾರಂಭಿಸುವುದಕ್ಕೆ ಹೊರಟಿದ್ದಾರಾ ಅಥವಾ ಇದು ಹೊಸ ಸಿನಿಮಾನಾ ಎಂಬುದರ ಬಗ್ಗೆ ನಾರಾಯಣ್ ಮಾತನಾಡುತ್ತಿಲ್ಲ. ಸದ್ಯದಲ್ಲೇ ಒಂದಿಷ್ಟು ಹೊಸ ವಿಷಯಗಳೊಂದಿಗೆ ಮಾಧ್ಯಮದ ಎದುರು ಬರುವುದಾಗಿ ಅವರು ಹೇಳಿಕೊಂಡಿದ್ದಾರೆ. ಚಿತ್ರದ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುವ ನಾರಾಯಣ್​​​, ಸದ್ಯದಲ್ಲೇ ಈ ವಿಚಾರದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿಕೊಂಡಿದ್ದಾರೆ.

ABOUT THE AUTHOR

...view details